ಇಲಾಖೆಯ ಅಧಿಕಾರಿಗಳು ಸಮರ್ಪಕವಾದ ಮಾಹಿತಿ ನೀಡಿದೇ ತಡವರಿಸಿದರು. ಇದರಿಂದ ಬೇಸರ ವ್ಯಕ್ತಪಡಿಸಿದ ಶಾಸಕರು, ‘ಮೊದಲು ಮಳೆಯಿಂದ ಎಷ್ಟು ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ, ಬಿದ್ದ ಮನೆಗಳ ಸಂಖ್ಯೆ ಎಷ್ಟು, ಕಳೆದ ವರ್ಷ ಬೆಳೆ ಹಾನಿಯಿಂದ ರೈತರಿಗೆ ಬಂದ ಪರಿಹಾರ ಎಷ್ಟು, ಸಣ್ಣ ವ್ಯಾಪಾರಸ್ಥರಿಗೆ ಅನುದಾನ ಬಿಡುಗಡೆಯಾಗಿದೆಯೇ... ಎಂಬುದನ್ನು ನಿಖರವಾಗಿ ತಿಳಿಸಿ’ ಎಂದು ತಹಶೀಲ್ದಾರ್ ಜಗನಾಥರಡ್ಡಿ ಅವರನ್ನು ಪ್ರಶ್ನಿಸಿದರು. ಆದರೆ, ತಹಶೀಲ್ದಾರ್ ಮಾತ್ರ ಅರೆಬರೆ ಮಾಹಿತಿ ನೀಡಿ ಮೌನಕ್ಕೆ ಶರಣಾದರು.