ನಾರಾಯಣಪುರ ಎಡದಂಡೆ ಕಾಲುವೆಗೆ ಬೇಸಿಗೆ ಹಂಗಾಮಿನ ಬೆಳೆಗೆ ಸಾಕಷ್ಟು ನೀರು ಹರಿದು ಬಂದಿದ್ದರಿಂದ ರೈತರು ಉತ್ಸಾಹದಿಂದ ಭತ್ತದ ವಿವಿಧ ತಳಿಗಳಾದ ಸುಜಾತ, ಆರ್.ಎಸ್– 22 ನಾಟಿ ಮಾಡಿದ್ದರು. ಕಟಾವು ಕಾರ್ಯ ಮುಕ್ತಾಯವಾಗಿದೆ. ಸಂಗ್ರಹಿಸಿ ಇಟ್ಟಿರುವ ಭತ್ತವನ್ನು ಮಾರಾಟ ಮಾಡಲು ರೈತರು ತೆರಳಿದರೆ ಧಾರಣೆ ತೀವ್ರವಾಗಿ ನೆಲಕಚ್ಚಿದೆ. 77 ಕೆ.ಜಿ ಭತ್ತದ
ಧಾರಣೆ ₹800 ಆಗಿದೆ.