<p><strong>ಸುರಪುರ: </strong>ಭವಿಷ್ಯದ 2055ರ ಜನಸಂಖ್ಯೆಯನ್ನು ಗಮನದಲ್ಲಿ ಇರಿಸಿಕೊಂಡು ರೂಪಿಸಿರುವ ₹158.8 ಕೋಟಿ ವೆಚ್ಚದ ಬೃಹತ್ ಕುಡಿಯುವ ನೀರಿನ ಯೋಜನೆಗೆ ಮಂಗಳವಾರ (ಡಿ.29) ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಭೂಮಿಪೂಜೆ ನೆರವೇರಿಸುವರು.</p>.<p>1962ರಲ್ಲಿ ಶೆಳ್ಳಗಿ ಸಮೀಪದ ನದಿಯಿಂದ ಕುಡಿಯುವ ನೀರಿನ ಯೋಜನೆ ಆರಂಭವಾಗಿತ್ತು. ಕಳೆದ ಮೂರು ದಶಕಗಳಿಂದ ನೀರಿನ ಪೂರೈಕೆ ಅಸ್ತವ್ಯಸ್ಥವಾಗಿತ್ತು. ತಿಂಗಳಿಗೆ 3-4 ಸಲ ಮಾತ್ರ ನೀರು ಸರಬರಾಜು ಆಗುತ್ತಿತ್ತು.</p>.<p>ಜನಸಂಖ್ಯೆ ಏರಿಕೆ ಮತ್ತು ಯೋಜನೆ ಹಳೆಯದಾಗುತ್ತಿದ್ದಂತೆ ನಿರ್ವಹಣೆ ಮಾಡಲು ನಗರಸಭೆ ಏದುಸಿರು ಬಿಡುತ್ತಿತ್ತು. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರೂ ಆಗಿರುವ ಶಾಸಕ ರಾಜೂಗೌಡ ಅವರ ಪ್ರಯತ್ನದಿಂದ ನೀರಿನ ಬವಣೆ ನೀಗುವ ಹಂತಕ್ಕೆ ಬಂದು ತಲುಪಿದೆ.</p>.<p class="Subhead"><strong>ಯೋಜನೆಯ ಸಂಕ್ಷಿಪ್ತ ಮಾಹಿತಿ: </strong>ತಾಲ್ಲೂಕಿನ ಕಂಪಾಪುರ ಡಿ. ಗ್ರಾಮದ ಬಳಿಯ ಕೃಷ್ಣಾ ನದಿ ಬಹಳ ಆಳವಾಗಿ ಹರಿಯುತ್ತದೆ. ಇಲ್ಲಿ ಸದಾ ನೀರು ಲಭ್ಯ ಇರುತ್ತದೆ. ಹೀಗಾಗಿ, ಯೋಜನೆಗೆ ಸೂಕ್ತವೆಂದು ಈ ಸ್ಥಳ ಆಯ್ದುಕೊಳ್ಳಲಾಗಿದೆ. ಸುರಪುರ ನಗರ, ಮಾರ್ಗದ ದೇವಪುರ, ಕವಡಿಮಟ್ಟಿ ಮತ್ತು ರುಕ್ಮಾಪುರ ಗ್ರಾಮ ಗಳಿಗೂ ಯೋಜನೆಯ ಫಲ ಲಭಿಸಲಿದೆ.</p>.<p>ನಗರ ವ್ಯಾಪ್ತಿಯ 31 ವಾರ್ಡ್ ಮತ್ತು ನಗರಕ್ಕೆ ಹೊಂದಿಕೊಂಡು ಬೆಳೆದ ಬಡಾವಣೆಗಳಿಗೆ ನೀರು ಪೂರೈಕೆಯ ಉದ್ದೇಶ ಹೊಂದಲಾಗಿದೆ. ವ್ಯವಸ್ಥಿತ ಜಲಸಂಗ್ರಹಗಾರ, ಆಂತರಿಕ ಕೊಳವೆ ಮಾರ್ಗ, ಪ್ರತಿ ಮನೆಗೆ ನಲ್ಲಿ ಮತ್ತು ಮೀಟರ್ ಜೋಡಣೆ ಮಾಡಲಾಗುತ್ತಿದೆ.