ನೆರೆ ಪ್ರವಾಹಕ್ಕೆ ಬರಲಿಲ್ಲ: ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಕೆಲ ದಿನಗಳಿಂದ ಹಿಂದೆ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಆದರೆ, ನೆರೆ ಪ್ರವಾಹಕ್ಕೆ ಬರಲಿಲ್ಲ ಎಂದು ಸುಭಾಷ ಐಕೂರ ಆರೋಪಿಸುತ್ತಾರೆ.
ಐಕೂರು– ಹಯ್ಯಾಳ ಗ್ರಾಮಗಳ ರಸ್ತೆ ನದಿ ನೀರಿನಿಂದ ಸಂಪರ್ಕ ಕಡೆದುಕೊಂಡಿದೆ. ಇದರಿಂದ ಜನರು ಹೊರಗಡೆ ಬರಲು ಹೆದರುತ್ತಿದ್ದಾರೆ. ಆದರೂ ಜನಪ್ರತಿನಿಧಿಗಳು ಜನರ ಸಮಸ್ಯೆ ಆಲಿಸದಿರುವುದು ಖಂಡನೀಯ ಎನ್ನುತ್ತಾರೆ ಅವರು.