‘ಕಳೆದ ವರ್ಷದ ನವೆಂಬರ್ನಲ್ಲಿ ಕಾಲುವೆ ನೀರು ಸ್ಥಗಿತಗೊಳಿಸಲಾಯಿತು. ಮಳೆ ಕೊರತೆಯಿಂದ ಕೆರೆ ಬತ್ತಿ ಹೋಗಿತ್ತು. ಇದರಿಂದ ತಾಲ್ಲೂಕಿನ ಚಾಮನಾಳ, ನಡಿಹಾಳ, ದಂಡೊ ಸೋಲಾಪುರ, ಚಾಮನಾಳ ಮಡ್ಡಿ ತಾಂಡಾ, ನಡಿಹಾಳ ತಾಂಡಾ ಸೇರಿದಂತೆ ಹಲವಾರು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿತ್ತು. ಜಾನುವಾರು ಸೇರಿ ಅಲ್ಲಿನ ನಿವಾಸಿಗರು ಹೈರಾಣುಗೊಂಡಿದ್ದರು. ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿತ್ತು’ ಎನ್ನುತ್ತಾರೆ ನಡಿಹಾಳ ತಾಂಡಾದ ನಿವಾಸಿ ರಾಜು ಚವಾಣ್.