ಪರಿಸರ ಮಾಲಿನ್ಯ ತಡೆಗಟ್ಟಲು ಪಿಒಪಿ ಬದಲು ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಜಿಲ್ಲಾಡಳಿತ ಹಲವು ಬಾರಿ ಸಭೆ ಕರೆದು ಸಂಘ ಸಂಸ್ಥೆಗಳಿಗೆ, ಗಣೇಶ ಉತ್ಸವ ಸಮಿತಿಗಳಿಗೆ ಸೂಚಿಸಿತ್ತು. ನಗರಸಭೆ ಅಧಿಕಾರಿಗಳು ಪಿಒಪಿ ಗಣೇಶ ಮೂರ್ತಿ ತಯಾರಕರಿಗೆ ನೋಟಿಸ್ ನೀಡಿ ತಯಾರು ಮಾಡದಂತೆ ಕಟ್ಟುನಿಟ್ಟಾಗಿ ಆದೇಶ ಮಾಡಿದ್ದರು. ಆದರೆ, ಜಿಲ್ಲಾಡಳಿತ, ನಗರಸಭೆ ಸೂಚನೆಗೆ ಕಿವಿಗೊಡದ ಸಮಿತಿಗಳು ನಗರದ ಬಹುತೇಕ ಕಡೆಗಳಲ್ಲಿ ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದವು.