ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಠಿ ಹಿಡಿದು ದಂಡ ವಸೂಲಿ ಮಾಡಿದ ಪೌರಾಯುಕ್ತ

ತಲಾ ₹100 ದಂಡ ವಿಧಿಸಿದ ಅಧಿಕಾರಿಗಳು, ಮಾಸ್ಕ್‌ ವಿತರಣೆ
Last Updated 12 ಏಪ್ರಿಲ್ 2021, 16:33 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣದಿಂದ ನಗರದ ಗಾಂಧಿ ವೃತ್ತದಲ್ಲಿ ಸೋಮವಾರ ಸ್ವತಃ ನಗರಸಭೆ ಪೌರಾಯುಕ್ತ ಭೀಮಣ್ಣ ನಾಯಕ ಅವರು ಲಾಠಿ ಹಿಡಿದು ಸಾರ್ವಜನಿಕರಿಗೆ ಮಾಸ್ಕ್‌ ಧರಿಸುವಂತೆ ಜಾಗೃತಿ ಮೂಡಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.

ಯುಗಾದಿ ಹಬ್ಬದ ಕಾರಣದಿಂದ ಸಾರ್ವಜನಿಕರು ವ್ಯಾಪಾರ ಮಾಡಲು ಹಳ್ಳಿಗಳಿಂದ ತಂಡೋಪತಂಡವಾಗಿ ಗಾಂಧಿವೃತ್ತಕ್ಕೆ ಹಬ್ಬದ ಖರೀದಿಗೆ ಆಗಮಿಸಿದ್ದರು. ಕೆಲವರು ಮಾಸ್ಕ್‌ ಧರಿಸಿದರೇ ಇನ್ನು ಕೆಲವರು ಮಾಸ್ಕ್‌ ಇಲ್ಲದೆ ಹಬ್ಬದ ವ್ಯಾಪಾರ ಮಾಡಲು ಆಗಮಿಸಿದನ್ನು ಗಮನಿಸಿದ ಪೌರಾಯುಕ್ತ ಅವರಿಗೆ ಮಾಸ್ಕ್ ನೀಡಿ ದಂಡ ವಿಧಿಸಿದರು.

‘ಹಬ್ಬಗಳು ಪ್ರತಿವರ್ಷ ಬರುತ್ತವೆ ಹೋಗುತ್ತವೆ. ಆದರೆ, ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ರೋಗ ನಿಯಂತ್ರಿಸಲು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು’ ಎಂದು ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.

ಈ ವೇಳೆ ಕಂದಾಯ ಅಧಿಕಾರಿ ಅಲ್ಕೆಝಂಡರ್, ಕಂದಾಯ ನಿರೀಕ್ಷಕ ರಿಯಾಜುದ್ದೀನ್, ಹಿರಿಯ ಆರೋಗ್ಯ ನಿರೀಕ್ಷಕ ಸಲೀಂ ವುದ್ದೀನ್, ಕಿರಿಯ ಆರೋಗ್ಯ ನಿರೀಕ್ಷಕ ಸಿದ್ದಾರ್ಥ, ಪರಿಸರ ಎಂಜನಿಯರ್‌ ರವಿಂದ್ರ ಕಾಂಬಳೆ, ಶರಣಮ್ಮ, ಸುರೇಶ ವಿಭೂತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT