‘ಧಾರ್ಮಿಕ ವಿಷಯದಲ್ಲಿ ಕಾನೂನು ಬಾಹಿರವಾಗಿ ಹಸ್ತಕ್ಷೇಪ ಮಾಡಿದ್ದು ಖಂಡನಾರ್ಹ. 13 ವರ್ಷದಲ್ಲಿ ಹಲವು ರೀತಿಯ ವಿಗ್ರಹಗಳನ್ನು ಉಪಯೋಗಿಸಿದಾಗ ಯಾವುದೇ ತೊಂದರೆ ಇಲ್ಲದಿರುವುದು ಈ ಬಾರಿ ನಿಷೇಧ ಹೇರಿದ್ದು ನಾಚಿಗೇಡಿನ ಸಂಗತಿ’ ಎಂದು ದೂರಿದರು.
‘ರಾಜಕೀಯ ಒತ್ತಡಕ್ಕೆ ಮಣಿದು ಹಿಂದೂಗಳ ಧಾರ್ಮಿಕ ಹಕ್ಕನ್ನು ಹತ್ತಿಕ್ಕಿದ ಕ್ರಮ ಸರಿಯಲ್ಲ. ಹೀಗಾಗಿಮುಖ್ಯಮಂತ್ರಿ ಮಧ್ಯ ಪ್ರವೇಶಿಸಿ ನ್ಯಾಯ ಒದಗಿಸಬೇಕು. ತಹಶೀಲ್ದಾರ್ ಆದೇಶ ರದ್ದುಗೊಳಿಸಬೇಕು. ದತ್ತಾತ್ರೇಯ ಕಲ್ಲಿನ ವಿಗ್ರಹವನ್ನು ಮುಂದಿನ ದಿನಗಳಲ್ಲಿ ಅಡತಡೆ ಇಲ್ಲದೇ ಶೋಭಾಯಾತ್ರೆಗೆ ಉಪಯೋಗಿಸಲು ಆದೇಶಿಸಬೇಕು. ದತ್ತಪೀಠ ಶೀಘ್ರ ಹಿಂದೂಗಳಿಗೆ ಒಪ್ಪಿಸಬೇಕು’ ಎಂದು ಅವರು ಒತ್ತಾಯಿಸಿದರು.
ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಾಂಕ ನಾಯಕ, ತಾಲ್ಲೂಕು ಅಧ್ಯಕ್ಷ ಸಂದೀಪ ಮಹೇಂದ್ರಕರ್, ಅಂಬ್ರೇಷ್ ತಡಿಬಿಡಿ, ಹಣಮಂತ್ರಾಯ ಪಾಟೀಲ, ಸುಭಾಷ ದೇವದುರ್ಗ, ದೇವಿಂದ್ರ ಮಸ್ಕನಳ್ಳಿ, ಶಿವಾನಂದ ಮುಂಡರಗಿ, ಮಲ್ಲಿಕಾರ್ಜುನ ವರ್ಕನಳ್ಳಿ, ಸಾಬಣ್ಣ ಮಸ್ಕನಳ್ಳಿ, ಅಂಜಪ್ಪ ಮಸ್ಕನಳ್ಳಿ, ಮುಖೇಶ ರಾಮಸಮುದ್ರ, ಸಾಬಯ್ಯ ರಾಮಸಮುದ್ರ, ಜಗದೀಶ ಪಾಟೀಲ ಲಿಂಗೇರಿ, ರಮೇಶ ಲಿಂಗೇರಿ, ಈರಣ್ಣ ವಾಲಿ ಇದ್ದರು.