ಬಳಿಚಕ್ರ(ಸೈದಾಪುರ): ಸಮೀಪದ ಬಳಿಚಕ್ರ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ವದಂತಿ ಕೇಳಿ ಗ್ರಾಮದ ಜನರು ಭಯ ಭೀತರಾಗಿದ್ದಾರೆ. ಈ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದಲ್ಲಿ ಡಂಗೂರ ಸಾರಿ ಯಾರು ರಾತ್ರಿ ಸಮಯದಲ್ಲಿ ಗ್ರಾಮಸ್ಥರು ತಮ್ಮ ಹೊಲ-ಗದ್ದೆಗಳಿಗೆ ಹೋಗಬಾರದು. ದನಕರುಗಳನ್ನು ನಿಮ್ಮ ಮನೆಯ ಒಳಗಡೆ ಕಟ್ಟಿಕೊಳ್ಳಬೇಕು. ಸಾರ್ವಜನಿಕರು ಯಾರು ಕೂಡ ಹೊರಗಡೆ ತಿರುಗಾಡಬಾರದು ಎಂದು ತಿಳಿಸಲಾಗಿದೆ.