</p>.<p>ಈಗಾಗಲೇ ಆರಂಭಿಕ ಕಾಮಗಾರಿ, ಪೈಪ್ಗಳನ್ನು ಸಿದ್ಧಪಡಿಸುವ ಕಾರ್ಯ ನಡೆದಿದೆ. ಮಂಗಳವಾರ ಕಾಮಗಾರಿಗೆ ಅಧಿಕೃತವಾಗಿ ಭೂಮಿಪೂಜೆ ನೆರವೇರ ಲಿದೆ. ಬೆಂಗಳೂರಿನ ಸುಭಾ ಕಂಪೆನಿಯು ಗುತ್ತಿಗೆ ಪಡೆದಿದ್ದು, ಕರ್ನಾಟಕ ನಗರ ನೀರು ಸರಬರಾಜು ಮತ್ತು<br />ಒಳಚರಂಡಿ ಮಂಡಳಿ ಅನುಷ್ಠಾನಗೊಳಿಸುತ್ತಿದೆ.</p>.<p class="Subhead"><strong>ಕೈಗೊಳ್ಳಲಿರುವ ಕಾಮಗಾರಿಗಳು:</strong> 5 ಮೀ. ವ್ಯಾಸ, 5 ಮೀ. ಎತ್ತರದ ಇಂಟೆಕ್ವಾಲ್, 1 ಸಾವಿರ ಎಂಎಂ ವ್ಯಾಸದ 180 ಮೀ. ಉದ್ದದ ಕೊಳವೆ ಜೋಡಣೆ, ಮಧ್ಯಂತರ ಚೇಂಬರ್ ನಿರ್ಮಾಣ, 12 ಮೀ. ವ್ಯಾಸದ 8 ಮೀ. ಎತ್ತರದ ಪಂಪ್ಹೌಸ್, ಸಂಪರ್ಕ ಸೇತುವೆ ಕಾಮಗಾರಿ ನಡೆಯಲಿದೆ.</p>.<p>ಜಾಕ್ವೆಲ್ನಲ್ಲಿ 350 ಎಚ್.ಪಿ. ಸಾಮರ್ಥ್ಯದ 3 ಪಂಪ್ಸೆಟ್, ಎಕ್ಸ್ಪ್ರೆಸ್ ವಿದ್ಯುತ್ ಮಾರ್ಗ, ಕುಂಬಾರಪೇಟೆ ನೀರು ಶುದ್ಧೀಕರಣದ ಘಟಕದಲ್ಲಿ ಮೈಕ್ರೋಸ್ರ್ಕೀನ್ ತಂತ್ರಜ್ಞಾನದ 13 ಎಂಎಲ್ಡಿ ಸಾಮರ್ಥ್ಯದ ಮತ್ತೊಂದು ಶುದ್ಧೀಕರಣ ಘಟಕ, ಹುಲಕಲ್ ಗುಡ್ಡದಲ್ಲಿ 10 ಲಕ್ಷ ಲೀ. ಸಾಮರ್ಥ್ಯದ ಜಲಸಂಗ್ರಹಗಾರದ ಕಾಮಗಾರಿಯೂ ಕೈಗೊಳ್ಳಲಾಗುತ್ತಿದೆ.</p>.<p>***</p>.<p>9 ಪ್ರದೇಶದಲ್ಲಿ ಜಲಸಂಗ್ರಹಗಾರ</p>.<p>ನಗರ ಬೆಟ್ಟ ಪ್ರದೇಶದಿಂದ ಆವೃತ್ತವಾಗಿದ್ದು, ಏರುಇಳಿತಗಳಿಗೆ ಅನುಗುಣವಾಗಿ 10 ಜೋನ್ಗಳಾಗಿ ವಿಂಗಡಿಸಲಾಗಿದೆ. ಹಸನಾಪುರ, ರಂಗಂಪೇಟ, ಕಬಾಡಗೇರಾ, ದಖನಿಮೋಹಲ್ಲಾ, ತಹಶೀಲ್ದಾರ್ ಕಚೇರಿ ಏರಿಯಾ, ಕುಂಬಾರಪೇಟ, ವೆಂಕಟಾಪುರ, ಹೊಸಬಾವಿ ಮತ್ತು ದುರ್ಗಮ್ಮದೇವಿ ಏರಿಯಾಗಳಲ್ಲಿ ಜಲಸಂಗ್ರಹಗಾರ ನಿರ್ಮಿಸಲಾಗುತ್ತಿದೆ.