<p><strong>ಯಾದಗಿರಿ</strong>: ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಪೆಟ್ರೋಲ್ ಬಂಕ್ಗಳಲ್ಲಿ ಗ್ರಾಹಕರು ಸೌಲಭ್ಯ ಕೊರತೆ ಎದುರಿಸುತ್ತಿದ್ದಾರೆ. ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಿಕೊಡಬೇಕು ಎಂಬ ಮಾಹಿತಿಯೇ ಇರದ ಕಾರಣ ಸೌಲಭ್ಯಗಳಿಂದ ಗ್ರಾಹಕರು ವಂಚಿತರಾಗಿದ್ದಾರೆ.</p>.<p>ಜಿಲ್ಲೆಯಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಒಸಿ), ಭಾರತ ಪೆಟ್ರೋಲಿಯಂ (ಬಿಪಿ) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್ಪಿ) ಸರ್ಕಾರಿ ಕಂಪನಿಗಳಿವೆ.</p>.<p>ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಹೆಚ್ಚಿನ ಪೆಟ್ರೋಲ್ ಬಂಕ್ಗಳಲ್ಲಿ ಕನಿಷ್ಠ ಸೌಲಭ್ಯಗಳಿಲ್ಲ. ಹೆಸರಿಗೆ ಮಾತ್ರ ಕುಡಿಯುವ ನೀರು ಹಾಗೂ ಗ್ಯಾರೇಜ್ ಇರುವುದು ಕಾಣುತ್ತದೆ. ಆದರೆ, ಅವುಗಳ ನಿರ್ವಹಣೆ ಸಮರ್ಪಕವಾಗಿ ಇರುವುದಿಲ್ಲ. ಶೌಚಾಲಯವಿಲ್ಲ. ಅವುಗಳನ್ನು ಪರಿಶೀಲಿಸಲು ಅಧಿಕಾರಿಗಳೂ ಸಹ ಸ್ಥಳಕ್ಕೆ ಭೇಟಿ ನೀಡುವುದಿಲ್ಲ.</p>.<p>ಜಿಲ್ಲೆಯಲ್ಲಿ ಆರು ತಾಲ್ಲೂಕುಗಳಲ್ಲಿ ಸೇರಿ 76 ಪೆಟ್ರೋಲ್ ಬಂಕ್ಗಳಿವೆ. ಇವುಗಳಲ್ಲಿ ಶೇ 90ರಷ್ಟು ಸೌಲಭ್ಯ ವಂಚಿತವಾಗಿದೆ. ಉಳಿದ 10 ಕಡೆ ಇದ್ದರೂ ನಿರ್ವಹಣೆ ಕೊರತೆಯಿಂದ ಶೌಚಾಲಯಗಳು ಪಾಳುಬಿದ್ದಿವೆ. ನಗರದ ವಿವಿಧ ಕಡೆ ಇಂಧನ ದರಪಟ್ಟಿಯನ್ನು ಪ್ರದರ್ಶನ ಮಾಡಬೇಕು. ಆದರೆ, ಕೆಲ ಕಡೆ ಮಾತ್ರ ಇದು ಜಾರಿಗೆ ಬಂದಿದೆ. ಬಹುತೇಕ ಕಡೆ ಪೆಟ್ರೋಲ್, ಡಿಸೇಲ್ ಹಾಕುವ ಹುಡುಗರನ್ನು ಕೇಳಿ ಅಂದಿನ ದರವನ್ನು ತಿಳಿದುಕೊಳ್ಳುವ ಪರಿಸ್ಥಿತಿ ಇದೆ.</p>.<p><strong>ಏನೇನು ಸೌಲಭ್ಯಗಳು ಇರಬೇಕು?: </strong>ಬಂಕ್ ಆವರಣದಲ್ಲಿ ಕಡ್ಡಾಯವಾಗಿ ಅಗ್ನಿ ನಂದಕ, ಮರಳು ಇಡಬೇಕು. ಬೈಕ್, ಕಾರುಗಳಿಗೆ ಸ್ಥಳದಲ್ಲೇ ಟೈರ್ಗಳಲ್ಲಿ ಗಾಳಿ ತುಂಬಿಸಲು ಏರ್ ಸರ್ವಿಸ್ ಕೊಡಬೇಕು ಎನ್ನುವ ನಿಯಮ ಇದೆ. ಗ್ರಾಹಕರಿಗೆ ಶುದ್ಧ ಕುಡಿವ ನೀರು, ಶೌಚಾಲಯ ಸೇರಿದಂತೆ ಮತ್ತಿತರೆ ಸೌಲಭ್ಯಗಳಿರಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಪೆಟ್ರೋಲ್ ಬಂಕ್ಗಳಲ್ಲಿ ಈ ಸೌಲಭ್ಯಗಳ ಒದಗಿಸಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಬೇಕು.