<p><strong>ಯಾದಗಿರಿ:</strong> ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026–27ನೇ ಸಾಲಿನ ಬಜೆಟ್ ಅನ್ನು ಶುಕ್ರವಾರ ಮಂಡಿಸಿದ್ದು, ಒಂದಿಷ್ಟು ಹೊಸ ಅಭಿವೃದ್ಧಿ ಕಾರ್ಯ ಘೋಷಣೆ ಮಾಡಿದ್ದು ಬಿಟ್ಟರೆ ‘ಗುಳೆ’ ಹಣೆಪಟ್ಟಿ ಹೊತ್ತಿರುವ ಜಿಲ್ಲೆಗೆ ಸ್ಥಳೀಯವಾಗಿಯೇ ಉದ್ಯೋಗ ಸೃಷ್ಟಿಸುವಂತಹ ಯೋಜನೆಗಳು ಸಿಕ್ಕಿಲ್ಲ ಎಂಬ ಅತೃಪ್ತಿ ಜನರಲ್ಲಿ ಮೂಡಿದೆ.</p>.<p>ಸಿಎಂ ಸಿದ್ದರಾಮಯ್ಯ ಅವರಿಗೆ ದಾಖಲೆಯ 17 ಬಜೆಟ್ಗಳನ್ನು ಮಂಡನೆ ಮಾಡಿದ ಶ್ರೇಯಸ್ಸಿಗೆ ಪಾತ್ರರಾಗಿದ್ದಾರೆ. ಇತ್ತ, ಯಾದಗಿರಿ ಜಿಲ್ಲೆಯಾಗಿ 16 ವರ್ಷಗಳ ಕಳೆದರೂ ಅಭಿವೃದ್ಧಿಯ ಪಥದಲ್ಲಿ ಇನ್ನೂ ಆಮೆಗತಿಯಲ್ಲಿದೆ. ಈ ಬಾರಿಯಾದರೂ ಮುಖ್ಯಮಂತ್ರಿಗಳು ಜಿಲ್ಲೆಗೆ ಕೃಪೆ ತೋರಬಹುದು ಎಂಬ ನಿರೀಕ್ಷೆ ಜನರಲ್ಲಿತ್ತು. ಜೊತೆಗೆ ನಾಲ್ಕೂ ವಿಧಾನ ಸಭಾ ಕ್ಷೇತ್ರಗಳ ಶಾಸಕರು ತಮ್ಮ ಜನರ ಆಶೋತ್ತರಗಳ ಪಟ್ಟಿಯನ್ನು ಮುಖ್ಯಮಂತ್ರಿಗಳು ಮುಂದೆ ಇರಿಸಿದ್ದರು. ಅವುಗಳ ಪೈಕಿ ಕೆಲವು ಯೋಜನೆಗಳಿಗೆ ಮೀಸಲಿಟ್ಟ ಅನುದಾನದ ಭಾಗ್ಯ, ಇನ್ನೂ ಕೆಲವು ಘೋಷಣೆಯ ಪಟ್ಟಿಯಲ್ಲಿವೆ.</p>.<p>ಕಡೇಚೂರು– ಬಾಡಿಯಾಳ ಕೈಗಾರಿಕೆ ಪ್ರದೇಶದಲ್ಲಿ 2ನೇ ಹಂತದ ಭೂಸ್ವಾಧೀನ ಕೈಬಿಟ್ಟು ನಗರದ ಸಮೀಪದಲ್ಲೇ ಕೈಗಾರಿಕಾ ಪ್ರದೇಶ ನಿರ್ಮಾಣ ಮಾಡುವಂತೆ ಕೋರುತ್ತಿರುವ ಉದ್ಯಮಿಗಳ ಬೇಡಿಕೆಗೆ ಸ್ಪಂದನೆಯೂ ಸಿಕ್ಕಿಲ್ಲ. </p>.<p>ಕೆಬಿಜೆಎನ್ಎಲ್ ಏತ ನೀರಾವರಿ ಯೋಜನೆಯಡಿ ಭೀಮಾ ಫ್ಲ್ಯಾಂಕ್ ಯೋಜನೆಯ ಪ್ರಸ್ತಾಪವಿಲ್ಲ. ಕಂದಳ್ಳಿ, ಜೋಳದಡಗಿ ಬ್ರಿಡ್ಜ್ ಕಂ ಬ್ಯಾರೇಜ್ಗಳಿಗೆ ದುರಸ್ತಿ, ನಗರ ಸಮೀಪದ ಭೀಮಾ ನದಿತ ಹಳೇ ಸೇತುವೆ ದುರಸ್ತಿ, ಕೊಳ್ಳೂರ(ಎಂ) ಗ್ರಾಮದಲ್ಲಿ ಕೃಷ್ಣಾ ನದಿಯ ಹೊಸ ಸೇತುವೆ ನಿರ್ಮಾಣದಂತಹ ಬಹು ನಿರೀಕ್ಷೆಯ ಯೋಜನೆಗಳಿಗೆ ಮನ್ನಣೆ ಸಿಕ್ಕಿಲ್ಲ ಎನ್ನುತ್ತಾರೆ ಸ್ಥಳೀಯರು.</p>.