<p><strong>ಹುಣಸಗಿ</strong>: ಮಳೆಗಾಲಕ್ಕೆ ಕ್ಷಣಗಣನೆ ಆರಂಭವಾಗಿದ್ದು, ತಾಲ್ಲೂಕಿನಲ್ಲಿ ವನ ಸಂಪತ್ತು ಹೆಚ್ಚಿಸಲು 8 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡುವುದರ ಜೊತೆಗೆ ಅವುಗಳ ಆರೈಕೆಗೆ ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.</p>.<p>ಹುಣಸಗಿ ತಾಲ್ಲೂಕಿನಲ್ಲಿ ಒಟ್ಟು ಮೂರು ವಿಧದ ಅರಣ್ಯ ಪ್ರದೇಶವಿದ್ದು, 6,950 ಎಕರೆಗೂ ಹೆಚ್ಚು ಕಾಯ್ದಿಟ್ಟ ಅರಣ್ಯ ಪ್ರದೇಶ, 2,300 ಎಕರೆ ಅವರ್ಗೀಕೃತ ಅರಣ್ಯ ಹಾಗೂ 1,295 ಪರಿಭಾವಿತ ಅರಣ್ಯ ಪ್ರದೇಶ ಸೇರಿ ಒಟ್ಟು ಹುಣಸಗಿ ತಾಲ್ಲೂಕಿನಲ್ಲಿ 10,500 ಎಕರೆ ಅರಣ್ಯ ಪ್ರದೇಶವಿದೆ ಎಂದು ಸುರಪುರದ ವಲಯ ಅರಣ್ಯ ಇಲಾಖೆಯ ಅಧಿಕಾರಿ ಭಾಗಪ್ಪಗೌಡ ಮಾಹಿತಿ ನೀಡಿದರು.</p>.<p>ಈ ವರ್ಷ ತಾಲ್ಲೂಕಿನಲ್ಲಿ ಮಳೆಯಾಗುತ್ತಿದ್ದಂತೆ 8 ಸಾವಿರ ಸಸಿ ನೆಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹುಣಸಗಿಯ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಪದವಿ ಕಾಲೇಜು ಬಳಿ ಸಸಿಗಳನ್ನು ನೆಡಲಾಗಿದ್ದು, ಸರ್ವೆ ನಂ 90ರ ಹುಣಸಗಿ ಕರಿಗುಡ್ಡ ವ್ಯಾಪ್ತಿಯಲ್ಲಿ ಈಗಾಗಲೇ ತಗ್ಗು ಗುಂಡಿಗಳನ್ನು ತೆಗೆದಿಟ್ಟುಕೊಳ್ಳಲಾಗಿದೆ. ಮಳೆಯಾಗುತ್ತಿದ್ದಂತೆ ಬೇವು, ಅರಳಿ, ಹೊಂಗೆ, ಗುಲ್ ಮೋಹರ್ ಸೇರಿದಂತೆ ಇತರ ಜಾತಿಯ ಗಿಡಗಳನ್ನು ನೆಡಲಾಗುವುದು ಎಂದು ವಿವರಿಸಿದರು.</p>.<p>ಕಳೆದ ವರ್ಷ ಹುಣಸಗಿ ಕಾಮನಟಗಿ, ವಜ್ಜಲ ಶ್ರೀನಿವಾಸಪುರ, ಕೊಡೇಕಲ್ಲ ಹಾಗೂ ನಾರಾಯಣಪುರ ಹುಣಸಗಿ–ಕೆಂಭಾವಿ ಮಾರ್ಗದ ರಸ್ತೆ ಪಕ್ಕದಲ್ಲಿ ಅಂದಾಜು 33 ಕಿ.ಮಿ ವ್ಯಾಪ್ತಿಯಲ್ಲಿ 9,900ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿತ್ತು. ಬಹುತೇಕ ಸಸಿಗಳು ಬೆಳೆದು ನಿಂತಿವೆ. ರಸ್ತೆ ಪಕ್ಕದ ಜಮೀನುಗಳ ರೈತರು ಕಾಳಜಿ ವಹಿಸಿದಲ್ಲಿ ಎಲ್ಲ ಸಸಿಗಳು ಉಳಿದುಕೊಳ್ಳುತ್ತದೆ ಎಂದು ಉಪವಲಯ ಅರಣ್ಯಾಧಿಕಾರಿ ಹಣಮಂತ್ರಾಯ ತಿಳಿಸಿದರು.</p>.