</p>.<p>ಸೌಲಭ್ಯಗಳು ಇಲ್ಲದಿರುವ ಬಗ್ಗೆ ಸಾರ್ವಜನಿಕರು ಸಂಬಂಧಿಸಿದ ಕಂಪನಿಗೆ ದೂರು ದಾಖಲಿಸಿದರೆ ಅಂಥವರ ಮೇಲೆ ಕ್ರಮಕೈಗೊಳ್ಳುವ ಅಧಿಕಾರ ಇದೆ. ದಂಡ ಕೂಡ ವಿಧಿಸಬಹುದಾಗಿದೆ. ಇತ್ತ ಗ್ರಾಹಕರಿಗೂ ಈ ಬಗ್ಗೆ ಮಾಹಿತಿಯಿರದ ಕಾರಣ ಮಾಲಿಕರು ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.</p>.<p>‘ಏರ್ಗೇಜ್ ಮತ್ತು ಶೌಚಾಲಯ ನಿರ್ವಹಣೆಗೆ ತಲಾ ಒಬ್ಬೊಬ್ಬ ಸಿಬ್ಬಂದಿಯನ್ನು ನೇಮಿಸಬೇಕು. ಅವರಿಗೆ ವೇತನ ನೀಡಬೇಕು. ಹೀಗಾಗಿ ಬಹುತೇಕ ಕಡೆ ಈ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಇದರಿಂದ ನುಣಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.</p>.<p>ಬಂಕ್ಗಳಲ್ಲಿ ಪೆಟ್ರೋಲ್, ಡೀಸೆಲ್ ತುಂಬಿಸಿದ ನಂತರ ವಾಹನ ಸವಾರರು ಪಂಚರ್ ಅಂಗಡಿ ಹುಡುಕಿಕೊಂಡು ಹೋಗಿ ಟೈಯರ್ಗಳಿಗೆ ಗಾಳಿ ತುಂಬಿಸಿಕೊಳ್ಳಬೇಕು. ಬೈಕ್ ಚಕ್ರಗಳಿಗೆ ಗಾಳಿ ತುಂಬಲು ₹ 10 ಹಾಗೂ ಕಾರುಗಳಿಗೆ ₹ 20 ಪಡೆಯುತ್ತಿದ್ದಾರೆ. ಇದರಿಂದ ಇದು ಗ್ರಾಹಕರಿಗೆ ಹೆಚ್ಚುವರಿ ಹೊರೆಯಾಗಿದೆ. ಬಂಕ್ ಸ್ಥಾಪನೆ ಮಾಡಿರುವವರೇ ಏರ್ ಸರ್ವಿಸ್ ಕೊಡಬೇಕು ಎಂಬ ನಿಯಮ ಪಾಲನೆಯಾಗುತ್ತಿಲ್ಲ.</p>.<p>‘ಹೆದ್ದಾರಿಗೆ ಹೊಂದಿಕೊಂಡಿರುವ ಬಂಕ್ಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದ್ದಾರೆ. ಅಲ್ಲದೆ ಕೆಲ ಬಂಕ್ಗಳಲ್ಲಿ ಸ್ವಚ್ಛತೆ ಇಲ್ಲ ಇದರ ಬಗ್ಗೆ ಗಮನಹರಿಸಬೇಕು. ಅಲ್ಲದೇ ಮೀಟರ್ನಲ್ಲಿ ತಪ್ಪು ಅಂಕಿಗಳು ನಮೂದಿಸಿ ಗ್ರಾಹಕರನ್ನು ಮೋಸಗೊಳಿಸುತ್ತಾರೆ. ಆಗಾಗ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಆಗ ಮಾತ್ರವೇ ಗ್ರಾಹಕರಿಗೆ ಆಗುವ ಮೋಸಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಶಹಾಪುರ ನಗರದ ನಿವಾಸಿ ಶರಣಪ್ಪ ಪ್ಯಾಟಿ.</p>.