ಈ ಕುರಿತು ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಅವರು, ‘ನಗರಸಭೆ ವ್ಯಾಪ್ತಿಯ ವಣಿಕಿಹಾಳ ಸೀಮಾಂತರದ ಸರ್ವೇ ನಂ. 186 ರಲ್ಲಿ 180 ಮತ್ತು ಖಾನಾಪುರ ಎಸ್ಎಚ್ ಸೀಮಾಂತರದ ವೆಂಕಟಾಪುರ ಹತ್ತಿರದ ಸರ್ವೇ ನಂ. 95, 96 ರಲ್ಲಿ 300 ಫಲಾನುಭವಿಗಳಿಗೆ ಪುರಸಭೆ ವತಿಯಿಂದ ಆಶ್ರಯ ಯೋಜನೆಯಡಿ 1997-98ನೇ ಸಾಲಿನಲ್ಲಿ ನಿವೇಶನ ರಹಿತರಿಗೆ ಹಕ್ಕು ಪತ್ರ ಒದಗಿಸಲಾಗಿತ್ತು. ಇದುವರೆಗೂ ನಿವೇಶನ ಒದಗಿಸಿಲ್ಲ’ ಎಂದು ದೂರಿದ್ದಾರೆ.