<br />ಕಾಮಗಾರಿಗೆ 13 ತಿಂಗಳು ಕಾಲಾವಕಾಶ ನೀಡಲಾಗಿದೆ. ಯೋಜನೆಯಿಂದ 24x7 ನೀರು ಪೂರೈಕೆಯಾಗಲಿದೆ. ಯೋಜನೆಯಿಂದ ನಾಗರಿಕರು ಸಂತೋಷಗೊಂಡಿದ್ದು, ಕೊನೆಗೂ ನೀರಿನ ಸಮಸ್ಯೆಯಿಂದ ಮುಕ್ತಿ ಸಿಗಬಹುದು ಎಂದು ಕಾಯುತ್ತಿದ್ದಾರೆ.</p>.<p>***</p>.<p>ಯೋಜನೆಯ ಅನುಷ್ಠಾನದಿಂದ ನನ್ನ ಕನಸು ಸಾಕಾರಗೊಳ್ಳಲಿದೆ. ನಾಗರಿಕರಿಗೆ 24x7 ಕುಡಿಯುವ ನೀರು ಒದಗಿಸಿದ ತೃಪ್ತಿ ದೊರಕುತ್ತದೆ</p>.<p>–ರಾಜೂಗೌಡ, ಶಾಸಕ</p>.<p>***</p>.<p>ಶಾಸಕ ರಾಜೂಗೌಡ ಅವರ ಸತತ ಪ್ರಯತ್ನದಿಂದ ಅನುದಾನ ತಂದಿದ್ದಾರೆ. ಇದು ತಾಲ್ಲೂಕು ಮಟ್ಟದ ದೊಡ್ಡ ಯೋಜನೆಗಳಲ್ಲಿ ಒಂದು</p>.<p>–ಭೈರತಿ ಬಸವರಾಜ ನಗರಾಭಿವೃದ್ಧಿ ಸಚಿವ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ: </strong>ಭವಿಷ್ಯದ 2055ರ ಜನಸಂಖ್ಯೆಯನ್ನು ಗಮನದಲ್ಲಿ ಇರಿಸಿಕೊಂಡು ರೂಪಿಸಿರುವ ₹158.8 ಕೋಟಿ ವೆಚ್ಚದ ಬೃಹತ್ ಕುಡಿಯುವ ನೀರಿನ ಯೋಜನೆಗೆ ಮಂಗಳವಾರ (ಡಿ.29) ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಭೂಮಿಪೂಜೆ ನೆರವೇರಿಸುವರು.</p>.<p>1962ರಲ್ಲಿ ಶೆಳ್ಳಗಿ ಸಮೀಪದ ನದಿಯಿಂದ ಕುಡಿಯುವ ನೀರಿನ ಯೋಜನೆ ಆರಂಭವಾಗಿತ್ತು. ಕಳೆದ ಮೂರು ದಶಕಗಳಿಂದ ನೀರಿನ ಪೂರೈಕೆ ಅಸ್ತವ್ಯಸ್ಥವಾಗಿತ್ತು. ತಿಂಗಳಿಗೆ 3-4 ಸಲ ಮಾತ್ರ ನೀರು ಸರಬರಾಜು ಆಗುತ್ತಿತ್ತು.</p>.<p>ಜನಸಂಖ್ಯೆ ಏರಿಕೆ ಮತ್ತು ಯೋಜನೆ ಹಳೆಯದಾಗುತ್ತಿದ್ದಂತೆ ನಿರ್ವಹಣೆ ಮಾಡಲು ನಗರಸಭೆ ಏದುಸಿರು ಬಿಡುತ್ತಿತ್ತು. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರೂ ಆಗಿರುವ ಶಾಸಕ ರಾಜೂಗೌಡ ಅವರ ಪ್ರಯತ್ನದಿಂದ ನೀರಿನ ಬವಣೆ ನೀಗುವ ಹಂತಕ್ಕೆ ಬಂದು ತಲುಪಿದೆ.</p>.<p class="Subhead"><strong>ಯೋಜನೆಯ ಸಂಕ್ಷಿಪ್ತ ಮಾಹಿತಿ: </strong>ತಾಲ್ಲೂಕಿನ ಕಂಪಾಪುರ ಡಿ. ಗ್ರಾಮದ ಬಳಿಯ ಕೃಷ್ಣಾ ನದಿ ಬಹಳ ಆಳವಾಗಿ ಹರಿಯುತ್ತದೆ. ಇಲ್ಲಿ ಸದಾ ನೀರು ಲಭ್ಯ ಇರುತ್ತದೆ. ಹೀಗಾಗಿ, ಯೋಜನೆಗೆ ಸೂಕ್ತವೆಂದು ಈ ಸ್ಥಳ ಆಯ್ದುಕೊಳ್ಳಲಾಗಿದೆ. ಸುರಪುರ ನಗರ, ಮಾರ್ಗದ ದೇವಪುರ, ಕವಡಿಮಟ್ಟಿ ಮತ್ತು ರುಕ್ಮಾಪುರ ಗ್ರಾಮ ಗಳಿಗೂ ಯೋಜನೆಯ ಫಲ ಲಭಿಸಲಿದೆ.</p>.<p>ನಗರ ವ್ಯಾಪ್ತಿಯ 31 ವಾರ್ಡ್ ಮತ್ತು ನಗರಕ್ಕೆ ಹೊಂದಿಕೊಂಡು ಬೆಳೆದ ಬಡಾವಣೆಗಳಿಗೆ ನೀರು ಪೂರೈಕೆಯ ಉದ್ದೇಶ ಹೊಂದಲಾಗಿದೆ. ವ್ಯವಸ್ಥಿತ ಜಲಸಂಗ್ರಹಗಾರ, ಆಂತರಿಕ ಕೊಳವೆ ಮಾರ್ಗ, ಪ್ರತಿ ಮನೆಗೆ ನಲ್ಲಿ ಮತ್ತು ಮೀಟರ್ ಜೋಡಣೆ ಮಾಡಲಾಗುತ್ತಿದೆ.</p>.<p>ಈಗಾಗಲೇ ಆರಂಭಿಕ ಕಾಮಗಾರಿ, ಪೈಪ್ಗಳನ್ನು ಸಿದ್ಧಪಡಿಸುವ ಕಾರ್ಯ ನಡೆದಿದೆ. ಮಂಗಳವಾರ ಕಾಮಗಾರಿಗೆ ಅಧಿಕೃತವಾಗಿ ಭೂಮಿಪೂಜೆ ನೆರವೇರ ಲಿದೆ. ಬೆಂಗಳೂರಿನ ಸುಭಾ ಕಂಪೆನಿಯು ಗುತ್ತಿಗೆ ಪಡೆದಿದ್ದು, ಕರ್ನಾಟಕ ನಗರ ನೀರು ಸರಬರಾಜು ಮತ್ತು<br />ಒಳಚರಂಡಿ ಮಂಡಳಿ ಅನುಷ್ಠಾನಗೊಳಿಸುತ್ತಿದೆ.</p>.<p class="Subhead"><strong>ಕೈಗೊಳ್ಳಲಿರುವ ಕಾಮಗಾರಿಗಳು:</strong> 5 ಮೀ. ವ್ಯಾಸ, 5 ಮೀ. ಎತ್ತರದ ಇಂಟೆಕ್ವಾಲ್, 1 ಸಾವಿರ ಎಂಎಂ ವ್ಯಾಸದ 180 ಮೀ. ಉದ್ದದ ಕೊಳವೆ ಜೋಡಣೆ, ಮಧ್ಯಂತರ ಚೇಂಬರ್ ನಿರ್ಮಾಣ, 12 ಮೀ. ವ್ಯಾಸದ 8 ಮೀ. ಎತ್ತರದ ಪಂಪ್ಹೌಸ್, ಸಂಪರ್ಕ ಸೇತುವೆ ಕಾಮಗಾರಿ ನಡೆಯಲಿದೆ.</p>.<p>ಜಾಕ್ವೆಲ್ನಲ್ಲಿ 350 ಎಚ್.