ಸೋಮವಾರ ಮಧ್ಯಾಹ್ನದಿಂದ ಭೀಮಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ ತಾಲ್ಲೂಕು ಆಡಳಿತ ಸಿಬ್ಬಂದಿ ಹಾಲಗೇರಾ, ನಾಯ್ಕಲ್, ಬಬಲಾದ ಗಡ್ಡೆಸೂಗೂರ, ಕುಮನೂರ ಅರ್ಜುಣಗಿ, ಕಂದಳ್ಳಿ, ಬೂದಿನಾಳ, ಬೆನಕನಹಳ್ಳಿ, ಶಿವನೂರ ಸೇರಿದಂತೆ 20ಕ್ಕೂ ಹೆಚ್ಚು ಹಳ್ಳಿಗಳಿಗೆ ಬಸ್ ಕಳುಹಿಸಿ ಆಯಾ ಸಮೀಪದ ಕಾಳಜಿ ಕೇಂದ್ರಗಳಿಗೆ ಬರುವಂತೆ ಮಾಡಿದರು.