‘ಮಹಾತ್ಮ ಗಾಂಧಿ ಜಯಂತಿ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಪೆಂಡಾಲ್, ಖುರ್ಚಿ ಹಾಗೂ ಮೈಕ್ ಸೆಟ್ ಅಳವಡಿಸಿರುವುದಕ್ಕೆ ₹29,852 ಬಿಲ್ ಮಾಡಲಾಗಿದೆ. ಆದರೆ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಯಾವುದೇ ಕಾರ್ಯಕ್ರಮ ಅಂದು ನಡೆದಿಲ್ಲ ಎಂದು ವಕೀಲರೊಬ್ಬರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಗಾಂಧಿ ಪುತ್ಥಳಿಗೆ ಸುಣ್ಣಬಣ್ಣ, ಲೈಟಿಂಗ್ ಹಾಗೂ ಅಲಂಕಾರ ಮಾಡಿದ ಕಾರ್ಯಕ್ರಮದ ವೆಚ್ಚ ₹20,987 ಆಗಿದೆ. ವಾಸ್ತವವಾಗಿ ಗಾಂಧಿ ಪುತ್ಥಳಿಯು ಗ್ರಾನೈಟ್ ಕಲ್ಲಿನಿಂದ ನಿರ್ಮಿಸಿದ್ದು, ಸುಣ್ಣಬಣ್ಣ ಮಾಡುವ ಪ್ರಶ್ನೆ ಇಲ್ಲ. ಇದು ಜಯಂತಿ ಹೆಸರಿನಲ್ಲಿ ಹಣ ಲಪಟಾಯಿಸುವ ಮಾರ್ಗವಾಗಿದೆ’ ಎಂದು ನಗರದ ನಿವಾಸಿ ಶರಣಪ್ಪ ಆರೋಪಿಸಿದರು.