<p><strong>ಯಾದಗಿರಿ:</strong> ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿನ (ಆರ್ಒ) ಘಟಕಗಳನ್ನು ಸ್ಥಾಪಿಸಿ, ಆ ಮೂಲಕ ಗ್ರಾಮಗಳ ಪ್ರತಿಯೊಬ್ಬರಿಗೂ ಶುದ್ಧ ನೀರು ಸರಬರಾಜು ಮಾಡಲು ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದೆ. ಆದರೆ, ನಿರ್ಮಾಣವಾದ ಆರ್ಒ ಘಟಕಗಳ ವಾಸ್ತವ ಸ್ಥಿತಿ ಬೇರೆಯೇ ಇದೆ. ಏಜೆನ್ಸಿ ಸಮಸ್ಯೆ, ನಿರ್ವಹಣೆ ಇಲ್ಲದೆ ಹಲವು ಘಟಕಗಳು ಬಾಗಿಲು ಮುಚ್ಚಿವೆ.</p>.<p>ಶತಮಾನಗಳಿಂದ ಜಿಲ್ಲೆಯ ಜೀವ ನಾಡಿಯಾಗಿ ಜನ–ಜಾನುವಾರುಗಳ ದಾಹ ಇಂಗಿಸಿದ್ದ ಕೃಷ್ಣಾ ಮತ್ತು ಭೀಮಾ ನದಿಗಳು ಅಲ್ಲಲ್ಲಿ ಕಲುಷಿತವಾಗಿವೆ. ನದಿ ತೀರದ ನಗರ, ಪಟ್ಟಣ ಹಾಗೂ ಗ್ರಾಮಗಳ ಜನರ ನೇರವಾಗಿ ನದಿ ನೀರು ಬಳಸುವಂತಿಲ್ಲ. ಅವುಗಳ ಹೊರತಾಗಿ ಕೆರೆ– ಕಟ್ಟೆಗಳೂ ಕೆಲವೆಡೆ ಕಲುಷಿತವಾಗಿವೆ. ಬೇಸಿಗೆಯಲ್ಲಿ ಕೊಳವೆ ಬಾವಿಗಳು, ತೆರೆದ ಬಾವಿಗಳು ಬತ್ತುವುದು ಸಹಜವಾಗಿದೆ. ಇದಕ್ಕೆ ಪರಿಹಾರ ಎಂಬಂತೆ ನಿರ್ಮಾಣ ಮಾಡಲಾದ ಆರ್ಒ ಘಟಕಗಳಿಂದಲೂ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ.</p>.<p>ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್ಐಡಿಎಲ್), ಕಲ್ಯಾಣ ಕರ್ನಾಟಕ ಪ್ರದೇಶಾ ಭಿವೃದ್ಧಿ ಮಂಡಳಿ, ಸಹಕಾರಿ ಸಂಘಗಳು ಸೇರಿ ಮತ್ತಿತರ ಸಂಘ–ಸಂಸ್ಥೆಗಳ ನೆರವಿನಿಂದ ಜಿಲ್ಲೆಯಲ್ಲಿ 471 ಆರ್ಒ ಘಟಕಗಳನ್ನು ಅಳವಡಿಕೆ ಮಾಡಲಾಗಿದೆ. ಅದರಲ್ಲಿ 219 ಘಟಕಗಳು ಶುದ್ಧ ನೀರು ಕೊಡುವುದನ್ನೇ ನಿಲ್ಲಿಸಿ, ತಾವೇ ನೀರಿಗಾಗಿ ಬಾಯಾರಿವೆ. ಕಾರ್ಯ ನಿರ್ವಹಿಸುತ್ತಾ ಶುದ್ಧ ನೀರು ಪೂರೈಸುತ್ತಿರುವುದು 252 ಘಟಕಗಳು.</p>.<p>14 ಘಟಕಗಳು ಜಲ ಮೂಲದ ಸಮಸ್ಯೆಗಳಿಂದ ಉಪಯೋಗಕ್ಕೆ ಬರುತ್ತಿಲ್ಲ. ಒಂದು ಘಟಕಕ್ಕೆ ವಿದ್ಯುತ್ ಸಮಸ್ಯೆ ಇದ್ದರೆ 91 ಘಟಕಗಳಿಗೆ ಏಜೆನ್ಸಿ ಅಡ್ಡಿಯಾಗಿದೆ. ನಿರ್ವಹಣೆಯ ಕೊರತೆಗೆ 41 ಘಟಕಗಳು ಹಳ್ಳ ಹಿಡಿದರೆ, ಇತರೆ ಕಾರಣಗಳಿಂದಾಗಿ 32 ಆರ್ಒ ಪ್ಲಾಂಟ್ಗಳು ಕಾರ್ಯ ನಿರ್ವಹಿಸುತ್ತಿಲ್ಲ ಎನ್ನುತ್ತಿವೆ ಇಲಾಖೆಯ ಅಂಕಿಅಂಶಗಳು.</p>.<p>ತಾಂತ್ರಿಕ, ಆಡಳಿತಾತ್ಮಕದಂತಹ ಸಮಸ್ಯೆಯಿಂದಾಗಿ ಆರ್ಒ ಘಟಕಗಳು ಬಳಕೆಯಾಗದೆ ತುಕ್ಕು ಹಿಡಿಯುತ್ತಿವೆ. ಪ್ರತಿ ಬಾರಿ ಬೇಸಿಗೆ ಬಂದಾಗ ಮಾತ್ರವೇ ಆರ್ಒ ಪ್ಲಾಂಟ್ಗಳು ನೆನಪಾಗುತ್ತವೆ. ದುರಸ್ತಿ, ನಿರ್ವಹಣೆಗಾಗಿ ಲಕ್ಷಾಂತರ ರೂಪಾಯಿ ಸುರಿಯಲಾಗುತ್ತದೆ. ಆದರೂ ಶುದ್ಧ ಕುಡಿಯುವ ನೀರಿಗಾಗಿ ಹಳ್ಳಿಗರ ತತ್ವಾರ ಪಡುವುದು ತಪ್ಪುತ್ತಿಲ್ಲ. ಶಾಶ್ವತ ಪರಿಹಾರವೂ ಕಂಡುಕೊಳ್ಳಲು ಆಗುತ್ತಿಲ್ಲ ಎನ್ನುತ್ತಾರೆ ಶುದ್ಧ ಕುಡಿಯುವ ನೀರು ವಂಚಿತ ಗ್ರಾಮಸ್ಥರು.</p>.<p>‘ವಡಗೇರಾ ತಾಲ್ಲೂಕಿನ ತಡಿಬಿಡಿ ಗ್ರಾಮದ ಆರ್ಒ ಘಟಕ ಕೆಟ್ಟು ತಿಂಗಳುಗಳೇ ಕಳೆದರೂ ದುರಸ್ತಿಯಾಗಿಲ್ಲ. ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ದುರಸ್ತಿ ಮಾಡದೆ ನಿಷ್ಕಾಳಜಿ ಮುಂದುವರಿಸಿದರೆ ಪ್ರತಿಭಟನೆ ನಡೆಸಲಾಗುವುದು’ ಎನ್ನುತ್ತಾರೆ ವಿಷ್ಣ ಸೇನಾ ಸಮಿತಿಯ ಜಿಲ್ಲಾಧ್ಯಕ್ಷ ರವಿಕುಮಾರ ದೇವಮನಿ.</p>.<p>ಪೂರಕ ಮಾಹಿತಿ: ಅಶೋಕ ಸಾಲವಾಡಗಿ, ವಾಟ್ಕರ್ ನಾಮದೇವ, ಟಿ.ನಾಗೇಂದ್ರ, ಭೀಮಶೇನರಾವ್ ಕುಲಕರ್ಣಿ.</p>.<p> <strong>‘ದುರಸ್ತಿಗೆ ₹ 1.21 ಕೋಟಿ ಬಿಡುಗಡೆ’</strong></p><p> ‘ಜಿಲ್ಲೆಯಲ್ಲಿ ಆರ್ಒ ಘಟಕಗಳ ವಾರು ಸರ್ವೆ ಮಾಡಿದ್ದು ದುರಸ್ತಿಗಾಗಿ ₹ 1.21 ಕೋಟಿ ಬಿಡುಗಡೆಯಾಗಿದೆ. ಅಗತ್ಯ ಇರುವ ಹಾಗೂ ಒಂದೇ ಗ್ರಾಮದಲ್ಲಿ ಎರಡ್ಮೂರು ಘಟಕಗಳು ಇರುವಲ್ಲಿ ಒಂದನ್ನು ಆಯ್ಕೆ ಮಾಡಿ ದುರಸ್ತಿ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಪ್ರಭಾರ ಇಇ ಬಸವರಾಜ ಐರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು. ‘2015–16ರಲ್ಲಿ ನಿರ್ಮಾಣ ಮಾಡಲಾದ ಘಟಕಗಳ ಪೈಕಿ ಕೆಲವು ತಾತ್ಕಾಲಿಕ ಮತ್ತೆ ಕೆಲವು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ಇದುವರೆಗೂ ಆರ್ಒ ಪ್ಲಾಂಟ್ಗಳ ಮೆಂಬರೇನ್ ಬದಲಾವಣೆಯೇ ಮಾಡಿಲ್ಲ. ಹೀಗಾಗಿ ಕೆಟ್ಟು ನಿಂತವುಗಳನ್ನು ದುರಸ್ತಿ ಮಾಡಿ ಎಲ್ಲರಿಗೂ ನೀರು ಕೊಡುವ ವ್ಯವಸ್ಥೆ ಮಾಡಲಾಗುವುದು. ದುರಸ್ತಿಗೆ ಒಂದೊಂದು ಘಟಕಕ್ಕೆ ₹ 1 ಲಕ್ಷದಿಂದ ₹ 1.50 ಲಕ್ಷ ತಗುಲಬಹುದು’ ಎಂದು ಹೇಳುತ್ತಾರೆ. </p>.