ತಾಂಡಾಗಳ ಜನರು ಮಹಾರಾಷ್ಟ್ರದ ಪುಣೆ, ಮುಂಬೈ, ಸೊಲ್ಲಾಪುರ ಮತ್ತಿತರ ಕಡೆಗೆ ದುಡಿಯಲು ಹೋಗಿದ್ದರು. ಲಾಕ್ಡೌನ್ ಸಡಿಲಿಕೆ ಆಗಿದ್ದರಿಂದ ಸಿಕ್ಕ ಸಿಕ್ಕ ವಾಹನಗಳಲ್ಲಿ ಜಿಲ್ಲೆಗೆ ಬಂದು ತಲುಪಿದ್ದಾರೆ. ಆದರೆ, ಇಲ್ಲಿ ಕ್ವಾರಂಟೈನ್ ಕೇಂದ್ರಗಳಲ್ಲಿ ಕುರಿಗಳನ್ನು ತುಂಬಿದಂತೆ ಒಂದೇ ಕೋಣೆಯಲ್ಲಿ ಹಲವಾರು ಜನರನ್ನು ಇರಿಸಿದ್ದಾರೆ. ಇದರಿಂದ ಒಬ್ಬರಿಂದೊಬ್ಬರಿಗೆ ಸೋಂಕು ಹರಡುವುದು ಹೆಚ್ಚಳವಾಗಿದೆ.