ಕ್ಯಾಮೆರಾಮನ್ ಮೇಲೆ ಪೊಲೀಸರ ಹಲ್ಲೆ: ಖಂಡನೆ

ಯಾದಗಿರಿ: ವಿಜಯಪುರ ನಗರದಲ್ಲಿ ಖಾಸಗಿ ವಾಹಿನಿಯ ಕ್ಯಾಮೆರಾಮನ್ ಮೇಲೆ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗುರುವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕೂರ್ಮಾರಾವ್ ಅವರಿಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಬಿ.ಎಂ. ಜಗದೀಶ, ‘ವಿಜಯಪುರದಲ್ಲಿ ಖಾಸಗಿ ವಾಹಿನಿ ಟಿವಿ5 ಕ್ಯಾಮೆರಾಮನ್ ಸುರೇಶ ಚಿನಗುಂಡಿ ಅವರ ಮೇಲೆ ಮೂವರು ಪೊಲೀಸರು ಮಾಡಿರುವುದು ಖಂಡನೀಯ. ಹಲ್ಲೆ ನಡೆಸಿರುವ ಪೊಲೀಸ್ ಕಾನ್ಸ್ಪೆಬಲ್ ಬಸವರಾಜ ಮತ್ತು ಮತ್ತಿಬ್ಬರ ವಿರುದ್ಧ ಕ್ರಮ ಕೈಗೊಳ್ಳಬೇಕು.ಇಂತಹ ಘಟನೆ ಮರುಕಳುಹಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದರು.
ಪತ್ರಕರ್ತರ ಮೇಲೆ ನಿರಂತರ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಕ್ಷಣೆ ಇಲ್ಲದಂತಾಗಿದೆ. ಇದಕ್ಕೆ ಕಡಿವಾಣ ಹಾಕುವಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸಂಘದ ಜಿಲ್ಲಾ ಉಪಾಧ್ಯಕ್ಷ ಇಂದೂಧರ ಶಿನ್ನೂರು, ರಾಜ್ಯ ಸದಸ್ಯ ಅನಿಲ್ ದೇಶಪಾಂಡೆ, ಸದಸ್ಯರಾದ ಲಕ್ಷ್ಮೀಕಾಂತ ಕುಲಕರ್ಣಿ, ಸೈಯದ್ ಸಾಜಿದ್ ಹಯ್ಯಾತ, ರಾಜು ನಳ್ಳಿಕರ್, ಪತ್ರಕರ್ತ ಡಾ. ಶರಣು ಗದ್ದುಗೆ, ಶಂಕರಬಾಬುರೆಡ್ಡಿ, ನಾಗಪ್ಪ ಮಾಲಿ ಪಾಟೀಲ, ಸತೀಶ ಮೂಲಿಮನಿ, ರಾಜೇಶ ಪಾಟೀಲ್, ದೇವು ವರ್ಕನಳ್ಳಿ, ಶಂಕ್ರಪ್ಪ ಅರುಣಿ, ಅನಿಲ್ ಬಸೂದೆ, ಪರಮೇಶರೆಡ್ಡಿ , ನಾಗಪ್ಪ ನಾಯ್ಕಲ್, ಕುಮಾರಸ್ವಾಮಿ ಕಲಾಲ್, ರುಪೇಶ ಹುಲಿಕರ್, ಲಕ್ಷ್ಮಿಕಾಂತ ಲಿಂಗೇರಿ, ನಾಗರಾಜ ಪಾಟೀಲ ಉಪಸ್ಥಿತರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.