<p><strong>ಯಾದಗಿರಿ:</strong> ಶಾಲೆಯಿಂದ ಹೊರಗುಳಿದ, ಎಸ್ಎಸ್ಎಲ್ಸಿ ಮತ್ತು ಪಿಯುಸಿ ಫೇಲಾದ 14ರಿಂದ 18 ವರ್ಷದೊಳಗಿನ ಮಕ್ಕಳಿಗೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್ಐಒಎಸ್) ಮಿತ್ರ ಉಪಕ್ರಮದಡಿ ಮುಕ್ತ ಮತ್ತು ದೂರ ಶಿಕ್ಷಣ ನೀಡುವ ಯೋಜನೆಗೆ ಯಾದಗಿರಿ ಜಿಲ್ಲೆ ಆಯ್ಕೆಯಾಗಿದೆ.</p>.<p>ಪ್ರತಿ ವಿದ್ಯಾರ್ಥಿಗೆ ಸ್ಥಳೀಯ ಆರ್ಥಿಕ ಅವಕಾಶಗಳಿಗೆ ಅನುಗುಣವಾಗಿ ಉದ್ಯೋಗಾರ್ಹ ಕೌಶಲ ಮತ್ತು ಶಿಕ್ಷಣ ಒದಗಿಸಲು ‘ಎನ್ಐಒಎಸ್ ಮಿತ್ರ’ ಯೋಜನೆಯನ್ನು ಕೇಂದ್ರ ಶಿಕ್ಷಣ ಸಚಿವಾಲಯವು ಅನುಷ್ಠಾನಕ್ಕೆ ತರುತ್ತಿದೆ. ಯಾದಗಿರಿ ಸೇರಿದಂತೆ, ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಹೆಚ್ಚಿರುವ ದೇಶದ ಅಗ್ರ 10 ಜಿಲ್ಲೆಗಳನ್ನು ಈ ಯೋಜನೆಗಾಗಿ ಪ್ರಾಯೋಗಿಕವಾಗಿ ಆಯ್ಕೆ ಮಾಡಿದೆ.</p>.<p>ಎಸ್ಎಸ್ಎಲ್ಸಿ, ಪಿಯು ಪರೀಕ್ಷೆಯಲ್ಲಿ ಫೇಲಾದ, ಹಾಜರಾತಿ ಕೊರತೆಯಿಂದ ಪರೀಕ್ಷೆ ವಂಚಿತರಾದ ಮಕ್ಕಳ ಸಂಖ್ಯೆಯೂ ಜಿಲ್ಲೆಯಲ್ಲಿ ಹೆಚ್ಚಿದೆ. ಆ ಎಲ್ಲರನ್ನು ಯೋಜನೆಯಡಿ ಗುರುತಿಸಿ ಸ್ಥಳೀಯವಾಗಿ ಮುಕ್ತ ಮತ್ತು ದೂರ ಶಿಕ್ಷಣ ಕಲ್ಪಿಸುವ ಮಹತ್ವಾಕಾಂಕ್ಷೆಯನ್ನು ಈ ಯೋಜನೆ ಹೊಂದಿದೆ. </p>.<p>‘ಜಿಲ್ಲೆಯಲ್ಲಿ 14ರಿಂದ 18 ವರ್ಷ ವಯಸ್ಸಿನ, ಎಸ್ಎಸ್ಎಲ್ಸಿ ಫೇಲಾದ, ಶಾಲೆಯಿಂದ ಹೊರಗುಳಿದ ಮಕ್ಕಳ ವಿವರ ಸಂಗ್ರಹಿಸಲಾಗುತ್ತಿದೆ. ಅತಿಹೆಚ್ಚು ಮಕ್ಕಳು ಕಂಡುಬರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿಎಂಶ್ರೀ ಅಥವಾ ಪ್ರೌಢಶಾಲೆಗಳಲ್ಲಿ ‘ಎನ್ಐಒಎಸ್ ಮಿತ್ರ’ಕ್ಕಾಗಿ ಪ್ರತ್ಯೇಕ ಕಲಿಕಾ ಕೇಂದ್ರ ಮಾಡಲಾಗುವುದು’ ಎಂದು ಡಿಡಿಪಿಐ ಚನ್ನಬಸಪ್ಪ ಮುಧೋಳ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಮಕ್ಕಳ ಮನವೊಲಿಸಿ ಕಲಿಕಾ ಕೇಂದ್ರದಲ್ಲಿ ದಾಖಲಿಸುವ ಸಿಆರ್ಸಿ, ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಪಾವತಿಯಾಗಲಿದೆ. ಪ್ರತಿ ವಿದ್ಯಾರ್ಥಿಗೆ ಕನಿಷ್ಠ ಶುಲ್ಕ ನಿಗದಿಪಡಿಸಿ, ಶಿಕ್ಷಕರೊಬ್ಬರನ್ನು ‘ಎನ್ಐಒಎಸ್ ಮಿತ್ರ’ಕ್ಕೆ ನಿಯೋಜಿಸಲಾಗುವುದು. ಎಸ್ಎಸ್ಎಲ್ಸಿ ಹಾಗೂ ಪಿಯುಸಿಗೆ ಪ್ರತ್ಯೇಕವಾದ ಪಠ್ಯ, ಅಸೈನ್ಮೆಂಟ್ಗಳು ಇರಲಿವೆ. ಎನ್ಐಒಎಸ್ ಮಿತ್ರ ಪರೀಕ್ಷೆಯಲ್ಲಿ ತೇರ್ಗಡೆಯಾದವರ ಅಂಕಪಟ್ಟಿಗೆ ಎಸ್ಎಲ್ಎಲ್ಸಿ ಹಾಗೂ ಪಿಯು ಅಂಕಪಟಿಗಳಿಗೆ ಸರಿಸಮಾನವಾದ ಮಾನ್ಯತೆ ಸಿಗಲಿದೆ. ಅದನ್ನು ಸರ್ಕಾರಿ ಹುದ್ದೆಗಳ ನೇಮಕಾತಿ, ಉನ್ನತ ಶಿಕ್ಷಣಕ್ಕೂ ಬಳಸಿಕೊಳ್ಳಬಹುದು’ ಎಂದರು.</p>.<div><blockquote>ಶಾಲೆಯಿಂದ ಹೊರಗುಳಿದ ಪ್ರತಿಯೊಬ್ಬರನ್ನು ‘ಎನ್ಐಒಎಸ್ ಮಿತ್ರ’ ಯೋಜನೆಯ ವ್ಯಾಪ್ತಿಗೆ ತಂದು, ಕಲಿಕಾ ಕೇಂದ್ರದಲ್ಲಿ ದಾಖಲು ಮಾಡುವಂತೆಯೂ ಪೋಷಕರ ಮನವೊಲಿಸುತ್ತೇವೆ </blockquote><span class="attribution">– ಚನ್ನಬಸಪ್ಪ ಮುಧೋಳ, ಡಿಡಿಪಿಐ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ಶಾಲೆಯಿಂದ ಹೊರಗುಳಿದ, ಎಸ್ಎಸ್ಎಲ್ಸಿ ಮತ್ತು ಪಿಯುಸಿ ಫೇಲಾದ 14ರಿಂದ 18 ವರ್ಷದೊಳಗಿನ ಮಕ್ಕಳಿಗೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್ಐಒಎಸ್) ಮಿತ್ರ ಉಪಕ್ರಮದಡಿ ಮುಕ್ತ ಮತ್ತು ದೂರ ಶಿಕ್ಷಣ ನೀಡುವ ಯೋಜನೆಗೆ ಯಾದಗಿರಿ ಜಿಲ್ಲೆ ಆಯ್ಕೆಯಾಗಿದೆ.</p>.<p>ಪ್ರತಿ ವಿದ್ಯಾರ್ಥಿಗೆ ಸ್ಥಳೀಯ ಆರ್ಥಿಕ ಅವಕಾಶಗಳಿಗೆ ಅನುಗುಣವಾಗಿ ಉದ್ಯೋಗಾರ್ಹ ಕೌಶಲ ಮತ್ತು ಶಿಕ್ಷಣ ಒದಗಿಸಲು ‘ಎನ್ಐಒಎಸ್ ಮಿತ್ರ’ ಯೋಜನೆಯನ್ನು ಕೇಂದ್ರ ಶಿಕ್ಷಣ ಸಚಿವಾಲಯವು ಅನುಷ್ಠಾನಕ್ಕೆ ತರುತ್ತಿದೆ. ಯಾದಗಿರಿ ಸೇರಿದಂತೆ, ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಹೆಚ್ಚಿರುವ ದೇಶದ ಅಗ್ರ 10 ಜಿಲ್ಲೆಗಳನ್ನು ಈ ಯೋಜನೆಗಾಗಿ ಪ್ರಾಯೋಗಿಕವಾಗಿ ಆಯ್ಕೆ ಮಾಡಿದೆ.</p>.