ಸಾರ್ವಕಾಲಿಕ ಬತ್ತದ ಗಂಗೆ: ಹಲವುಕಲ್ಲೇಶ್ವರ ದೇಗುಲಕ್ಕೆ ಹೊಂದಿಕೊಂಡಂತೆ ತೀರ್ಥ (ಬಾವಿ) ಕೊಂಡವಿದೆ. ಹಲವು ಮೆಟ್ಟಿಲುಗಳು, ಚೌಕಾಕಾರದ ವಿನ್ಯಾಸಯುಳ್ಳ ಬಾವಿಯ ನೀರು ಸರ್ವಕಾಲದಲ್ಲೂ ಬತ್ತದ ಜಲಧಾರೆಯಾಗಿ ಸದಾ ತುಂಬಿರುತ್ತದೆ. ಬಹು ಕಾಲದಿಂದಲೂ ಜನತೆ ಭಯ, ಭಕ್ತಿಯಿಂದ ಇಲ್ಲಿಗೆ ಆಗಮಿಸಿ ದರ್ಶನ ಪಡೆದುಕೊಳ್ಳುತ್ತಾರೆ. ಪ್ರತಿ ಶನಿವಾರ, ಅಮಾವಾಸ್ಯೆ ಹಬ್ಬ ಹರಿದಿನಗಳಲ್ಲಿ ಜನಸಂದಣಿಯೇ ಇಲ್ಲಿ ನೆರೆದು ಆಚಾರ–ವಿಚಾರಗಳೆಂಬ ಧಾರ್ಮಿಕ ಕಾರ್ಯಕೈಗೊಂಡು ಪುನೀತರಾಗುತ್ತಾರೆ.