ಲಸಿಕಾ ಮೇಳದಲ್ಲಿ ಭಾಗವಹಿಸಿದ್ದ ನರ್ಸ್ಪುಷ್ಪಾಂಜಲಿ ಅವರು ವ್ಯಕ್ತಿಯೊಬ್ಬರಿಗೆ ಲಸಿಕೆ ನೀಡುವ ಸಮಯದಲ್ಲಿ ತಲೆ ಸುತ್ತು ಬಂದು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಜೊತೆಯಲ್ಲಿದ್ದ ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರು ನೀರು ಕುಡಿಸಿದರೂ ಎಚ್ಚರಗೊಳ್ಳದೆ ಮೂರ್ಛೆ ಹೋಗಿದ್ದಾರೆ. ಕೂಡಲೇ ಯಾದಗಿರಿಯ ಶರಣಬಸವ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ರಕ್ತದಲ್ಲಿ ಸಕ್ಕರೆ ಪ್ರಮಾಣ, ರಕ್ತದೋತ್ತಡ ಹೆಚ್ಚಳಗೊಂಡಿದ್ದು, ತಪಾಸಣೆಯಿಂದ ತಿಳಿದು ಬಂದಿದೆ.