<p><strong>₹2 ಕೋಟಿ ವೆಚ್ಚದಲ್ಲಿ ಉದ್ಯಾನ</strong></p><p>ಹುಣಸಗಿಯಲ್ಲಿನ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ₹2 ಕೋಟಿ ವೆಚ್ಚದಲ್ಲಿ ಸಾಲುಮರದ ತಿಮ್ಮಕ್ಕ ಉದ್ಯಾನವನ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ರಾಜಾ ವೇಣುಗೋಪಾಲನಾಯಕ ತಿಳಿಸಿದ್ದಾರೆ.</p><p>ಈ ಕುರಿತು ‘ಪ್ರಜಾವಾಣಿ’ಗೆ ತಿಳಿಸಿದ ಅವರು, ಶೀಘ್ರದಲ್ಲಿಯೇ ಟೆಂಡರ್ ಕರೆಯಲಾಗುವುದು. ಅರಣ್ಯ ಇಲಾಖೆ ಅಡಿಯಲ್ಲಿ ಅಂದಾಜು 25 ಹೆಕ್ಟೇರ್ ಪ್ರದೇಶದಲ್ಲಿ ತಂತಿ ಬೇಲಿ ಅಳವಡಿಕೆ, ಯುವಕರು ಮತ್ತು ವಾಯು ವಿಹಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಾದಚಾರಿ ರಸ್ತೆ, ಕುಡಿಯುವ ನೀರು, ಮಕ್ಕಳ ಆಟಿಕೆಗಳನ್ನು ಅಳವಡಿಸು ಕಾರ್ಯ ಕೆಲವೇ ದಿನಗಳಲ್ಲಿ ನಡೆಯಲಿದೆ’<br>ಎಂದರು.</p>.<div><blockquote>ಹುಣಸಗಿ ಪಟ್ಟಣದಲ್ಲಿ ಅರಣ್ಯ ಇಲಾಖೆಯಿಂದ ಶೀಘ್ರವೇ ಸಾಲುಮರದ ತಿಮ್ಮಕ್ಕ ಉದ್ಯಾನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು </blockquote><span class="attribution"> ರಾಜಾ ವೇಣುಗೋಪಾಲ ನಾಯಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸಗಿ</strong>: ಮಳೆಗಾಲಕ್ಕೆ ಕ್ಷಣಗಣನೆ ಆರಂಭವಾಗಿದ್ದು, ತಾಲ್ಲೂಕಿನಲ್ಲಿ ವನ ಸಂಪತ್ತು ಹೆಚ್ಚಿಸಲು 8 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡುವುದರ ಜೊತೆಗೆ ಅವುಗಳ ಆರೈಕೆಗೆ ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.</p>.<p>ಹುಣಸಗಿ ತಾಲ್ಲೂಕಿನಲ್ಲಿ ಒಟ್ಟು ಮೂರು ವಿಧದ ಅರಣ್ಯ ಪ್ರದೇಶವಿದ್ದು, 6,950 ಎಕರೆಗೂ ಹೆಚ್ಚು ಕಾಯ್ದಿಟ್ಟ ಅರಣ್ಯ ಪ್ರದೇಶ, 2,300 ಎಕರೆ ಅವರ್ಗೀಕೃತ ಅರಣ್ಯ ಹಾಗೂ 1,295 ಪರಿಭಾವಿತ ಅರಣ್ಯ ಪ್ರದೇಶ ಸೇರಿ ಒಟ್ಟು ಹುಣಸಗಿ ತಾಲ್ಲೂಕಿನಲ್ಲಿ 10,500 ಎಕರೆ ಅರಣ್ಯ ಪ್ರದೇಶವಿದೆ ಎಂದು ಸುರಪುರದ ವಲಯ ಅರಣ್ಯ ಇಲಾಖೆಯ ಅಧಿಕಾರಿ ಭಾಗಪ್ಪಗೌಡ ಮಾಹಿತಿ ನೀಡಿದರು.</p>.