<p>ಎಸ್ಎಸ್ಎಲ್ಸಿ, ಪಿಯು ಪರೀಕ್ಷೆಯಲ್ಲಿ ಫೇಲಾದ, ಹಾಜರಾತಿ ಕೊರತೆಯಿಂದ ಪರೀಕ್ಷೆ ವಂಚಿತರಾದ ಮಕ್ಕಳ ಸಂಖ್ಯೆಯೂ ಜಿಲ್ಲೆಯಲ್ಲಿ ಹೆಚ್ಚಿದೆ. ಆ ಎಲ್ಲರನ್ನು ಯೋಜನೆಯಡಿ ಗುರುತಿಸಿ ಸ್ಥಳೀಯವಾಗಿ ಮುಕ್ತ ಮತ್ತು ದೂರ ಶಿಕ್ಷಣ ಕಲ್ಪಿಸುವ ಮಹತ್ವಾಕಾಂಕ್ಷೆಯನ್ನು ಈ ಯೋಜನೆ ಹೊಂದಿದೆ. </p>.<p>‘ಜಿಲ್ಲೆಯಲ್ಲಿ 14ರಿಂದ 18 ವರ್ಷ ವಯಸ್ಸಿನ, ಎಸ್ಎಸ್ಎಲ್ಸಿ ಫೇಲಾದ, ಶಾಲೆಯಿಂದ ಹೊರಗುಳಿದ ಮಕ್ಕಳ ವಿವರ ಸಂಗ್ರಹಿಸಲಾಗುತ್ತಿದೆ. ಅತಿಹೆಚ್ಚು ಮಕ್ಕಳು ಕಂಡುಬರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿಎಂಶ್ರೀ ಅಥವಾ ಪ್ರೌಢಶಾಲೆಗಳಲ್ಲಿ ‘ಎನ್ಐಒಎಸ್ ಮಿತ್ರ’ಕ್ಕಾಗಿ ಪ್ರತ್ಯೇಕ ಕಲಿಕಾ ಕೇಂದ್ರ ಮಾಡಲಾಗುವುದು’ ಎಂದು ಡಿಡಿಪಿಐ ಚನ್ನಬಸಪ್ಪ ಮುಧೋಳ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಮಕ್ಕಳ ಮನವೊಲಿಸಿ ಕಲಿಕಾ ಕೇಂದ್ರದಲ್ಲಿ ದಾಖಲಿಸುವ ಸಿಆರ್ಸಿ, ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಪಾವತಿಯಾಗಲಿದೆ. ಪ್ರತಿ ವಿದ್ಯಾರ್ಥಿಗೆ ಕನಿಷ್ಠ ಶುಲ್ಕ ನಿಗದಿಪಡಿಸಿ, ಶಿಕ್ಷಕರೊಬ್ಬರನ್ನು ‘ಎನ್ಐಒಎಸ್ ಮಿತ್ರ’ಕ್ಕೆ ನಿಯೋಜಿಸಲಾಗುವುದು. ಎಸ್ಎಸ್ಎಲ್ಸಿ ಹಾಗೂ ಪಿಯುಸಿಗೆ ಪ್ರತ್ಯೇಕವಾದ ಪಠ್ಯ, ಅಸೈನ್ಮೆಂಟ್ಗಳು ಇರಲಿವೆ. ಎನ್ಐಒಎಸ್ ಮಿತ್ರ ಪರೀಕ್ಷೆಯಲ್ಲಿ ತೇರ್ಗಡೆಯಾದವರ ಅಂಕಪಟ್ಟಿಗೆ ಎಸ್ಎಲ್ಎಲ್ಸಿ ಹಾಗೂ ಪಿಯು ಅಂಕಪಟಿಗಳಿಗೆ ಸರಿಸಮಾನವಾದ ಮಾನ್ಯತೆ ಸಿಗಲಿದೆ. ಅದನ್ನು ಸರ್ಕಾರಿ ಹುದ್ದೆಗಳ ನೇಮಕಾತಿ, ಉನ್ನತ ಶಿಕ್ಷಣಕ್ಕೂ ಬಳಸಿಕೊಳ್ಳಬಹುದು’ ಎಂದರು.</p>.<div><blockquote>ಶಾಲೆಯಿಂದ ಹೊರಗುಳಿದ ಪ್ರತಿಯೊಬ್ಬರನ್ನು ‘ಎನ್ಐಒಎಸ್ ಮಿತ್ರ’ ಯೋಜನೆಯ ವ್ಯಾಪ್ತಿಗೆ ತಂದು, ಕಲಿಕಾ ಕೇಂದ್ರದಲ್ಲಿ ದಾಖಲು ಮಾಡುವಂತೆಯೂ ಪೋಷಕರ ಮನವೊಲಿಸುತ್ತೇವೆ </blockquote><span class="attribution">– ಚನ್ನಬಸಪ್ಪ ಮುಧೋಳ, ಡಿಡಿಪಿಐ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>