ಕೃಷಿ ಪ್ರಧಾನವಾಗಿರುವ ಈ ಗ್ರಾಮದಲ್ಲಿ 3 ಸಾವಿರಕ್ಕೂ ಹೆಚ್ಚು ಜಾನುವಾರುಗಳಿವೆ. ಆದರೆ ಪಶು ಚಿಕಿತ್ಸಾಲಯದಲ್ಲಿ ಪೂರ್ಣಕಾಲಿಕ ವೈದ್ಯರಿಲ್ಲದ ಕಾರಣ ಚಿಕಿತ್ಸೆ ಸಿಗದಂತಾಗಿದೆ. ಅಲ್ಲದೆ ಗುಲುಗುಂದಿ, ಮಲಕಪ್ಪನಳ್ಳಿ, ಲಿಂಗಸನಳ್ಳಿ, ಥಾವರುನಾಯಕ, ತಾನುನಾಯಕ, ಕೇಮುನಾಯಕ, ಅಡಮಡಿ ತಾಂಡಾ ಸೇರಿದಂತೆ ಸುತ್ತಮುತ್ತಲಿನ ರೈತರು ಜಾನುವಾರುಗಳನ್ನು ಚಿಕಿತ್ಸೆಗಾಗಿ ಇಲ್ಲಿಯೆ ಕರೆದುಕೊಂಡು ಬರುತ್ತಾರೆ.