ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಲಭ್ಯತೆ ಇರುವ ಕಡೆ ರೈತರು ಬಿಳಿಜೋಳಕ್ಕೆ ನೀರು ಸಹ ನೀಡಿದ್ದಾರೆ. ಇದು ಉತ್ತಮ ಫಸಲು ಬರಲು ಹೆಚ್ಚು ಅನುಕೂಲವಾಗಿದೆ. ನೀರಾವರಿ ಪ್ರದೇಶದ ವ್ಯಾಪ್ತಿಯಲ್ಲಿ ಹೆಚ್ಚಿನ ರೈತರು ಬೆಳೆ ಪದ್ಧತಿ ಉಲ್ಲಂಘಿಸಿ ಭತ್ತ ನಾಟಿ ಮಾಡಿದ್ದಾರೆ. ಬಿಳಿಜೋಳ ಬಿತ್ತನೆಯ ಕ್ಷೇತ್ರ ತುಂಬಾ ಕಡಿಮೆ ಇದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.