ವಾಂತಿ ಭೇದಿಗೆ ಈರಗಂಟೆಪ್ಪ ಗಾಳೆಪ್ಪ ಮೇಟಿ (80) ಮತ್ತು ಸಿದ್ದಮ್ಮ ಗಂಡ ನಿಂಗಪ್ಪ ಪುಜಾರಿ (60) ಬುಧವಾರ ಅಸುನೀಗಿದ್ದಾರೆ. ಇದುವರೆಗೆ 40 ಮಕ್ಕಳು ಸೇರಿದಂತೆ 200ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಹರಡಿದೆ. ಶುಕ್ರವಾರ 4 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ 160 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 38 ಜನ ಸುರಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.