ಇದೇ ಸಂದರ್ಭದಲ್ಲಿ ಕಳೆದ 25 ವರ್ಷಗಳಿಂದ 41 ಕ್ಕೂ ಹೆಚ್ಚು ಗ್ರಾಮ ದೇವತಾ ಮೂರ್ತಿ ತಯಾರಿಸಿದ್ದಲ್ಲದೇ ಭಜನಾ, ಶ್ರೀ ಕೃಷ್ಣ ಪಾರಿಜಾತ ಕಲಾವಿದರಾಗಿ ಸಿಂದಗಿ, ಸುರಪುರ ಮುದ್ದೇಬಿಹಾಳ, ತಾಳಿಕೋಟಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ ಪೀರಾಪೂರ ಗ್ರಾಮದ ದೇವಿ ಮೂರ್ತಿ ತಯಾರಕರಾದ ನಾಗಲಿಂಗಪ್ಪ ಕಂಬಾರ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.