<p>ಧಾರ್ಮಿಕ, ಐತಿಹಾಸಿಕ ಮತ್ತು ಪ್ರಾಗೈತಿಹಾಸಿಕ ತಾಣಗಳನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಪರಿಗಣನೆಗೆ ತೆಗೆದುಕೊಂಡಿಲ್ಲ. ರಾಜ್ಯದ ಅತಿ ದೊಡ್ಡ ಪಕ್ಷಧಾಮಗಳಲ್ಲಿ ಒಂದಾ ಬೋನಾಳ ಪಕ್ಷಿಧಾಮವನ್ನೂ ಕಡೆಗಣಿಸಲಾಗಿದೆ. ಹೊಸ ತಾಲ್ಲೂಕುಗಳಾದ ವಡಗೇರಾ, ಹುಣಸಗಿ ಮತ್ತು ಗುರುಮಠಕಲ್ಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತಾಲ್ಲೂಕು ಕಚೇರಿಗಳು ತೆರೆದಿಲ್ಲ. ಉನ್ನತ ತಾಂತ್ರಿಕ ಶಿಕ್ಷಣ, ಸ್ನಾತಕೋತ್ತರ ಕೇಂದ್ರಗಳ ಕನಸು ಗಗನ ಕುಸುಮವಾಗಿ ಉಳಿದಿದೆ.</p>.<p>ಬಜೆಟ್ನಲ್ಲಿ ಘೋಷಣೆಯಾದ ಯೋಜನೆಗಳ ಪೈಕಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ₹ 100 ಕೋಟಿ, ಕಕ್ಕೇರಾದಲ್ಲಿನ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜಿಗೆ ₹ 18 ಕೋಟಿ, ತಾರಾಲಯ ನಿರ್ಮಾಣಕ್ಕೆ ₹4 ಕೋಟಿ ಸೇರಿ ಇತರೆ ಕೆಲವು ಯೋಜನೆಗಳಿಗೆ ಅನುದಾನ ನಿಗದಿಯಾಗಿದೆ. ಉಳಿದಂತೆ ಕೈಗೆತ್ತಿಕೊಳ್ಳಲಾಗುವುದು, ಅಭಿವೃದ್ಧಿಪಡಿಸಲಾಗುವುದು, ನಿರ್ಮಿಸಲಾಗುವುದು, ತುಂಬಿಸಲಾಗುವುದು, ಉದ್ದೇಶಿಸಲಾಗಿದೆ ಎಂಬ ಪದಗಳಿಂದ ಕೂಡಿದೆ ಎಂಬುದು ಸ್ಥಳೀಯರ ಆರೋಪ.</p>.<p>‘ರಾಜ್ಯ ಸರ್ಕಾರದ ಬಜೆಟ್ನಲ್ಲಿ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ದೂರದೃಷ್ಟಿ ಮತ್ತು ಸ್ಪಷ್ಟ ಕಾರ್ಯಯೋಜನೆಗಳನ್ನು ಹೊಂದಿಲ್ಲ. ಮಹಿಳಾ ಸಬಲೀಕರಣ, ಯುವಕರ ಉದ್ಯೋಗ, ಪ್ರಾದೇಶಿಕ ಸಮತೋಲನ ಮತ್ತು ನಗರಾಭಿವೃದ್ಧಿ, ಗ್ರಾಮೀಣಾಭಿವ್ರುದ್ಧಿ, ಶಿಕ್ಷಣಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಗಂಭೀರವಾದ ಕೊರತೆಗಳಿವೆ’ ಎನ್ನುತ್ತಾರೆ ಕೆಆರ್ಎಸ್ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ಎಲ್. ಜೀವನ್</p>.