ಯಾದಗಿರಿ: ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರ ಗ್ರಾಮದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಹರಿಸುವ ಹೊರ ಹರಿವು ಹೆಚ್ಚಳವಾಗಿದೆ. ಒಳಹರಿವು ಹೆಚ್ಚಳವಾಗಿದ್ದು, ಅದಕ್ಕೆ ತಕ್ಕಂತೆ ನದಿಗೆ ಹರಿಬಿಡಲಾಗುತ್ತಿದೆ.
ನಾರಾಯಣಪುರ ಜಲಾಶಯಕ್ಕೆ ಮಂಗಳವಾರ 1.15 ಲಕ್ಷ ಕ್ಯುಸೆಕ್ ಒಳಹರಿವು ಇದ್ದು, 1.21 ಲಕ್ಷ ಕ್ಯುಸೆಕ್ ಹೊರ ಹರಿವು ಇದೆ.
16 ಕ್ರಸ್ಟ್ ಗೇಟುಗಳ ಮೂಲಕ 1.30 ಅಂತರ ಮೀಟರ್ ಗೇಟುಗಳನ್ನು ಎತ್ತರಿಸಲಾಗಿದೆ. 1,15,744 ಕ್ಯುಸೆಕ್ ನೀರು ಕೃಷ್ಣಾ ನದಿಗೆ, 6,000 ಕ್ಯುಸೆಕ್ ನೀರು ಮುರುಡೇಶ್ವರ ವಿದ್ಯುತ್ ಸ್ಥಾವರಕ್ಕೆ ಹರಿಸಲಾಗುತ್ತಿದೆ. ಮಂಗಳವಾರ 491.68 ಮಟ್ಟ ಕಾಯ್ದಯಕೊಂಡಿದ್ದು, ಪ್ರಸ್ತುತ 30.699 ಟಿಎಂಸಿ ಸಂಗ್ರಹ ಇದೆ.
ಎಚ್ಚರಿಕೆ ಸಂದೇಶ:ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಆಗುತ್ತಿರುವ ಕಾರಣ ಆಲಮಟ್ಟಿ ಆಣೆಕಟ್ಟಿನಿಂದ ಹೊರಹರಿವು ಹೆಚ್ಚಿದ್ದರಿಂದ ನಾರಾಯಣಪುರ ಆಣೆಕಟ್ಟಿನಿಂದ ಕೃಷ್ಣಾ ನದಿಗೆ ಹೊರಹರಿವಿನ ಪ್ರಮಾಣವನ್ನು ಹಂತಹಂತವಾಗಿ ಹೆಚ್ಚಿಸಲಾಗಿದೆ.
ನಾರಾಯಣಪುರ ಆಣೆಕಟ್ಟಿಗೆ ಒಳಹರಿವಿನ ಆಧಾರದ ಮೇಲೆ ಮತ್ತಷ್ಟು ಹೆಚ್ಚಿಸಲಾಗುವುದು.ನದಿ ಪಾತ್ರದ ಗ್ರಾಮಸ್ಥರು ನದಿಗೆ ಇಳಿಯದಂತೆ ಡ್ಯಾಂ ಮೂಲಗಳು ತಿಳಿಸಿವೆ.