<p>‘ಈ ಹಿಂದೆ ಸುರಪುರ ತಾಲ್ಲೂಕಿನಲ್ಲಿ ಪೆಟ್ರೋಲ್ ಬಂಕ್ವೊಂದರಲ್ಲಿ ಇಂಧನ ದರ ಹೆಚ್ಚು ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಮತ್ತೆ ಯಾವುದೇ ರೀತಿಯಿಂದ ಗ್ರಾಹಕರಿಂದ ದೂರುಗಳು ಬಂದಿಲ್ಲ. ಅಲ್ಲದೇ ಪೆಟ್ರೋಲ್ ಬಂಕ್ಗಳಲ್ಲಿ ಆಯಾ ಇಲಾಖೆಯವರು ಪರವಾನಗಿ ನೀಡುವುದರಿಂದ ಅವರಿಗೆ ಸಂಬಂಧಿಸಿದ್ದಾಗಿದೆ. ಪೊಲೀಸ್, ಅಗ್ನಿಶಾಮಕ, ತೂಕ, ಅಳತೆ, ಜಾಗ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ’ ಎನ್ನುತ್ತಾರೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಭಾರಿ ಉಪ ನಿರ್ದೇಶಕ ರಾಜು.</p>.<p class="Briefhead"><strong>ಸುರಪುರ: ಪೆಟ್ರೋಲ್ ಬಂಕ್ಗಳಲ್ಲಿ ಸೌಲಭ್ಯ<br />ಸುರಪುರ: </strong>ನಗರದಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಒಸಿ)ಯ 4, ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್ಪಿ) ಯ 1 ಮತ್ತು ಭಾರತ ಪೆಟ್ರೋಲಿಯಂ (ಬಿಪಿ) 1 ಪೆಟ್ರೋಲ್ ಬಂಕ್ ಇವೆ. ಖಾಸಗಿ ಪೆಟ್ರೋಲ್ ಬಂಕ್ ಇಲ್ಲ.</p>.<p>ನಗರಸಭೆ ಹತ್ತಿರ ಮತ್ತು ಬಸ್ನಿಲ್ದಾಣದ ಹಿಂದಿನ ಕೆಂಭಾವಿ ರಸ್ತೆಯ ಎರಡು ಬಂಕ್ಗಳು ನಗರದಲ್ಲಿ ಇವೆ. ಉಳಿದ 4 ಬಂಕ್ಗಳು ಹೊರವಲಯದಲ್ಲಿವೆ.</p>.<p>ಬಂಕ್ಗಳಲ್ಲಿ ಕುಡಿಯುವ ನೀರು, ಗಾಳಿ ತುಂಬಿಸುವ ಯಂತ್ರ, ಶೌಚಾಲಯ, ಪಾರ್ಕಿಂಗ್, ಜನರೇಟರ್ ವ್ಯವಸ್ಥೆ ಇದೆ. ನಗರದ ಒಳಗೆ ಇರುವ ಪೆಟ್ರೋಲ್ ಬಂಕ್ಗಳು ಬೆಳಗಿನ 6 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ತೆರೆದಿರುತ್ತವೆ.</p>.<p>ಕೆಲ ಕಡೆ ಬಂಕ್ ಆವರಣದಲ್ಲಿ ಕ್ರಾಂಕ್ರೀಟ್ ಕಿತ್ತುಕೊಂಡು ಹೋಗಿದ್ದು, ದೂಳುಮಯವಾಗಿದೆ. ಬಂಕ್ ಮಾಲಿಕರೇ ಇದನ್ನು ದುರಸ್ತಿ ಮಾಡಿಸಬೇಕಿದ್ದರಿಂದ ಇದನ್ನು ಕೈಬಿಡಲಾಗಿದೆ. ಈ ರೀತಿ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಗ್ರಾಹಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.</p>.