<p>ನಾರಾಯಣಪುರ (ಹುಣಸಗಿ): ‘ರೈತರ ಸಹನೆಯ ಕಟ್ಟೆ ಒಡೆಯುವ ಮುನ್ನ ಅಧಿಕಾರಿಗಳು ಮತ್ತು ಸರ್ಕಾರ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಬೇಕು’ ಎಂದು ಮಹೇಶ ಸುಬೇದಾರ ಹೇಳಿದರು.</p>.<p>ಹಿಂಗಾರು ಬೆಳೆಗಳಿಗೆ ಕಾಲುವೆ ನೀರು ಹರಿಸಲು ಒತ್ತಾಯಿಸಿ ಹುಣಸಗಿ ತಾಲ್ಲೂಕಿನ ನಾರಾಯಣಪುರ ಗ್ರಾಮದ ಮುಖ್ಯ ಎಂಜಿನಿಯರ್ ಕಚೇರಿ ಎದುರು ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.</p>.<p>‘ತಾಪಮಾನ ಅಧಿಕವಾಗಿದ್ದು, ಕಾಳುಕಟ್ಟುತ್ತಿರುವ ಬೆಳೆಗಳು ಬಾಡುವ ಹಂತಕ್ಕೆ ತಲುಪುತ್ತಿವೆ. ರೈತರ ಹಿತ ಕಾಪಾಡಲು ಶೀಘ್ರವೇ ಅಧಿಕಾರಿಗಳು ಮುಂದಾಗಬೇಕು’ ಎಂದರು.</p>.<p>ಸ್ಥಳಕ್ಕೆ ಆಗಮಿಸಿದ್ದ ನಿಗಮದ ಎಸ್ಇ ರಮೇಶ ರಾಠೋಡ ಅವರೊಂದಿಗೆ ರಾಜ್ಯ ಸಂಚಾಲಕ ನಾಗಯ್ಯ ದೇಸಾಯಿಗುರು ಮಾತನಾಡಿ ನೀರು ಹರಿಸುವವರೆಗೂ ನಮ್ಮ ಧರಣಿ ಮುಂದುವರಿಯಲಿದೆ ಎಂದು ಹೇಳಿದರು.</p>.<p>ಧರಣಿಯಲ್ಲಿ ಭಾಗವಹಿಸಿದ ರೈತ ಸಂಘದ ಪದಾಧಿಕಾರಿಗಳು ಮತ್ತು ರೈತರಿಗೆ ರಾಜನಕೋಳೂರು, ಬೈಲಕುಂಟಿ, ಬೊಮ್ಮಗುಡ್ಡ ಕೊಡೇಕಲ್ಲ ಗ್ರಾಮಗಳಿಂದ ರೈತ ಮಹಿಳೆಯರು ರೊಟ್ಟಿ, ಪಲ್ಯ, ಹುಣಸೆ ತೊಕ್ಕು, ಅನ್ನ ಸಾಂಬರ ಮಾಡಿಕೊಂಡು ಬುತ್ತಿತಂದು ಊಟ ಬಡಿಸಿದರು.</p>.<p>ಧರಣಿಯು ಬುಧವಾರ ಎರಡನೆ ದಿನ ಮುಗಿಸಿ ಗುರುವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.</p>.<p>ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಗುರುಲಿಂಗಪ್ಪ ಸಜ್ಜನ, ತಾಲ್ಲೂಕು ಗೌರವಾಧ್ಯಕ್ಷ ಶಂಕರನಾಯಕ, ಮುಖಂಡರಾದ ಮಲ್ಲನಗೌಡ ಪಾಟೀಲ, ತಾಲೂಕು ಅಧ್ಯಕ್ಷೆ ಸಂಗಮ್ಮ ಮುದಗಲ್ಲ, ಪಾರ್ವತಿ ಕೊಡೇಕಲ್ಲ, ಪ್ರಭು ನವಲಿ, ಮಾಳಪ್ಪ ಕಂದಗಲ್ಲ ಸೇರದಂತೆ ಇತರರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260326-30-1258829905</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಾರಾಯಣಪುರ (ಹುಣಸಗಿ): ‘ರೈತರ ಸಹನೆಯ ಕಟ್ಟೆ ಒಡೆಯುವ ಮುನ್ನ ಅಧಿಕಾರಿಗಳು ಮತ್ತು ಸರ್ಕಾರ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಬೇಕು’ ಎಂದು ಮಹೇಶ ಸುಬೇದಾರ ಹೇಳಿದರು.