ಕೃಷಿ ಹೊಂಡ, ಬದು ನಿರ್ಮಾಣದಲ್ಲಿ ನೀರು ಸಂಗ್ರಹ: ಕಳೆದ ಎರಡ್ಮೂರು ದಿನಗಳಿಂದ ಜಿಲ್ಲೆಯ ಶಹಾಪುರ, ಸುರಪುರ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಈಗಾಗಲೇ ನರೇಗಾ ಕಾಮಗಾರಿಯಲ್ಲಿ ನಿರ್ಮಿಸಿದಕೃಷಿಹೊಂಡ, ಬದುನಿರ್ಮಾಣ ಮತ್ತು ಕೆರೆ ಹೂಳೆತ್ತಿದ್ದರಿಂದ ನೀರು ತುಂಬಿ ಕೊಂಡಿದೆ. ಇದರಿಂದ ಅಂತರ್ಜಲ ಮಟ್ಟವೂ ಹೆಚ್ಚಳವಾಗುತ್ತದೆ. ಇದು ಕೂಲಿ ಕಾರ್ಮಿಕರು ಮಾಡಿದ ಸಾರ್ಥಕ ಕೆಲಸವಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.