‘ಹಿಂದೆ ಬೀದರ್ನಲ್ಲಿ ಸಿಖ್ ಸಮುದಾಯದ ಮೇಲೆದಂಗೆಯಾಗಿ ಇಡೀ ಬೀದರ್ ಉದ್ವಿಗ್ನಗೊಂಡಿದ್ದ ವೇಳೆ ಸರ್ಕಾರ ರಚಿಸಿದ ಶಾಂತಿ ಸಮಿತಿ ಸಂಚಾಲಕರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದರು. ಕೂಡಲ ಸಂಗಮ ಅಭಿವೃದ್ಧಿ ಪರಿಕಲ್ಪನೆಯನ್ನು ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಲ್ಲದೆ, ಅಸ್ಪೃಶ್ಯತಾ ನಿವಾರಣೆ ಮತ್ತು ವರದಕ್ಷಿಣೆ ವಿರೋಧಿ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಅವರ ಹೆಸರು ಮುಂದಿನ ಪೀಳಿಗೆಗೆ ಉಳಿಯಬೇಕು’ ಆದ್ದರಿಂದ ಕ್ರೀಡಾಂಗಣಕ್ಕೆ ಅವರ ಹೆಸರಿಡುವುದು ಸೂಕ್ತವಾಗಿದೆ’ ಎಂದರು.
ಮುಖಂಡರಾದ ಮೋಹನ್ಬಾಬು, ಆರ್.ವಿಶ್ವನಾಥರೆಡ್ಡಿಅಬ್ಬೆತುಮಕೂರ, ಮಹೇಶ, ರುದ್ರಗೌಡ, ಗೋಪಾಲ ದಾಸನಕೇರಿ, ಶರಣಗೌಡ ಕಾಳೆಬೆಳಗುಂದಿ, ರಾಜು ಹೆಂದೆ, ಸುಗೂರೇಶ ಪಾಟೀಲ, ವೆಂಕಟರೆಡ್ಡಿ ಅಬ್ಬೆತುಮಕೂರು, ನಗರಸಭೆ ಸದಸ್ಯ ಹಣಮಂತ ಇಟಗಿ, ಅಂಬಯ್ಯ ಶಾಬಾದಿ, ವಿಲಾಸ ಪಾಟೀಲ, ಸ್ವಾಮಿದೇವ ದಾಸನಕೇರಿ, ಶಿವರಾಜ ದಾಸನಕೇರಿ, ಮಾರುತಿ ಕಲಾಲ, ಕಿಟ್ಟು ನಾಯಕ, ಸಾಬು ಚಂಡರಕಿ ಇದ್ದರು.