<p>**<br />ನಮ್ಮ ಬಂಕ್ನಲ್ಲಿ ಗ್ರಾಹಕರಿಗೆ ಮೂಲ ಸೌಲಭ್ಯ ಕಲ್ಪಿಸಲಾಗಿದೆ. ಫಿಲ್ಟರ್ ನೀರಿನ ವ್ಯವಸ್ಥೆ ಮಾಡಲಾಗಿದೆ. ಇದುವರೆಗೂ ಗ್ರಾಹಕರಿಂದ ಯಾವುದೇ ದೂರು ಇಲ್ಲ.<br /><em><strong>-ಸಾಜಿದ್ ಅಲಿ, ಮೆ. ಶೋರಾಪುರ ಪೆಟ್ರೋಲಿಯಂ ಬಂಕ್ ವ್ಯವಸ್ಥಾಪಕ</strong></em></p>.<p><em><strong>**</strong></em></p>.<p>ದಿನದ 24 ಗಂಟೆಯೂ ಪೆಟ್ರೋಲ್ ಬಂಕ್ ತೆರೆಯುವ ವ್ಯವಸ್ಥೆ ಆಗಬೇಕು. ರಾತ್ರಿ ತುರ್ತು ಸಂದರ್ಭದಲ್ಲಿ ಪೆಟ್ರೋಲ್, ಡಿಸೇಲ್ ಸಿಗದೆ ಪರದಾಡುವಂತಾಗಿದೆ.<br /><em><strong>-ಶಿವಶರಣ ಸಾಹು ಹಯ್ಯಾಳ, ಗ್ರಾಹಕ</strong></em></p>.<p>**</p>.<p>ಪೆಟ್ರೋಲ್ ಬಂಕ್ಗಳಲ್ಲಿ ಗ್ರಾಹಕರ ಮೂಲಸೌಕರ್ಯ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಇಂಧನದ ಸಾಂದ್ರತೆ, ಶುದ್ಧತೆ ಪರಿಶೀಲನೆ ನಮ್ಮ ವ್ಯಾಪ್ತಿಗೆ ಬರುತ್ತದೆ.<br /><em><strong>-ರಾಜು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಭಾರಿ ಉಪ ನಿರ್ದೇಶಕ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ</strong>: ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಪೆಟ್ರೋಲ್ ಬಂಕ್ಗಳಲ್ಲಿ ಗ್ರಾಹಕರು ಸೌಲಭ್ಯ ಕೊರತೆ ಎದುರಿಸುತ್ತಿದ್ದಾರೆ. ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಿಕೊಡಬೇಕು ಎಂಬ ಮಾಹಿತಿಯೇ ಇರದ ಕಾರಣ ಸೌಲಭ್ಯಗಳಿಂದ ಗ್ರಾಹಕರು ವಂಚಿತರಾಗಿದ್ದಾರೆ.</p>.<p>ಜಿಲ್ಲೆಯಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಒಸಿ), ಭಾರತ ಪೆಟ್ರೋಲಿಯಂ (ಬಿಪಿ) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್ಪಿ) ಸರ್ಕಾರಿ ಕಂಪನಿಗಳಿವೆ.</p>.<p>ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಹೆಚ್ಚಿನ ಪೆಟ್ರೋಲ್ ಬಂಕ್ಗಳಲ್ಲಿ ಕನಿಷ್ಠ ಸೌಲಭ್ಯಗಳಿಲ್ಲ. ಹೆಸರಿಗೆ ಮಾತ್ರ ಕುಡಿಯುವ ನೀರು ಹಾಗೂ ಗ್ಯಾರೇಜ್ ಇರುವುದು ಕಾಣುತ್ತದೆ. ಆದರೆ, ಅವುಗಳ ನಿರ್ವಹಣೆ ಸಮರ್ಪಕವಾಗಿ ಇರುವುದಿಲ್ಲ. ಶೌಚಾಲಯವಿಲ್ಲ. ಅವುಗಳನ್ನು ಪರಿಶೀಲಿಸಲು ಅಧಿಕಾರಿಗಳೂ ಸಹ ಸ್ಥಳಕ್ಕೆ ಭೇಟಿ ನೀಡುವುದಿಲ್ಲ.</p>.<p>ಜಿಲ್ಲೆಯಲ್ಲಿ ಆರು ತಾಲ್ಲೂಕುಗಳಲ್ಲಿ ಸೇರಿ 76 ಪೆಟ್ರೋಲ್ ಬಂಕ್ಗಳಿವೆ. ಇವುಗಳಲ್ಲಿ ಶೇ 90ರಷ್ಟು ಸೌಲಭ್ಯ ವಂಚಿತವಾಗಿದೆ. ಉಳಿದ 10 ಕಡೆ ಇದ್ದರೂ ನಿರ್ವಹಣೆ ಕೊರತೆಯಿಂದ ಶೌಚಾಲಯಗಳು ಪಾಳುಬಿದ್ದಿವೆ. ನಗರದ ವಿವಿಧ ಕಡೆ ಇಂಧನ ದರಪಟ್ಟಿಯನ್ನು ಪ್ರದರ್ಶನ ಮಾಡಬೇಕು. ಆದರೆ, ಕೆಲ ಕಡೆ ಮಾತ್ರ ಇದು ಜಾರಿಗೆ ಬಂದಿದೆ. ಬಹುತೇಕ ಕಡೆ ಪೆಟ್ರೋಲ್, ಡಿಸೇಲ್ ಹಾಕುವ ಹುಡುಗರನ್ನು ಕೇಳಿ ಅಂದಿನ ದರವನ್ನು ತಿಳಿದುಕೊಳ್ಳುವ ಪರಿಸ್ಥಿತಿ ಇದೆ.</p>.<p><strong>ಏನೇನು ಸೌಲಭ್ಯಗಳು ಇರಬೇಕು?: </strong>ಬಂಕ್ ಆವರಣದಲ್ಲಿ ಕಡ್ಡಾಯವಾಗಿ ಅಗ್ನಿ ನಂದಕ, ಮರಳು ಇಡಬೇಕು. ಬೈಕ್, ಕಾರುಗಳಿಗೆ ಸ್ಥಳದಲ್ಲೇ ಟೈರ್ಗಳಲ್ಲಿ ಗಾಳಿ ತುಂಬಿಸಲು ಏರ್ ಸರ್ವಿಸ್ ಕೊಡಬೇಕು ಎನ್ನುವ ನಿಯಮ ಇದೆ. ಗ್ರಾಹಕರಿಗೆ ಶುದ್ಧ ಕುಡಿವ ನೀರು, ಶೌಚಾಲಯ ಸೇರಿದಂತೆ ಮತ್ತಿತರೆ ಸೌಲಭ್ಯಗಳಿರಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಪೆಟ್ರೋಲ್ ಬಂಕ್ಗಳಲ್ಲಿ ಈ ಸೌಲಭ್ಯಗಳ ಒದಗಿಸಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಬೇಕು.</p>.<p>ಸೌಲಭ್ಯಗಳು ಇಲ್ಲದಿರುವ ಬಗ್ಗೆ ಸಾರ್ವಜನಿಕರು ಸಂಬಂಧಿಸಿದ ಕಂಪನಿಗೆ ದೂರು ದಾಖಲಿಸಿದರೆ ಅಂಥವರ ಮೇಲೆ ಕ್ರಮಕೈಗೊಳ್ಳುವ ಅಧಿಕಾರ ಇದೆ. ದಂಡ ಕೂಡ ವಿಧಿಸಬಹುದಾಗಿದೆ. ಇತ್ತ ಗ್ರಾಹಕರಿಗೂ ಈ ಬಗ್ಗೆ ಮಾಹಿತಿಯಿರದ ಕಾರಣ ಮಾಲಿಕರು ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.</p>.<p>‘ಏರ್ಗೇಜ್ ಮತ್ತು ಶೌಚಾಲಯ ನಿರ್ವಹಣೆಗೆ ತಲಾ ಒಬ್ಬೊಬ್ಬ ಸಿಬ್ಬಂದಿಯನ್ನು ನೇಮಿಸಬೇಕು. ಅವರಿಗೆ ವೇತನ ನೀಡಬೇಕು. ಹೀಗಾಗಿ ಬಹುತೇಕ ಕಡೆ ಈ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಇದರಿಂದ ನುಣಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.</p>.