ನಂತರ ಮಾತನಾಡಿದ ಅವರು, ಸದೃಢ ದೇಶಕ್ಕಾಗಿ ಮೋದಿಯವರ ಅವಶ್ಯಕತೆ ಇದೆ. ಭ್ರಷ್ಟಾಚಾರ ರಹಿತ, ಕಳಂಕ ರಹಿತ ವ್ಯಕ್ತಿಯಿಂದ ಮಾತ್ರ ದೇಶದ ಉದ್ಧಾರ ಸಾಧ್ಯ. ಮೋದಿ ತಮಗಾಗಿ ಏನೂ ಮಾಡದೆ ದೇಶದ ಹಿತಕ್ಕಾಗಿ ಹಗಲಿರುಳು ದಣಿವರಿಯದೆ ದುಡಿಯುತ್ತಾರೆ. ಅಂತಹ ಪ್ರಧಾನಿಯನ್ನು ಪಡೆದ ನಾವೇ ಧನ್ಯರು. ಅವರ ಸೇವೆ ನಿರಂತರವಾಗಿ ನಡೆಯಲಿ ಎಂದು ನಾನು ಬಯಸಿ ಹರಕೆ ಹೊತ್ತಿದ್ದೆ. ನನ್ನ ಹರಕೆಯಂತೆ ಮತ್ತೆ ಅವರು ಪ್ರಧಾನಿಯಾಗಿರುವಕ್ಕೆ ಸಂತಸಕ್ಕೆ ಪಾರವೆ ಇಲ್ಲ ಎಂದು ಹೇಳಿದರು.