ಪಿ. ಸಾಮರ್ಥ್ಯದ 3 ಪಂಪ್ಸೆಟ್, ಎಕ್ಸ್ಪ್ರೆಸ್ ವಿದ್ಯುತ್ ಮಾರ್ಗ, ಕುಂಬಾರಪೇಟೆ ನೀರು ಶುದ್ಧೀಕರಣದ ಘಟಕದಲ್ಲಿ ಮೈಕ್ರೋಸ್ರ್ಕೀನ್ ತಂತ್ರಜ್ಞಾನದ 13 ಎಂಎಲ್ಡಿ ಸಾಮರ್ಥ್ಯದ ಮತ್ತೊಂದು ಶುದ್ಧೀಕರಣ ಘಟಕ, ಹುಲಕಲ್ ಗುಡ್ಡದಲ್ಲಿ 10 ಲಕ್ಷ ಲೀ. ಸಾಮರ್ಥ್ಯದ ಜಲಸಂಗ್ರಹಗಾರದ ಕಾಮಗಾರಿಯೂ ಕೈಗೊಳ್ಳಲಾಗುತ್ತಿದೆ.</p>.<p>***</p>.<p>9 ಪ್ರದೇಶದಲ್ಲಿ ಜಲಸಂಗ್ರಹಗಾರ</p>.<p>ನಗರ ಬೆಟ್ಟ ಪ್ರದೇಶದಿಂದ ಆವೃತ್ತವಾಗಿದ್ದು, ಏರುಇಳಿತಗಳಿಗೆ ಅನುಗುಣವಾಗಿ 10 ಜೋನ್ಗಳಾಗಿ ವಿಂಗಡಿಸಲಾಗಿದೆ. ಹಸನಾಪುರ, ರಂಗಂಪೇಟ, ಕಬಾಡಗೇರಾ, ದಖನಿಮೋಹಲ್ಲಾ, ತಹಶೀಲ್ದಾರ್ ಕಚೇರಿ ಏರಿಯಾ, ಕುಂಬಾರಪೇಟ, ವೆಂಕಟಾಪುರ, ಹೊಸಬಾವಿ ಮತ್ತು ದುರ್ಗಮ್ಮದೇವಿ ಏರಿಯಾಗಳಲ್ಲಿ ಜಲಸಂಗ್ರಹಗಾರ ನಿರ್ಮಿಸಲಾಗುತ್ತಿದೆ.<br />ಕಾಮಗಾರಿಗೆ 13 ತಿಂಗಳು ಕಾಲಾವಕಾಶ ನೀಡಲಾಗಿದೆ. ಯೋಜನೆಯಿಂದ 24x7 ನೀರು ಪೂರೈಕೆಯಾಗಲಿದೆ. ಯೋಜನೆಯಿಂದ ನಾಗರಿಕರು ಸಂತೋಷಗೊಂಡಿದ್ದು, ಕೊನೆಗೂ ನೀರಿನ ಸಮಸ್ಯೆಯಿಂದ ಮುಕ್ತಿ ಸಿಗಬಹುದು ಎಂದು ಕಾಯುತ್ತಿದ್ದಾರೆ.</p>.<p>***</p>.<p>ಯೋಜನೆಯ ಅನುಷ್ಠಾನದಿಂದ ನನ್ನ ಕನಸು ಸಾಕಾರಗೊಳ್ಳಲಿದೆ. ನಾಗರಿಕರಿಗೆ 24x7 ಕುಡಿಯುವ ನೀರು ಒದಗಿಸಿದ ತೃಪ್ತಿ ದೊರಕುತ್ತದೆ</p>.<p>–ರಾಜೂಗೌಡ, ಶಾಸಕ</p>.<p>***</p>.<p>ಶಾಸಕ ರಾಜೂಗೌಡ ಅವರ ಸತತ ಪ್ರಯತ್ನದಿಂದ ಅನುದಾನ ತಂದಿದ್ದಾರೆ. ಇದು ತಾಲ್ಲೂಕು ಮಟ್ಟದ ದೊಡ್ಡ ಯೋಜನೆಗಳಲ್ಲಿ ಒಂದು</p>.<p>–ಭೈರತಿ ಬಸವರಾಜ ನಗರಾಭಿವೃದ್ಧಿ ಸಚಿವ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>