<p>ಬಂಕ್ಗಳಲ್ಲಿ ಪೆಟ್ರೋಲ್, ಡೀಸೆಲ್ ತುಂಬಿಸಿದ ನಂತರ ವಾಹನ ಸವಾರರು ಪಂಚರ್ ಅಂಗಡಿ ಹುಡುಕಿಕೊಂಡು ಹೋಗಿ ಟೈಯರ್ಗಳಿಗೆ ಗಾಳಿ ತುಂಬಿಸಿಕೊಳ್ಳಬೇಕು. ಬೈಕ್ ಚಕ್ರಗಳಿಗೆ ಗಾಳಿ ತುಂಬಲು ₹ 10 ಹಾಗೂ ಕಾರುಗಳಿಗೆ ₹ 20 ಪಡೆಯುತ್ತಿದ್ದಾರೆ. ಇದರಿಂದ ಇದು ಗ್ರಾಹಕರಿಗೆ ಹೆಚ್ಚುವರಿ ಹೊರೆಯಾಗಿದೆ. ಬಂಕ್ ಸ್ಥಾಪನೆ ಮಾಡಿರುವವರೇ ಏರ್ ಸರ್ವಿಸ್ ಕೊಡಬೇಕು ಎಂಬ ನಿಯಮ ಪಾಲನೆಯಾಗುತ್ತಿಲ್ಲ.</p>.<p>‘ಹೆದ್ದಾರಿಗೆ ಹೊಂದಿಕೊಂಡಿರುವ ಬಂಕ್ಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದ್ದಾರೆ. ಅಲ್ಲದೆ ಕೆಲ ಬಂಕ್ಗಳಲ್ಲಿ ಸ್ವಚ್ಛತೆ ಇಲ್ಲ ಇದರ ಬಗ್ಗೆ ಗಮನಹರಿಸಬೇಕು. ಅಲ್ಲದೇ ಮೀಟರ್ನಲ್ಲಿ ತಪ್ಪು ಅಂಕಿಗಳು ನಮೂದಿಸಿ ಗ್ರಾಹಕರನ್ನು ಮೋಸಗೊಳಿಸುತ್ತಾರೆ. ಆಗಾಗ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಆಗ ಮಾತ್ರವೇ ಗ್ರಾಹಕರಿಗೆ ಆಗುವ ಮೋಸಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಶಹಾಪುರ ನಗರದ ನಿವಾಸಿ ಶರಣಪ್ಪ ಪ್ಯಾಟಿ.</p>.<p>‘ಈ ಹಿಂದೆ ಸುರಪುರ ತಾಲ್ಲೂಕಿನಲ್ಲಿ ಪೆಟ್ರೋಲ್ ಬಂಕ್ವೊಂದರಲ್ಲಿ ಇಂಧನ ದರ ಹೆಚ್ಚು ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಮತ್ತೆ ಯಾವುದೇ ರೀತಿಯಿಂದ ಗ್ರಾಹಕರಿಂದ ದೂರುಗಳು ಬಂದಿಲ್ಲ. ಅಲ್ಲದೇ ಪೆಟ್ರೋಲ್ ಬಂಕ್ಗಳಲ್ಲಿ ಆಯಾ ಇಲಾಖೆಯವರು ಪರವಾನಗಿ ನೀಡುವುದರಿಂದ ಅವರಿಗೆ ಸಂಬಂಧಿಸಿದ್ದಾಗಿದೆ. ಪೊಲೀಸ್, ಅಗ್ನಿಶಾಮಕ, ತೂಕ, ಅಳತೆ, ಜಾಗ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ’ ಎನ್ನುತ್ತಾರೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಭಾರಿ ಉಪ ನಿರ್ದೇಶಕ ರಾಜು.</p>.<p class="Briefhead"><strong>ಸುರಪುರ: ಪೆಟ್ರೋಲ್ ಬಂಕ್ಗಳಲ್ಲಿ ಸೌಲಭ್ಯ<br />ಸುರಪುರ: </strong>ನಗರದಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಒಸಿ)ಯ 4, ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್ಪಿ) ಯ 1 ಮತ್ತು ಭಾರತ ಪೆಟ್ರೋಲಿಯಂ (ಬಿಪಿ) 1 ಪೆಟ್ರೋಲ್ ಬಂಕ್ ಇವೆ. ಖಾಸಗಿ ಪೆಟ್ರೋಲ್ ಬಂಕ್ ಇಲ್ಲ.