ನಿಯಮಿತ ಆದಾಯವಿಲ್ಲದೆ ಅಂಗಡಿಯ ಬಾಡಿಗೆ, ಮನೆ ಬಾಡಿಗೆ, ವಿದ್ಯುತ್ ಬಿಲ್ ಕಟ್ಟಲಾಗುತ್ತಿಲ್ಲ. ಎರಡು ವರ್ಷ ಕಳೆದರೂ ಒಂದೇ ಒಂದು ಕಾರ್ಯಕ್ರಮದ ಆಮಂತ್ರಣವಿಲ್ಲದೆ ಸ್ಟುಡಿಯೋಗಳು ಸಂಪೂರ್ಣವಾಗಿ ಮುಚ್ಚಿ ಹೋಗಿವೆ. ಇದರಿಂದ ಸ್ಟುಡಿಯೋಗಳಲ್ಲಿ ಕಾರ್ಯ ನಿರ್ವಹಿಸುವ ಅರೆಕಾಲಿಕ ಕೆಲಸಗಾರರಿಗೆ, ಕ್ಯಾಮರಾ ನಿರ್ವಹಣೆ ಮಾಡುವವರಿಗೆ ತಿಂಗಳ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರ ರಾಜ್ಯದ ಅಸಂಘಟಿತ ಸಮುದಾಯಗಳಿಗೆ, ಕಾರ್ಮಿಕರಿಗೆ, ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಆಸರೆಯಾಗಿದ್ದಾರೆ. ಆದರೆ ನಮಗೆ ಮಾತ್ರ ಕಳೆದ ಬಾರಿಯಾಗಲಿ, ಈ ಬಾರಿಯಾಗಲಿ ವಿಶೇಷ ಪ್ಯಾಕೇಜ್ನಡಿಯಲ್ಲಿ ಸಹಾಯಧನ ಘೋಷಣೆ ಮಾಡದಿರುವುದರಿಂದ ಬದುಕು ದುಸ್ತರ ಆಗಿದೆ ಎಂದು ಛಾಯಾಗ್ರಾಹಕರು ನೋವು ತೋಡಿಕೊಂಡರು.