<p><strong>ಠಾಣಗುಂದಿ</strong> (ಯರಗೋಳ): ‘ಕನ್ನಡ ನಾಡು ಶಿಲ್ಪ, ಕಲೆ, ಸಾಹಿತ್ಯ, ಸಂಸ್ಕೃತಿ, ಸಹಿಷ್ಣತೆಗೆ ಹೆಸರಾಗಿ ಉಸಿರಾಗಿದೆ. ಇಡೀ ಭಾರತದಲ್ಲಿಯೇ ಕರ್ನಾಟಕದಷ್ಟು ವೈವಿಧ್ಯಮಯ ಭೌಗೋಳಿಕ ಪರಿಸರ, ಭಾಷಾ ಸಂಪತ್ತು ಇನ್ನೊಂದು ರಾಜ್ಯಕ್ಕಿಲ್ಲ’ ಎಂದು ಶಿಕ್ಷಕ ರಾಜೇಂದ್ರಕುಮಾರ ಮುದ್ನಾಳ್ ಹೇಳಿದರು.</p>.<p>ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಕನ್ನಡ ನಾಡು ನುಡಿಯ ಬಗ್ಗೆ ಉಪನ್ಯಾಸ ನೀಡಿದರು.</p>.<p>ಕನ್ನಡ, ಕನ್ನಡಿಗ, ಕರ್ನಾಟಕ ಎಂಬ ಭಾವನೆ ನಗರ ಕೇಂದ್ರದಲ್ಲಿ ಅಂಚಿನ ಸ್ಥಿತಿ ತಲುಪಿದೆ. ಗ್ರಾಮೀಣ ಭಾಗಗಳಲ್ಲಿ ಕನ್ನಡ ಇನ್ನು ಜೀವಂತವಾಗಿದೆ. ಆದರೆ ಮಾರುಕಟ್ಟೆ ವ್ಯವಸ್ಥೆಯಿಂದ ಗ್ರಾಮೀಣ ಭಾಗದಲ್ಲಿನ ಕನ್ನಡ ಕಣ್ಮರೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.</p>.<p>ಪ್ರಭಾರಿ ಮುಖ್ಯ ಶಿಕ್ಷಕ ಶರಣಪ್ಪ ಮಾತನಾಡಿದರು. ಶಿಕ್ಷಕ ಶಿವಶಂಕರ ಪೋರ್ಲ ನಿರೂಪಿಸಿದರು. ಚೆನ್ನಬಸವ ವಂದಿಸಿದರು. ಜ್ಯೋತಿ ಸೇರಿದಂತೆ ಅನೇಕರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಠಾಣಗುಂದಿ</strong> (ಯರಗೋಳ): ‘ಕನ್ನಡ ನಾಡು ಶಿಲ್ಪ, ಕಲೆ, ಸಾಹಿತ್ಯ, ಸಂಸ್ಕೃತಿ, ಸಹಿಷ್ಣತೆಗೆ ಹೆಸರಾಗಿ ಉಸಿರಾಗಿದೆ. ಇಡೀ ಭಾರತದಲ್ಲಿಯೇ ಕರ್ನಾಟಕದಷ್ಟು ವೈವಿಧ್ಯಮಯ ಭೌಗೋಳಿಕ ಪರಿಸರ, ಭಾಷಾ ಸಂಪತ್ತು ಇನ್ನೊಂದು ರಾಜ್ಯಕ್ಕಿಲ್ಲ’ ಎಂದು ಶಿಕ್ಷಕ ರಾಜೇಂದ್ರಕುಮಾರ ಮುದ್ನಾಳ್ ಹೇಳಿದರು.</p>.<p>ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಕನ್ನಡ ನಾಡು ನುಡಿಯ ಬಗ್ಗೆ ಉಪನ್ಯಾಸ ನೀಡಿದರು.</p>.<p>ಕನ್ನಡ, ಕನ್ನಡಿಗ, ಕರ್ನಾಟಕ ಎಂಬ ಭಾವನೆ ನಗರ ಕೇಂದ್ರದಲ್ಲಿ ಅಂಚಿನ ಸ್ಥಿತಿ ತಲುಪಿದೆ. ಗ್ರಾಮೀಣ ಭಾಗಗಳಲ್ಲಿ ಕನ್ನಡ ಇನ್ನು ಜೀವಂತವಾಗಿದೆ. ಆದರೆ ಮಾರುಕಟ್ಟೆ ವ್ಯವಸ್ಥೆಯಿಂದ ಗ್ರಾಮೀಣ ಭಾಗದಲ್ಲಿನ ಕನ್ನಡ ಕಣ್ಮರೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.</p>.<p>ಪ್ರಭಾರಿ ಮುಖ್ಯ ಶಿಕ್ಷಕ ಶರಣಪ್ಪ ಮಾತನಾಡಿದರು. ಶಿಕ್ಷಕ ಶಿವಶಂಕರ ಪೋರ್ಲ ನಿರೂಪಿಸಿದರು. ಚೆನ್ನಬಸವ ವಂದಿಸಿದರು. ಜ್ಯೋತಿ ಸೇರಿದಂತೆ ಅನೇಕರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>