ನಿಗದಿಪಡಿಸಿದ ಅವಧಿ ಮುಕ್ತಾಯವಾದಂತೆ ರಸ್ತೆಗಳಿಂದ ಡಿವೈಎಸ್ಪಿ ವೆಂಕಟೇಶ ಹೊಗಿಬಂಡಿ ಹಾಗೂ ತಹಶೀಲ್ದಾರ್ ಜಗನ್ನಾಥರಡ್ಡಿ ಅವರು ನಗರದ ಬಸವೇಶ್ವರ ವೃತ್ತ, ಸಿ.ಬಿ.ಕಮಾನ, ಮೋಚಿಗಡ್ಡೆ, ಹೊಸ ಬಸ್ ನಿಲ್ದಾಣ ಮುಂತಾದ ಕಡೆ ಭೇಟಿ ನೀಡಿ ಅಂಗಡಿ ಮುಂಗಟ್ಟು ಬಂದ್ ಮಾಡಿಸುವುದರ ಜೊತೆಗೆ ಅನವಶ್ಯವಾಗಿ ವಾಹನ ಸವಾರರ ಓಡಾಟಕ್ಕೆ ಬ್ರೇಕ್ ಹಾಕಿದರು. ದ್ವಿಚಕ್ರ ವಾಹನ ಸವಾರರನ್ನು ಹಿಡಿದು ಬಸ್ಕಿ ಹೊಡೆಸಿದರು.