ಯಾದಗಿರಿ: ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರ ಗ್ರಾಮದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಶುಕ್ರವಾರ 2 ಲಕ್ಷ ಕ್ಯುಸೆಕ್ ನೀರು ಹರಿಸುತ್ತಿದ್ದು, ಬೆಳಿಗ್ಗೆ 10 ಗಂಟೆ ನಂತರ 2.25 ಲಕ್ಷ ಕ್ಯುಸೆಕ್ ಗೆ ಹೆಚ್ಚಿಸಲಾಗುವುದು ಎಂದು ಡ್ಯಾಂ ಮೂಲಗಳು ತಿಳಿಸಿವೆ.
ಜಲಾನಯನ ಪ್ರದೇಶದಲ್ಲಿ ಮೇಲ್ಮಟ್ಟದ ಮಳೆಯಿಂದಾಗಿ, ಆಲಮಟ್ಟಿ ಜಲಾಶಯದಿಂದ ಹೊರಹರಿವು 2 ಲಕ್ಷ ಕ್ಯುಸೆಕ್ನಿಂದ 2.25 ಲಕ್ಷ ಕ್ಯುಸೆಕ್ಗೆ ಬೆಳಿಗ್ಗೆ 10 ಗಂಟೆಗೆ ಹೆಚ್ಚಿಸಲಾಗುವುದು. ಆದಕಾರಣ ನಾರಾಯಣಪುರ ಆಣೆಕಟ್ಟಿನಿಂದ ಕೃಷ್ಣಾ ನದಿಗೆ ಹೊರಹರಿವು ಕ್ರಮೇಣ 2.30 ಲಕ್ಷ ಕ್ಯುಸೆಕ್ಗೆ ಬೆಳಿಗ್ಗೆ 11 ಗಂಟೆಯೊಳಗೆ ಹೆಚ್ಚಿಸಲಾಗುವುದು. ನಾರಾಯಣಪುರ ಡ್ಯಾಂಗೆ ಒಳಹರಿವಿನ ಆಧಾರದ ಮೇಲೆ ಮತ್ತಷ್ಟು ಹೆಚ್ಚಿಸಲಾಗುವುದು ಎಂದು ಡ್ಯಾಂ ಮೂಲಗಳು ತಿಳಿಸಿವೆ.