<p>ಕೆಂಭಾವಿ: ಸಮೀಪದ ಬೈಚಬಾಳ–ಕೂಡಲಗಿ ಹಾಗೂ ಕರಡಕಲ್ ಗ್ರಾಮಗಳ 43 ರೈತರಿಗೆ ಭತ್ತ ಖರೀದಿ ಹೆಸರಿನಲ್ಲಿ ಮೋಸ ಮಾಡಿದ ಪ್ರಕರಣದಲ್ಲಿ ಭಾಗಶಃ ನ್ಯಾಯ ದೊರೆತಿದ್ದು, ₹ 71 ಲಕ್ಷ ಹಣವನ್ನು ಮರುಪಾವತಿಸಲಾಗಿದೆ.</p>.<p>ಕಳೆದ ಅಕ್ಟೋಬರ್ – ನವೆಂಬರ್ ತಿಂಗಳಲ್ಲಿ ರೈತರು ಮುಂಗಾರು ಭತ್ತವನ್ನು ಬೆಳೆದು, ಉತ್ತಮ ಬೆಲೆ ನಿರೀಕ್ಷೆಯಲ್ಲಿ ಆಂಧ್ರ ಮೂಲದ ವ್ಯಕ್ತಿಗೆ ಸುಮಾರು ₹ 1.49 ಕೋಟಿ ಮೌಲ್ಯದ ಭತ್ತವನ್ನು ಮಾರಾಟ ಮಾಡಿದ್ದರು. ಆದರೆ, ವ್ಯಾಪಾರಿ ರೈತರಿಗೆ ಹಣ ನೀಡದೆ ಪರಾರಿಯಾಗಿದ್ದ ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರು.</p>.<p>ಈ ಹಿಂದೆ ಮಾಜಿ ಸಚಿವ ರಾಜೂಗೌಡ ಅವರು ರೈತರೊಂದಿಗೆ ಸೇರಿ ಕೆಂಭಾವಿ ಪೊಲೀಸ್ ಠಾಣೆಗೆ ತೆರಳಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ದೂರು ದಾಖಲಿಸಲು ನೆರವಾಗಿದ್ದರು. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದರು.</p>.<p>ಇದಾದ ಬಳಿಕ ಸುಮಾರು ಐದಾರು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ದಲ್ಲಾಳಿಯಿಂದ ₹ 71 ಲಕ್ಷ ಹಣವನ್ನು ವಸೂಲಿ ಮಾಡಿ, ಬೈಚಬಾಳ ಗ್ರಾಮದ ಬಲಭೀಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ರಾಜುಗೌಡ ಅವರು ಸ್ವತಃ ರೈತರಿಗೆ ಹಣ ವಿತರಿಸಿದರು.</p>.<p>ಈ ವೇಳೆ ಯಲ್ಲಪ್ಪ ಕುರಕುಂದಿ, ಕೃಷ್ಣಾರೆಡ್ಡಿ ಮುದನೂರ, ಪ್ರವೀಣ ನಾಯಕ್, ನಿಂಗಣ್ಣ ಗೋಡಿಹಾಳ್ಕರ್, ಬಸವರಾಜ ನಾಯಕ್, ವೆಂಕನಗೌಡ ಪೊಲೀಸ್ ಪಾಟೀಲ ಸೇರಿದಂತೆ ಅನೇಕರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260507-30-1123644735</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೆಂಭಾವಿ: ಸಮೀಪದ ಬೈಚಬಾಳ–ಕೂಡಲಗಿ ಹಾಗೂ ಕರಡಕಲ್ ಗ್ರಾಮಗಳ 43 ರೈತರಿಗೆ ಭತ್ತ ಖರೀದಿ ಹೆಸರಿನಲ್ಲಿ ಮೋಸ ಮಾಡಿದ ಪ್ರಕರಣದಲ್ಲಿ ಭಾಗಶಃ ನ್ಯಾಯ ದೊರೆತಿದ್ದು, ₹ 71 ಲಕ್ಷ ಹಣವನ್ನು ಮರುಪಾವತಿಸಲಾಗಿದೆ.</p>.<p>ಕಳೆದ ಅಕ್ಟೋಬರ್ – ನವೆಂಬರ್ ತಿಂಗಳಲ್ಲಿ ರೈತರು ಮುಂಗಾರು ಭತ್ತವನ್ನು ಬೆಳೆದು, ಉತ್ತಮ ಬೆಲೆ ನಿರೀಕ್ಷೆಯಲ್ಲಿ ಆಂಧ್ರ ಮೂಲದ ವ್ಯಕ್ತಿಗೆ ಸುಮಾರು ₹ 1.49 ಕೋಟಿ ಮೌಲ್ಯದ ಭತ್ತವನ್ನು ಮಾರಾಟ ಮಾಡಿದ್ದರು. ಆದರೆ, ವ್ಯಾಪಾರಿ ರೈತರಿಗೆ ಹಣ ನೀಡದೆ ಪರಾರಿಯಾಗಿದ್ದ ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರು.</p>.<p>ಈ ಹಿಂದೆ ಮಾಜಿ ಸಚಿವ ರಾಜೂಗೌಡ ಅವರು ರೈತರೊಂದಿಗೆ ಸೇರಿ ಕೆಂಭಾವಿ ಪೊಲೀಸ್ ಠಾಣೆಗೆ ತೆರಳಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ದೂರು ದಾಖಲಿಸಲು ನೆರವಾಗಿದ್ದರು. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದರು.</p>.<p>ಇದಾದ ಬಳಿಕ ಸುಮಾರು ಐದಾರು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ದಲ್ಲಾಳಿಯಿಂದ ₹ 71 ಲಕ್ಷ ಹಣವನ್ನು ವಸೂಲಿ ಮಾಡಿ, ಬೈಚಬಾಳ ಗ್ರಾಮದ ಬಲಭೀಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ರಾಜುಗೌಡ ಅವರು ಸ್ವತಃ ರೈತರಿಗೆ ಹಣ ವಿತರಿಸಿದರು.</p>.<p>ಈ ವೇಳೆ ಯಲ್ಲಪ್ಪ ಕುರಕುಂದಿ, ಕೃಷ್ಣಾರೆಡ್ಡಿ ಮುದನೂರ, ಪ್ರವೀಣ ನಾಯಕ್, ನಿಂಗಣ್ಣ ಗೋಡಿಹಾಳ್ಕರ್, ಬಸವರಾಜ ನಾಯಕ್, ವೆಂಕನಗೌಡ ಪೊಲೀಸ್ ಪಾಟೀಲ ಸೇರಿದಂತೆ ಅನೇಕರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260507-30-1123644735</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>