ಹುಣಸಗಿ: ಸೋಮವಾರ (ಏ.5) ರಾತ್ರಿಯಿಂದ ನಾರಾಯಣಪುರ ಎಡದಂಡೆ ಕಾಲುವೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ.ಮೊದಲು ಮಾ. 31 ರವರೆಗೆ ನೀರು ಹರಿಸಲು ನಿರ್ಧರಿಸಲಾಗಿತ್ತು.
ಸುರಪುರ ಶಾಸಕ ರಾಜೂಗೌಡ ಅವರು ಉಪ ಮುಖ್ಯಮಂತ್ರಿ, ಐಸಿಸಿ ಸಮಿತಿ ಅಧ್ಯಕ್ಷ ಗೋವಿಂದ ಕಾರಜೋಳ ಅವರನ್ನು ಭೇಟಿ ಮಾಡಿ ಏ.5 ರವರೆಗೂ ನೀರು ಹರಿಸುವಂತೆ ಮನವಿ ಮಾಡಿದ್ದರು. ಆದ್ದರಿಂದ ಏ. 5 ರವರೆಗೂ ನೀರು ಹರಿಸಲಾಯಿತು.
ಏ.10 ರವರೆಗೂ ನೀರು ಹರಿಸಬೇಕು ಎಂದು ಹಲವು ಸಂಘಟನೆಗಳು ಹಾಗೂ ಪ್ರಮುಖರು ಮನವಿ ಮಾಡಿದ್ದರು.