</p>.<p>ನಗರಸಭೆ ಹತ್ತಿರ ಮತ್ತು ಬಸ್ನಿಲ್ದಾಣದ ಹಿಂದಿನ ಕೆಂಭಾವಿ ರಸ್ತೆಯ ಎರಡು ಬಂಕ್ಗಳು ನಗರದಲ್ಲಿ ಇವೆ. ಉಳಿದ 4 ಬಂಕ್ಗಳು ಹೊರವಲಯದಲ್ಲಿವೆ.</p>.<p>ಬಂಕ್ಗಳಲ್ಲಿ ಕುಡಿಯುವ ನೀರು, ಗಾಳಿ ತುಂಬಿಸುವ ಯಂತ್ರ, ಶೌಚಾಲಯ, ಪಾರ್ಕಿಂಗ್, ಜನರೇಟರ್ ವ್ಯವಸ್ಥೆ ಇದೆ. ನಗರದ ಒಳಗೆ ಇರುವ ಪೆಟ್ರೋಲ್ ಬಂಕ್ಗಳು ಬೆಳಗಿನ 6 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ತೆರೆದಿರುತ್ತವೆ.</p>.<p>ಕೆಲ ಕಡೆ ಬಂಕ್ ಆವರಣದಲ್ಲಿ ಕ್ರಾಂಕ್ರೀಟ್ ಕಿತ್ತುಕೊಂಡು ಹೋಗಿದ್ದು, ದೂಳುಮಯವಾಗಿದೆ. ಬಂಕ್ ಮಾಲಿಕರೇ ಇದನ್ನು ದುರಸ್ತಿ ಮಾಡಿಸಬೇಕಿದ್ದರಿಂದ ಇದನ್ನು ಕೈಬಿಡಲಾಗಿದೆ. ಈ ರೀತಿ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಗ್ರಾಹಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.</p>.<p>**<br />ನಮ್ಮ ಬಂಕ್ನಲ್ಲಿ ಗ್ರಾಹಕರಿಗೆ ಮೂಲ ಸೌಲಭ್ಯ ಕಲ್ಪಿಸಲಾಗಿದೆ. ಫಿಲ್ಟರ್ ನೀರಿನ ವ್ಯವಸ್ಥೆ ಮಾಡಲಾಗಿದೆ. ಇದುವರೆಗೂ ಗ್ರಾಹಕರಿಂದ ಯಾವುದೇ ದೂರು ಇಲ್ಲ.<br /><em><strong>-ಸಾಜಿದ್ ಅಲಿ, ಮೆ. ಶೋರಾಪುರ ಪೆಟ್ರೋಲಿಯಂ ಬಂಕ್ ವ್ಯವಸ್ಥಾಪಕ</strong></em></p>.<p><em><strong>**</strong></em></p>.<p>ದಿನದ 24 ಗಂಟೆಯೂ ಪೆಟ್ರೋಲ್ ಬಂಕ್ ತೆರೆಯುವ ವ್ಯವಸ್ಥೆ ಆಗಬೇಕು. ರಾತ್ರಿ ತುರ್ತು ಸಂದರ್ಭದಲ್ಲಿ ಪೆಟ್ರೋಲ್, ಡಿಸೇಲ್ ಸಿಗದೆ ಪರದಾಡುವಂತಾಗಿದೆ.<br /><em><strong>-ಶಿವಶರಣ ಸಾಹು ಹಯ್ಯಾಳ, ಗ್ರಾಹಕ</strong></em></p>.<p>**</p>.<p>ಪೆಟ್ರೋಲ್ ಬಂಕ್ಗಳಲ್ಲಿ ಗ್ರಾಹಕರ ಮೂಲಸೌಕರ್ಯ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಇಂಧನದ ಸಾಂದ್ರತೆ, ಶುದ್ಧತೆ ಪರಿಶೀಲನೆ ನಮ್ಮ ವ್ಯಾಪ್ತಿಗೆ ಬರುತ್ತದೆ.<br /><em><strong>-ರಾಜು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಭಾರಿ ಉಪ ನಿರ್ದೇಶಕ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>