<p>ಈ ವರ್ಷ ತಾಲ್ಲೂಕಿನಲ್ಲಿ ಮಳೆಯಾಗುತ್ತಿದ್ದಂತೆ 8 ಸಾವಿರ ಸಸಿ ನೆಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹುಣಸಗಿಯ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಪದವಿ ಕಾಲೇಜು ಬಳಿ ಸಸಿಗಳನ್ನು ನೆಡಲಾಗಿದ್ದು, ಸರ್ವೆ ನಂ 90ರ ಹುಣಸಗಿ ಕರಿಗುಡ್ಡ ವ್ಯಾಪ್ತಿಯಲ್ಲಿ ಈಗಾಗಲೇ ತಗ್ಗು ಗುಂಡಿಗಳನ್ನು ತೆಗೆದಿಟ್ಟುಕೊಳ್ಳಲಾಗಿದೆ. ಮಳೆಯಾಗುತ್ತಿದ್ದಂತೆ ಬೇವು, ಅರಳಿ, ಹೊಂಗೆ, ಗುಲ್ ಮೋಹರ್ ಸೇರಿದಂತೆ ಇತರ ಜಾತಿಯ ಗಿಡಗಳನ್ನು ನೆಡಲಾಗುವುದು ಎಂದು ವಿವರಿಸಿದರು.</p>.<p>ಕಳೆದ ವರ್ಷ ಹುಣಸಗಿ ಕಾಮನಟಗಿ, ವಜ್ಜಲ ಶ್ರೀನಿವಾಸಪುರ, ಕೊಡೇಕಲ್ಲ ಹಾಗೂ ನಾರಾಯಣಪುರ ಹುಣಸಗಿ–ಕೆಂಭಾವಿ ಮಾರ್ಗದ ರಸ್ತೆ ಪಕ್ಕದಲ್ಲಿ ಅಂದಾಜು 33 ಕಿ.ಮಿ ವ್ಯಾಪ್ತಿಯಲ್ಲಿ 9,900ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿತ್ತು. ಬಹುತೇಕ ಸಸಿಗಳು ಬೆಳೆದು ನಿಂತಿವೆ. ರಸ್ತೆ ಪಕ್ಕದ ಜಮೀನುಗಳ ರೈತರು ಕಾಳಜಿ ವಹಿಸಿದಲ್ಲಿ ಎಲ್ಲ ಸಸಿಗಳು ಉಳಿದುಕೊಳ್ಳುತ್ತದೆ ಎಂದು ಉಪವಲಯ ಅರಣ್ಯಾಧಿಕಾರಿ ಹಣಮಂತ್ರಾಯ ತಿಳಿಸಿದರು.</p>.<p><strong>₹2 ಕೋಟಿ ವೆಚ್ಚದಲ್ಲಿ ಉದ್ಯಾನ</strong></p><p>ಹುಣಸಗಿಯಲ್ಲಿನ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ₹2 ಕೋಟಿ ವೆಚ್ಚದಲ್ಲಿ ಸಾಲುಮರದ ತಿಮ್ಮಕ್ಕ ಉದ್ಯಾನವನ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ರಾಜಾ ವೇಣುಗೋಪಾಲನಾಯಕ ತಿಳಿಸಿದ್ದಾರೆ.</p><p>ಈ ಕುರಿತು ‘ಪ್ರಜಾವಾಣಿ’ಗೆ ತಿಳಿಸಿದ ಅವರು, ಶೀಘ್ರದಲ್ಲಿಯೇ ಟೆಂಡರ್ ಕರೆಯಲಾಗುವುದು. ಅರಣ್ಯ ಇಲಾಖೆ ಅಡಿಯಲ್ಲಿ ಅಂದಾಜು 25 ಹೆಕ್ಟೇರ್ ಪ್ರದೇಶದಲ್ಲಿ ತಂತಿ ಬೇಲಿ ಅಳವಡಿಕೆ, ಯುವಕರು ಮತ್ತು ವಾಯು ವಿಹಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಾದಚಾರಿ ರಸ್ತೆ, ಕುಡಿಯುವ ನೀರು, ಮಕ್ಕಳ ಆಟಿಕೆಗಳನ್ನು ಅಳವಡಿಸು ಕಾರ್ಯ ಕೆಲವೇ ದಿನಗಳಲ್ಲಿ ನಡೆಯಲಿದೆ’<br>ಎಂದರು.</p>.<div><blockquote>ಹುಣಸಗಿ ಪಟ್ಟಣದಲ್ಲಿ ಅರಣ್ಯ ಇಲಾಖೆಯಿಂದ ಶೀಘ್ರವೇ ಸಾಲುಮರದ ತಿಮ್ಮಕ್ಕ ಉದ್ಯಾನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು </blockquote><span class="attribution"> ರಾಜಾ ವೇಣುಗೋಪಾಲ ನಾಯಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>