ಹುಣಸಗಿ: ‘ಒತ್ತಡದ ಬದುಕಿನಲ್ಲಿಯೂ ಸದಾ ಚೈತನ್ಯದಿಂದ ಕೂಡಿರಲು ಪ್ರತಿಯೊಬ್ಬರೂ ಬಿಡುವು ಮಾಡಿಕೊಂಡು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಶಾಸಕ ನರಸಿಂಹನಾಯಕ (ರಾಜೂಗೌಡ) ಹೇಳಿದರು.
ಪಟ್ಟಣದ ಭಾಗ್ಯನಗರ(ತಾಂಡಾ) ರಸ್ತೆಯಲ್ಲಿನ ಒಳಾಂಗಣದಲ್ಲಿ ಶನಿವಾರ ಸಂಜೆ ನೀಲಕಂಠೇಶ್ವರ ಶಟಲ್ ಬ್ಯಾಡ್ಮಿಂಟನ್ ಕ್ಲಬ್ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಯುಕವರು ಇಂತಹ ಕ್ರೀಡಾಕೂಟಗಳನ್ನು ಆಗಾಗ ಆಯೋಜಿಸಬೇಕು. ಸದಾ ಕ್ರೀಡಾಪಟುಗಳಿಗೆ ಬೆಂಬಲವಾಗಿ ನಿಲ್ಲುತ್ತೇನೆ’ ಎಂದು ಭರವಸೆ ನೀಡಿದರು.
ಶಾಸಕರೊಂದಿಗೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ರಾಜಾ ಹನುಮಪ್ಪನಾಯಕ(ತಾತಾ), ಸುರೇಶ ಸಜ್ಜನ್, ಯಲ್ಲಪ್ಪ ಕುರುಕುಂದಿ ಬ್ಯಾಡ್ಮಿಂಟನ್ ಆಟವಾಡಿದರು.
ಬಿಜೆಪಿಯ ಮಂಡಲ ಅಧ್ಯಕ್ಷ ಮೇಲಪ್ಪ ಗುಳಗಿ, ಎಂ.ಎಸ್.ಚಂದಾ, ಡಾ. ವೀರಭದ್ರಗೌಡ ಹೊಸಮನಿ, ಬಿ.ಎಂ.ಅಳ್ಳಿಕೋಟಿ, ಮಲ್ಲು ನವಲಗುಡ್ಡ, ಸಂಗಮೇಶ ಹೂಗಾರ, ಕ್ಲಬ್ನ ಗುರುನಾಥ ಹುಲಕಲ್, ಹೊನ್ನಕೇಶವ ದೇಸಾಯಿ, ರಾಜಶೇಖರ ದೇಸಾಯಿ ಇದ್ದರು. 40ಕ್ಕೂ ಹೆಚ್ಚು ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು.