‘ಐದು ಎಕರೆಯಲ್ಲಿ ಭತ್ತ ನಾಟಿ ಮಾಡಿದ್ದೇವೆ. ಭರ್ಜರಿ ಲಾಭದ ನಿರೀಕ್ಷೆ ಇತ್ತು. ಆದರೆ, ಮಳೆ, ಗಾಳಿಯಿಂದ ನಮ್ಮೆಲ್ಲ ನಿರೀಕ್ಷೆಗಳು ಮಣ್ಣು ಪಾಲಾಗಿವೆ. ಹೀಗಾಗಿ ಪೈರು ಹಸಿರಿದ್ದರೂ ಕೊಯ್ಲು ಮಾಡುತ್ತಿದ್ದೇವೆ. ಬಂದಷ್ಟು ಬರಲಿ. ಮತ್ತೊಂದು ಬಾರಿ ಮಳೆ, ಬಿರುಗಾಳಿ ಬೀಸಿದರೆ ಕಾಳುಗಳೆಲ್ಲ ಉದುರಿ ಹೋಗುತ್ತಿವೆ. ಇತ್ತೀಚೆಗೆ ಸುರಿದ ಮಳೆಗೆ ಕಾಳು ಮೊಳಕೆ ಬಂದಿವೆ’ ಎಂದು ತಾಲ್ಲೂಕಿನ ಜೀನಕೇರಾ ರೈತ ತಾಯಪ್ಪ ಹೊಸಮನಿ ನೋವಿನಿಂದ ನುಡಿದರು.