ಹಳ್ಳದಲ್ಲಿ ಜಿಗಳೆಗಳು ಹೆಚ್ಚಾಗಿದ್ದು, ಕಾಲಿಗೆ ಗಾಯವಾದವರು, ಹಳ್ಳದಾಟಲು ಹಿಂಜರಿಯುತ್ತಿದ್ದಾರೆ. ಹಲವರಿಗೆ ಕಾಲಿಗೆ ಮೆತ್ತಿಕೊಂಡ ಜಿಗಳೆಗಳಿಂದ ರಕ್ತ ಸ್ರಾವವಾಗಿದೆ. ತಾಂಡಾ ನಿವಾಸಿಗಳ ನೋವು ಯಾರು ಕೇಳೋರಿಲ್ಲದಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದೆ ಎಂದು ತಾಂಡಾ ನಿವಾಸಿಗಳ ಆಗ್ರಹವಾಗಿದೆ.