<p>‘ಸಿಎಂ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರಿಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ವಾಣಿಜ್ಯ ವಿಭಾಗ ಆರಂಭ, ಅಲ್ಪಸಂಖ್ಯಾತರ ಪ್ರತಿಭಾವಂತರಿಗೆ ಕೆ-ಸಿಇಟಿ, ಜೆಇಇ ನೀಟ್ ತರಬೇತಿಗೆ ಅನುದಾನ ನೀಡಿದ್ದಾರೆ. ಆಯ್ದ ವಕ್ಫ್ ಆಸ್ತಿಗಳಲ್ಲಿ ಕಲಿಕಾ ಕೇಂದ್ರ ಮತ್ತು ನಾಗರಿಕ ಸೇವಾ ಕೇಂದ್ರ ಆರಂಭದ ಯೋಜನೆ ಘೋಷಿಸಿದ್ದಾರೆ’ ಎಂದು ಕೆಪಿಸಿಸಿ ಕಿಸಾನ್ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜ ಮೈನುದ್ದೀನ್ ಹೇಳಿದರು.</p>.<p>‘16 ವರ್ಷದ ಒಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧಿಸಿದ್ದು ಬಿಟ್ಟರೆ ಬೇರೆ ಒಳ್ಳೆಯ ಯೋಜನೆಗಳಿಲ್ಲ. ಯಾದಗಿರಿ, ಶಹಾಪುರ, ಸುರಪುರ, ಗುರುಮಠಕಲ್ ರಸ್ತೆಗಳು ಹಾಳಾಗಿವೆ. ಕ್ಷೇತ್ರಗಳ ಒಳಗೆ ಅಭಿವೃದ್ಧಿ ಮರೀಚಿಕೆಯಾಗಿದೆ. ಪ್ರಚಾರಕ್ಕಾಗಿ ಬಜೆಟ್ ಮಂಡಿಸಿದಂತೆ ಇದೆ’ ಎನ್ನುತ್ತಾರೆ ಬಿಜೆಪಿ ಮುಖಂಡರಾದ ನಾಗರತ್ನ ಕುಪ್ಪಿ</p>.<p> <strong>ಘೋಷಣೆಯಾದ ಯೋಜನೆಗಳು</strong></p><p> ₹ 100 ಕೋಟಿ ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಕ್ಕೇರಾದಲ್ಲಿ ₹ 18 ಕೋಟಿ ವೆಚ್ಚದ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜು ಹೊಸ ಪೊಲೀಸ್ ಠಾಣೆ ₹ 4 ಕೋಟಿ ವೆಚ್ಚದ ತಾರಾಲಯ ಕೆಕೆಆರ್ಡಿಬಿಯ ಅನುದಾನದಲ್ಲಿ ಯಾದಗಿರಿ ಹಾಗೂ ಸುರಪುರದಲ್ಲಿ ಒಳಚರಂಡಿ ಕಾಮಗಾರಿ ಹತ್ತಿಕುಣಿ ಪ್ರದೇಶದಲ್ಲಿ ನೀರಿನ ಬಳಕೆಯ ದಕ್ಷತೆ ಹೆಚ್ಚಿಸಲು ಒತ್ತಡದ ಕೊಳವೆ ಜಾಲ ಅಳವಡಿಕೆ ಶಹಾಪುರ ಸುರಪುರ ಮತ್ತು ಗುರುಮಠಕಲ್ನಲ್ಲಿ ಶ್ರಮಿಕ ವಸತಿ ಶಾಲೆಗಳು ಕರ್ನಾಳ್ ಬೂದಿಹಾಳ- ಪಿರಾಪುರ್ ದೇವತಕಲ್ ಮತ್ತು ಕರ್ನಾಳ ಏತ ನೀರಾವರಿ ಯೋಜನೆಗಳು ಗುರುಮಿಠಕಲ್ ತಾಲ್ಲೂಕಿನ 20 ಕೆರೆಗಳು ತುಂಬಿಸುವ ಯೋಜನೆ ಕೆಕೆಆರ್ಡಿಬಿಯಿಂದ ಸಣ್ಣ ನೀರಾವರಿ ಕಾಮಗಾರಿಗಳಿಗೆ ಅನುದಾನ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026–27ನೇ ಸಾಲಿನ ಬಜೆಟ್ ಅನ್ನು ಶುಕ್ರವಾರ ಮಂಡಿಸಿದ್ದು, ಒಂದಿಷ್ಟು ಹೊಸ ಅಭಿವೃದ್ಧಿ ಕಾರ್ಯ ಘೋಷಣೆ ಮಾಡಿದ್ದು ಬಿಟ್ಟರೆ ‘ಗುಳೆ’ ಹಣೆಪಟ್ಟಿ ಹೊತ್ತಿರುವ ಜಿಲ್ಲೆಗೆ ಸ್ಥಳೀಯವಾಗಿಯೇ ಉದ್ಯೋಗ ಸೃಷ್ಟಿಸುವಂತಹ ಯೋಜನೆಗಳು ಸಿಕ್ಕಿಲ್ಲ ಎಂಬ ಅತೃಪ್ತಿ ಜನರಲ್ಲಿ ಮೂಡಿದೆ.</p>.<p>ಸಿಎಂ ಸಿದ್ದರಾಮಯ್ಯ ಅವರಿಗೆ ದಾಖಲೆಯ 17 ಬಜೆಟ್ಗಳನ್ನು ಮಂಡನೆ ಮಾಡಿದ ಶ್ರೇಯಸ್ಸಿಗೆ ಪಾತ್ರರಾಗಿದ್ದಾರೆ. ಇತ್ತ, ಯಾದಗಿರಿ ಜಿಲ್ಲೆಯಾಗಿ 16 ವರ್ಷಗಳ ಕಳೆದರೂ ಅಭಿವೃದ್ಧಿಯ ಪಥದಲ್ಲಿ ಇನ್ನೂ ಆಮೆಗತಿಯಲ್ಲಿದೆ. ಈ ಬಾರಿಯಾದರೂ ಮುಖ್ಯಮಂತ್ರಿಗಳು ಜಿಲ್ಲೆಗೆ ಕೃಪೆ ತೋರಬಹುದು ಎಂಬ ನಿರೀಕ್ಷೆ ಜನರಲ್ಲಿತ್ತು. ಜೊತೆಗೆ ನಾಲ್ಕೂ ವಿಧಾನ ಸಭಾ ಕ್ಷೇತ್ರಗಳ ಶಾಸಕರು ತಮ್ಮ ಜನರ ಆಶೋತ್ತರಗಳ ಪಟ್ಟಿಯನ್ನು ಮುಖ್ಯಮಂತ್ರಿಗಳು ಮುಂದೆ ಇರಿಸಿದ್ದರು. ಅವುಗಳ ಪೈಕಿ ಕೆಲವು ಯೋಜನೆಗಳಿಗೆ ಮೀಸಲಿಟ್ಟ ಅನುದಾನದ ಭಾಗ್ಯ, ಇನ್ನೂ ಕೆಲವು ಘೋಷಣೆಯ ಪಟ್ಟಿಯಲ್ಲಿವೆ.</p>.<p>ಕಡೇಚೂರು– ಬಾಡಿಯಾಳ ಕೈಗಾರಿಕೆ ಪ್ರದೇಶದಲ್ಲಿ 2ನೇ ಹಂತದ ಭೂಸ್ವಾಧೀನ ಕೈಬಿಟ್ಟು ನಗರದ ಸಮೀಪದಲ್ಲೇ ಕೈಗಾರಿಕಾ ಪ್ರದೇಶ ನಿರ್ಮಾಣ ಮಾಡುವಂತೆ ಕೋರುತ್ತಿರುವ ಉದ್ಯಮಿಗಳ ಬೇಡಿಕೆಗೆ ಸ್ಪಂದನೆಯೂ ಸಿಕ್ಕಿಲ್ಲ. </p>.<p>ಕೆಬಿಜೆಎನ್ಎಲ್ ಏತ ನೀರಾವರಿ ಯೋಜನೆಯಡಿ ಭೀಮಾ ಫ್ಲ್ಯಾಂಕ್ ಯೋಜನೆಯ ಪ್ರಸ್ತಾಪವಿಲ್ಲ. ಕಂದಳ್ಳಿ, ಜೋಳದಡಗಿ ಬ್ರಿಡ್ಜ್ ಕಂ ಬ್ಯಾರೇಜ್ಗಳಿಗೆ ದುರಸ್ತಿ, ನಗರ ಸಮೀಪದ ಭೀಮಾ ನದಿತ ಹಳೇ ಸೇತುವೆ ದುರಸ್ತಿ, ಕೊಳ್ಳೂರ(ಎಂ) ಗ್ರಾಮದಲ್ಲಿ ಕೃಷ್ಣಾ ನದಿಯ ಹೊಸ ಸೇತುವೆ ನಿರ್ಮಾಣದಂತಹ ಬಹು ನಿರೀಕ್ಷೆಯ ಯೋಜನೆಗಳಿಗೆ ಮನ್ನಣೆ ಸಿಕ್ಕಿಲ್ಲ ಎನ್ನುತ್ತಾರೆ ಸ್ಥಳೀಯರು.</p>.