</p>.<p>ಹಿಂಗಾರು ಬೆಳೆಗಳಿಗೆ ಕಾಲುವೆ ನೀರು ಹರಿಸಲು ಒತ್ತಾಯಿಸಿ ಹುಣಸಗಿ ತಾಲ್ಲೂಕಿನ ನಾರಾಯಣಪುರ ಗ್ರಾಮದ ಮುಖ್ಯ ಎಂಜಿನಿಯರ್ ಕಚೇರಿ ಎದುರು ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.</p>.<p>‘ತಾಪಮಾನ ಅಧಿಕವಾಗಿದ್ದು, ಕಾಳುಕಟ್ಟುತ್ತಿರುವ ಬೆಳೆಗಳು ಬಾಡುವ ಹಂತಕ್ಕೆ ತಲುಪುತ್ತಿವೆ. ರೈತರ ಹಿತ ಕಾಪಾಡಲು ಶೀಘ್ರವೇ ಅಧಿಕಾರಿಗಳು ಮುಂದಾಗಬೇಕು’ ಎಂದರು.</p>.<p>ಸ್ಥಳಕ್ಕೆ ಆಗಮಿಸಿದ್ದ ನಿಗಮದ ಎಸ್ಇ ರಮೇಶ ರಾಠೋಡ ಅವರೊಂದಿಗೆ ರಾಜ್ಯ ಸಂಚಾಲಕ ನಾಗಯ್ಯ ದೇಸಾಯಿಗುರು ಮಾತನಾಡಿ ನೀರು ಹರಿಸುವವರೆಗೂ ನಮ್ಮ ಧರಣಿ ಮುಂದುವರಿಯಲಿದೆ ಎಂದು ಹೇಳಿದರು.</p>.<p>ಧರಣಿಯಲ್ಲಿ ಭಾಗವಹಿಸಿದ ರೈತ ಸಂಘದ ಪದಾಧಿಕಾರಿಗಳು ಮತ್ತು ರೈತರಿಗೆ ರಾಜನಕೋಳೂರು, ಬೈಲಕುಂಟಿ, ಬೊಮ್ಮಗುಡ್ಡ ಕೊಡೇಕಲ್ಲ ಗ್ರಾಮಗಳಿಂದ ರೈತ ಮಹಿಳೆಯರು ರೊಟ್ಟಿ, ಪಲ್ಯ, ಹುಣಸೆ ತೊಕ್ಕು, ಅನ್ನ ಸಾಂಬರ ಮಾಡಿಕೊಂಡು ಬುತ್ತಿತಂದು ಊಟ ಬಡಿಸಿದರು.</p>.<p>ಧರಣಿಯು ಬುಧವಾರ ಎರಡನೆ ದಿನ ಮುಗಿಸಿ ಗುರುವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.</p>.<p>ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಗುರುಲಿಂಗಪ್ಪ ಸಜ್ಜನ, ತಾಲ್ಲೂಕು ಗೌರವಾಧ್ಯಕ್ಷ ಶಂಕರನಾಯಕ, ಮುಖಂಡರಾದ ಮಲ್ಲನಗೌಡ ಪಾಟೀಲ, ತಾಲೂಕು ಅಧ್ಯಕ್ಷೆ ಸಂಗಮ್ಮ ಮುದಗಲ್ಲ, ಪಾರ್ವತಿ ಕೊಡೇಕಲ್ಲ, ಪ್ರಭು ನವಲಿ, ಮಾಳಪ್ಪ ಕಂದಗಲ್ಲ ಸೇರದಂತೆ ಇತರರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260326-30-1258829905</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>