ಹಾವ ಭಾವ, ಕಂಚಿನ ಕಂಠ, ಸ್ತ್ರೀ, ಪುರುಷ ಪಾತ್ರಗಳೆರಡರಲ್ಲಿನಅಭಿನಯ, ಪರಕಾಯ ಪ್ರವೇಶ ಮಾಡುತ್ತಿದ್ದ ರಾಮಚಂದ್ರಪ್ಪ ಎರಡು ಮೂರು ದಿವಸಗಳವರೆಗೂ ಪಾತ್ರದ ಗುಂಗಿನಿಂದ ಹೊರಬರುತ್ತಿರಲಿಲ್ಲ ಎನ್ನುತ್ತಾರೆ ಕಲಾವಿದ ಭೀಮಣ್ಣ ಚಾಮನೂರ.
ಕೃಷಿಕರಾದ ಅವರು, ಕಿರಾಣಿ ಅಂಗಡಿಯನ್ನು ಇಟ್ಟುಕೊಂಡಿದ್ದಾರೆ. ಇಡೀ ಜೀವನವನ್ನು ದೊಡ್ಡಾಟದಲ್ಲೆ ಕಳೆದಿದ್ದಾರೆ.