ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಕಂದಕೂರ ಗ್ರಾಮದ ಬೆಟ್ಟದ ಮೇಲಿರುವ ಕೊಂಡಮ್ಮದೇವಿ ದೇವಸ್ಥಾನ ಆವರಣದಲ್ಲಿಕರ್ನಾಟಕ ಜನಸೇನಾ ಸಂಘಟನೆಯಿಂದ ಶನಿವಾರ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆಸಂಘಟನೆಯ ರಾಜ್ಯ ಘಟಕ ಅಧ್ಯಕ್ಷ ಮೈಲಾರಪ್ಪ ಜಾಗೀರ್ದಾರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ಮಾತನಾಡಿ,ನಾವು ಪರಿಸರ ರಕ್ಷಣೆ ಮಾಡಿದರೆ ಮಾತ್ರ ಸಮಾಜದಲ್ಲಿ ಆರೋಗ್ಯದಿಂದ ಬಾಳಲು ಸಾಧ್ಯ. ಈ ನಿಟ್ಟಿನಲ್ಲಿ ಪರಿಸರ ರಕ್ಷಣೆ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ.ಯುವಕರು ಸಮಾಜಮುಖಿ ಕಾರ್ಯಗಳಿಗೆ ಕೈಜೋಡಿಸಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ನಾವು ಮಾಡುತ್ತಿರುವ ಕೆಲವು ತಪ್ಪುಗಳಿಂದ ನಿಸರ್ಗದಲ್ಲಿ ವ್ಯತ್ಯಾಸವಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಯುವಕರು ಪರಿಸರ ರಕ್ಷಣೆ ಕುರಿತು ಜನರಲ್ಲಿ ಅಗತ್ಯ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಈ ವೇಳೆ ಸಂಘಟನೆಯ ಅನಿಲರೆಡ್ಡಿ ಕಂದಕೂರು, ಅಶೋಕ ಐಕೂರ, ಮಂಜುನಾಥ ಬಡಿಗೇರ ಬಾಚವಾರ, ಮಲ್ಲಿಕಾರ್ಜುನ ಹೊನಗೇರಾ, ನಾಗಪ್ಪ ಬೋಯಿನ್, ಸಾಯಿರೆಡ್ಡಿ ಗುರುಮಿಠಕಲ್, ಸಿದ್ದು ಮಾದ್ವಾರ, ಪರಶುರಾಮ್ ಬಂದಳ್ಳಿ, ಶರಣರೆಡ್ಡಿ ಕಂದಕೂರ ಸೇರಿದಂತೆ ಇದ್ದರು