<p><strong>ಯಾದಗಿರಿ:</strong> ‘ಮಹಲ್ ರೋಜಾದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಫೋಕ್ಸೊ ಪ್ರಕರಣ ದಾಖಲು ಮಾಡಬಾರದಿತ್ತು. ವಿಡಿಯೊದಲ್ಲಿ ಏನಿದೆ ಎಂಬುದನ್ನು ವಾಸ್ತವ ನೋಡದೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಟ್ವಿಸ್ಟ್ ಮಾಡಿ ಪ್ರಸಾರ ಮಾಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.</p>.<p>ನಗರದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಮುತ್ಯಾ ಅವರನ್ನು ಯಾರೇ ಭೇಟಿಯಾದರೂ ಅವರನ್ನು ಹಚ್ಚಿಕೊಂಡು ಪ್ರೀತಿಯಿಂದ ಮಾತಾಡಿಸುತ್ತಾರೆ, 7 ವರ್ಷದ ಮಗುವನ್ನು ಅದೇ ಪ್ರೀತಿಯಿಂದ ಮುದ್ದು ಮಾಡಿದ್ದಾರೆ. ವಾಸ್ತವ ನೋಡದೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳು ಪ್ರಸಾರ ಮಾಡಿದರೆ ಮಗು, ಆಕೆಯ ಕುಟುಂಬದ ಸ್ಥಿತಿ ಏನಾಗಬೇಕು’ ಎಂದರು.</p>.<p>‘ಮಗುವಿನ ತಂದೆ– ತಾಯಿ ಕಣ್ಣೀರು ಹಾಕುತ್ತಾ ನನ್ನ ಬಳಿ ಬಂದಿದ್ದಾರೆ. ಇದರಲ್ಲಿ ಆಯೋಗಗಳು ಅವಸರ ಮಾಡಿವೆ’ ಎಂದು ಹೇಳಿದರು.</p>.<p class="Subhead">ಮೋದಿ ರಾಜೀನಾಮೆ ಯಾವಾಗ?: ‘ಬಿಜೆಪಿ ಪಕ್ಷವನ್ನು ಕಟ್ಟಿದ ಮಹಾನ್ ನಾಯಕರನ್ನು ವಯಸ್ಸಿನ ಕಾರಣಕ್ಕೆ ಹೊರಹಾಕಿದ ಪ್ರಧಾನಿ ಮೋದಿ ಅವರಿಗೆ 75 ವರ್ಷಗಳು ತುಂಬಿವೆ. ಅವರು ಯಾವಾಗ ರಾಜೀನಾಮೆ ಕೊಡುತ್ತಾರೆ’ ಎಂದು ಕೇಳಿದರು.</p>.<p>‘ಪಕ್ಷ ಕಟ್ಟಿ ಬೆಳೆಸಿ ಉಪಪ್ರಧಾನಿಯಾಗಿದ್ದ ಎಲ್.ಕೆ. ಅಡ್ವಾಣಿ ಅವರನ್ನು ಉಪರಾಷ್ಟ್ರಪತಿ ಮಾಡಲಿಲ್ಲ. ಮುರಳಿ ಮನೋಹರ್ ಜೋಶಿ, ಉಮಾ ಭಾರತಿ ಅವರನ್ನು ಹೊರ ಹಾಕಿದರು. 75 ವರ್ಷ ತುಂಬಿದ ಮೋದಿ ಅವರೂ ರಾಜೀನಾಮೆ ಕೊಡಬೇಕಲ್ಲವೇ? ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೇಳುವವರು ಈ ಬಗ್ಗೆಯೂ ಪ್ರಶ್ನಿಸಬೇಕಲ್ಲವಾ’ ಎಂದರು.</p>.