<p>ಧಾರ್ಮಿಕ, ಐತಿಹಾಸಿಕ ಮತ್ತು ಪ್ರಾಗೈತಿಹಾಸಿಕ ತಾಣಗಳನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಪರಿಗಣನೆಗೆ ತೆಗೆದುಕೊಂಡಿಲ್ಲ. ರಾಜ್ಯದ ಅತಿ ದೊಡ್ಡ ಪಕ್ಷಧಾಮಗಳಲ್ಲಿ ಒಂದಾ ಬೋನಾಳ ಪಕ್ಷಿಧಾಮವನ್ನೂ ಕಡೆಗಣಿಸಲಾಗಿದೆ. ಹೊಸ ತಾಲ್ಲೂಕುಗಳಾದ ವಡಗೇರಾ, ಹುಣಸಗಿ ಮತ್ತು ಗುರುಮಠಕಲ್ಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತಾಲ್ಲೂಕು ಕಚೇರಿಗಳು ತೆರೆದಿಲ್ಲ. ಉನ್ನತ ತಾಂತ್ರಿಕ ಶಿಕ್ಷಣ, ಸ್ನಾತಕೋತ್ತರ ಕೇಂದ್ರಗಳ ಕನಸು ಗಗನ ಕುಸುಮವಾಗಿ ಉಳಿದಿದೆ.</p>.<p>ಬಜೆಟ್ನಲ್ಲಿ ಘೋಷಣೆಯಾದ ಯೋಜನೆಗಳ ಪೈಕಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ₹ 100 ಕೋಟಿ, ಕಕ್ಕೇರಾದಲ್ಲಿನ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜಿಗೆ ₹ 18 ಕೋಟಿ, ತಾರಾಲಯ ನಿರ್ಮಾಣಕ್ಕೆ ₹4 ಕೋಟಿ ಸೇರಿ ಇತರೆ ಕೆಲವು ಯೋಜನೆಗಳಿಗೆ ಅನುದಾನ ನಿಗದಿಯಾಗಿದೆ. ಉಳಿದಂತೆ ಕೈಗೆತ್ತಿಕೊಳ್ಳಲಾಗುವುದು, ಅಭಿವೃದ್ಧಿಪಡಿಸಲಾಗುವುದು, ನಿರ್ಮಿಸಲಾಗುವುದು, ತುಂಬಿಸಲಾಗುವುದು, ಉದ್ದೇಶಿಸಲಾಗಿದೆ ಎಂಬ ಪದಗಳಿಂದ ಕೂಡಿದೆ ಎಂಬುದು ಸ್ಥಳೀಯರ ಆರೋಪ.</p>.<p>‘ರಾಜ್ಯ ಸರ್ಕಾರದ ಬಜೆಟ್ನಲ್ಲಿ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ದೂರದೃಷ್ಟಿ ಮತ್ತು ಸ್ಪಷ್ಟ ಕಾರ್ಯಯೋಜನೆಗಳನ್ನು ಹೊಂದಿಲ್ಲ. ಮಹಿಳಾ ಸಬಲೀಕರಣ, ಯುವಕರ ಉದ್ಯೋಗ, ಪ್ರಾದೇಶಿಕ ಸಮತೋಲನ ಮತ್ತು ನಗರಾಭಿವೃದ್ಧಿ, ಗ್ರಾಮೀಣಾಭಿವ್ರುದ್ಧಿ, ಶಿಕ್ಷಣಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಗಂಭೀರವಾದ ಕೊರತೆಗಳಿವೆ’ ಎನ್ನುತ್ತಾರೆ ಕೆಆರ್ಎಸ್ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ಎಲ್. ಜೀವನ್</p>.<p>‘ಸಿಎಂ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರಿಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ವಾಣಿಜ್ಯ ವಿಭಾಗ ಆರಂಭ, ಅಲ್ಪಸಂಖ್ಯಾತರ ಪ್ರತಿಭಾವಂತರಿಗೆ ಕೆ-ಸಿಇಟಿ, ಜೆಇಇ ನೀಟ್ ತರಬೇತಿಗೆ ಅನುದಾನ ನೀಡಿದ್ದಾರೆ. ಆಯ್ದ ವಕ್ಫ್ ಆಸ್ತಿಗಳಲ್ಲಿ ಕಲಿಕಾ ಕೇಂದ್ರ ಮತ್ತು ನಾಗರಿಕ ಸೇವಾ ಕೇಂದ್ರ ಆರಂಭದ ಯೋಜನೆ ಘೋಷಿಸಿದ್ದಾರೆ’ ಎಂದು ಕೆಪಿಸಿಸಿ ಕಿಸಾನ್ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜ ಮೈನುದ್ದೀನ್ ಹೇಳಿದರು.</p>.<p>‘16 ವರ್ಷದ ಒಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧಿಸಿದ್ದು ಬಿಟ್ಟರೆ ಬೇರೆ ಒಳ್ಳೆಯ ಯೋಜನೆಗಳಿಲ್ಲ. ಯಾದಗಿರಿ, ಶಹಾಪುರ, ಸುರಪುರ, ಗುರುಮಠಕಲ್ ರಸ್ತೆಗಳು ಹಾಳಾಗಿವೆ. ಕ್ಷೇತ್ರಗಳ ಒಳಗೆ ಅಭಿವೃದ್ಧಿ ಮರೀಚಿಕೆಯಾಗಿದೆ. ಪ್ರಚಾರಕ್ಕಾಗಿ ಬಜೆಟ್ ಮಂಡಿಸಿದಂತೆ ಇದೆ’ ಎನ್ನುತ್ತಾರೆ ಬಿಜೆಪಿ ಮುಖಂಡರಾದ ನಾಗರತ್ನ ಕುಪ್ಪಿ</p>.<p> <strong>ಘೋಷಣೆಯಾದ ಯೋಜನೆಗಳು</strong></p><p> ₹ 100 ಕೋಟಿ ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಕ್ಕೇರಾದಲ್ಲಿ ₹ 18 ಕೋಟಿ ವೆಚ್ಚದ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜು ಹೊಸ ಪೊಲೀಸ್ ಠಾಣೆ ₹ 4 ಕೋಟಿ ವೆಚ್ಚದ ತಾರಾಲಯ ಕೆಕೆಆರ್ಡಿಬಿಯ ಅನುದಾನದಲ್ಲಿ ಯಾದಗಿರಿ ಹಾಗೂ ಸುರಪುರದಲ್ಲಿ ಒಳಚರಂಡಿ ಕಾಮಗಾರಿ ಹತ್ತಿಕುಣಿ ಪ್ರದೇಶದಲ್ಲಿ ನೀರಿನ ಬಳಕೆಯ ದಕ್ಷತೆ ಹೆಚ್ಚಿಸಲು ಒತ್ತಡದ ಕೊಳವೆ ಜಾಲ ಅಳವಡಿಕೆ ಶಹಾಪುರ ಸುರಪುರ ಮತ್ತು ಗುರುಮಠಕಲ್ನಲ್ಲಿ ಶ್ರಮಿಕ ವಸತಿ ಶಾಲೆಗಳು ಕರ್ನಾಳ್ ಬೂದಿಹಾಳ- ಪಿರಾಪುರ್ ದೇವತಕಲ್ ಮತ್ತು ಕರ್ನಾಳ ಏತ ನೀರಾವರಿ ಯೋಜನೆಗಳು ಗುರುಮಿಠಕಲ್ ತಾಲ್ಲೂಕಿನ 20 ಕೆರೆಗಳು ತುಂಬಿಸುವ ಯೋಜನೆ ಕೆಕೆಆರ್ಡಿಬಿಯಿಂದ ಸಣ್ಣ ನೀರಾವರಿ ಕಾಮಗಾರಿಗಳಿಗೆ ಅನುದಾನ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>