‘ಸೋಂಕಿನ ಲಕ್ಷಣಗಳು ಇಲ್ಲದಿದ್ದವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಸಾಂಸ್ಥಿಕ ಕ್ವಾರಂಟೈನ್ಗಳಿಂದ ಬಿಡುಗಡೆ ಮಾಡಲಾಗುತ್ತಿದೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಆದರೆ, ಸೋಂಕಿನ ಲಕ್ಷಣಗಳೇ ಇಲ್ಲದಿದ್ದರೂ ಕೋವಿಡ್–19 ದೃಢ ಪಟ್ಟ ಉದಾಹರಣಗಳಿವೆ. ಹೀಗಾಗಿ ಅವರ ವರದಿ ಬರುವ ತನಕ ಜಿಲ್ಲಾಡಳಿತ ಕಾಯಬೇಕಿತ್ತು. ಈಗ ಅವರನ್ನು ಮನೆಗೆ ಕಳಿಸಿ ಎಡವಟ್ಟು ಮಾಡಿದೆ ಎಂದು ಜೆಡಿಎಸ್ ಯುವ ಮುಖಂಡ ಶರಣಗೌಡ ಕಂದಕೂರ ಆರೋಪಿಸುತ್ತಾರೆ.