<p>‘ಸಿಎಂ ಬದಲಾವಣೆ ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದು ಸಿಎಂ, ಡಿಸಿಎಂ ಹೇಳಿದ್ದರೂ ಮಾಧ್ಯಮಗಳು ಒಂದೂವರೆ ವರ್ಷದಿಂದ ಗಂಟು ಬಿದ್ದಿದ್ದಾರೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ‘ಮಹಲ್ ರೋಜಾದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಫೋಕ್ಸೊ ಪ್ರಕರಣ ದಾಖಲು ಮಾಡಬಾರದಿತ್ತು. ವಿಡಿಯೊದಲ್ಲಿ ಏನಿದೆ ಎಂಬುದನ್ನು ವಾಸ್ತವ ನೋಡದೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಟ್ವಿಸ್ಟ್ ಮಾಡಿ ಪ್ರಸಾರ ಮಾಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.</p>.<p>ನಗರದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಮುತ್ಯಾ ಅವರನ್ನು ಯಾರೇ ಭೇಟಿಯಾದರೂ ಅವರನ್ನು ಹಚ್ಚಿಕೊಂಡು ಪ್ರೀತಿಯಿಂದ ಮಾತಾಡಿಸುತ್ತಾರೆ, 7 ವರ್ಷದ ಮಗುವನ್ನು ಅದೇ ಪ್ರೀತಿಯಿಂದ ಮುದ್ದು ಮಾಡಿದ್ದಾರೆ. ವಾಸ್ತವ ನೋಡದೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳು ಪ್ರಸಾರ ಮಾಡಿದರೆ ಮಗು, ಆಕೆಯ ಕುಟುಂಬದ ಸ್ಥಿತಿ ಏನಾಗಬೇಕು’ ಎಂದರು.</p>.<p>‘ಮಗುವಿನ ತಂದೆ– ತಾಯಿ ಕಣ್ಣೀರು ಹಾಕುತ್ತಾ ನನ್ನ ಬಳಿ ಬಂದಿದ್ದಾರೆ. ಇದರಲ್ಲಿ ಆಯೋಗಗಳು ಅವಸರ ಮಾಡಿವೆ’ ಎಂದು ಹೇಳಿದರು.</p>.<p class="Subhead">ಮೋದಿ ರಾಜೀನಾಮೆ ಯಾವಾಗ?: ‘ಬಿಜೆಪಿ ಪಕ್ಷವನ್ನು ಕಟ್ಟಿದ ಮಹಾನ್ ನಾಯಕರನ್ನು ವಯಸ್ಸಿನ ಕಾರಣಕ್ಕೆ ಹೊರಹಾಕಿದ ಪ್ರಧಾನಿ ಮೋದಿ ಅವರಿಗೆ 75 ವರ್ಷಗಳು ತುಂಬಿವೆ. ಅವರು ಯಾವಾಗ ರಾಜೀನಾಮೆ ಕೊಡುತ್ತಾರೆ’ ಎಂದು ಕೇಳಿದರು.</p>.<p>‘ಪಕ್ಷ ಕಟ್ಟಿ ಬೆಳೆಸಿ ಉಪಪ್ರಧಾನಿಯಾಗಿದ್ದ ಎಲ್.ಕೆ. ಅಡ್ವಾಣಿ ಅವರನ್ನು ಉಪರಾಷ್ಟ್ರಪತಿ ಮಾಡಲಿಲ್ಲ. ಮುರಳಿ ಮನೋಹರ್ ಜೋಶಿ, ಉಮಾ ಭಾರತಿ ಅವರನ್ನು ಹೊರ ಹಾಕಿದರು. 75 ವರ್ಷ ತುಂಬಿದ ಮೋದಿ ಅವರೂ ರಾಜೀನಾಮೆ ಕೊಡಬೇಕಲ್ಲವೇ? ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೇಳುವವರು ಈ ಬಗ್ಗೆಯೂ ಪ್ರಶ್ನಿಸಬೇಕಲ್ಲವಾ’ ಎಂದರು.</p>.<p>‘ಸಿಎಂ ಬದಲಾವಣೆ ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದು ಸಿಎಂ, ಡಿಸಿಎಂ ಹೇಳಿದ್ದರೂ ಮಾಧ್ಯಮಗಳು ಒಂದೂವರೆ ವರ್ಷದಿಂದ ಗಂಟು ಬಿದ್ದಿದ್ದಾರೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>