<p><strong>ಸುರಪುರ; 51 ಘಟಕಗಳಿಗೆ ಬೀಗ</strong></p><p><strong> ಸುರಪುರ:</strong> ತಾಲ್ಲೂಕಿನ 111 ಆರ್ಒ ಘಟಕಗಳ ಪೈಕಿ ನಾನಾ ಕಾರಣಗಳಿಂದಾಗಿ 51 ಘಟಕಗಳು ಸ್ಥಗಿತಗೊಂಡಿವೆ. ಬೇಸಿಗೆ ಆರಂಭವಾಗಿದ್ದು ನೀರಿನ ಸಮಸ್ಯೆ ಉಲ್ಬಣವಾಗುವ ಮೊದಲೇ ದುರಸ್ತಿ ಕಾರ್ಯ ಕೈಗೊಳ್ಳಬೇಕಿದೆ. ಕಳೆದ ವರ್ಷ ತೀವ್ರ ನೀರಿನ ಸಮಸ್ಯೆ ಎದುರಿಸಿದ್ದ ಗುತ್ತಿಬಸವೇಶ್ವರ ಮತ್ತು ಬೇವಿನಾಳ ಎಸ್.ಕೆ. ಗ್ರಾಮಕ್ಕೆ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಸಮಸ್ಯಾತ್ಮಕ ಗ್ರಾಮಗಳಾದ ಯಕ್ತಾಪುರ ತಳ್ಳಳ್ಳಿ (ಬಿ) ಆಶ್ರಯ ಕಾಲೊನಿ ಹೂವಿನಳ್ಳಿ ಐನಾಪುರ ಗ್ರಾಮಗಳಿಗೂ ಪರಿಹಾರ ಕಲ್ಪಿಸಬೇಕಿದೆ ಎನ್ನುತ್ತಾರೆ ಗ್ರಾಮಸ್ಥರು. ದೇವಪುರ ಗ್ರಾಮದ ಘಟಕ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಜಿಲ್ಲೆಯಲ್ಲಿ ಉತ್ತಮ ಆರ್ಒ ಘಟಕ ಎಂಬ ಹಿರಿಮೆಗೆ ಪಾತ್ರವಾಗಿದೆ. ಸ್ಥಗಿತಗೊಂಡ ಘಟಕಗಳನ್ನು ಶೀಘ್ರದಲ್ಲಿ ದುರಸ್ತಿ ಮಾಡಬೇಕಿದೆ.</p>.<p><strong>ದುರಸ್ತಿ ಹೆಸರಿನಲ್ಲಿ ಹಣ ಬಿಡುಗಡೆ </strong></p><p><strong>ಶಹಾಪುರ:</strong> ತಾಲ್ಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಹಾಗೂ ದುರಸ್ತಿಗೆ ಮಾಡಿದಷ್ಟು ಕಾಳಜಿ ನೀರು ಕೊಡುವಲ್ಲಿ ಸಿಬ್ಬಂದಿ ವಿಫಲರಾಗಿದ್ದಾರೆ ಎಂದು ಆರೋಪವಿದೆ. ‘ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿನ ಘಟಕಗಳು ಬಾಗಿಲು ಮುಚ್ಚಿವೆ. ಆದರೆ ಪ್ರತಿ ವರ್ಷ ದುರಸ್ತಿ ಹೆಸರಿನಲ್ಲಿ ಹಣ ಬಿಡುಗಡೆಯಾಗುತ್ತಲಿದೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಭೀಮರಾಯ ಬಾರಿಗಿಡ. ಗ್ರಾಮೀಣ ಭಾಗದ ಆರ್ಒ ಘಟಕ ಹಾಗೂ ವಿದ್ಯುತ್ ನಡುವೆ ಕರಳು ಬಳ್ಳಿಯ ಸಮಸ್ಯೆ ಇದೆ. ಘಟಕ ಸ್ಥಾಪಿಸಿದಲ್ಲಿ ಬೇಸಿಗೆಯಲ್ಲಿ ಕೊಳವೆ ಬಾವಿಯ ನೀರು ಬತ್ತಿ ಹೋಗುತ್ತವೆ. ಅನಿವಾರ್ಯವಾಗಿ ಘಟಕಕ್ಕೆ ಬೀಗ ಹಾಕಲಾಗುತ್ತದೆ. ಇದು ಹಲವು ವರ್ಷಗಳಿಂದ ನಡೆದುಕೊಂಡ ಬರುತ್ತಿದೆ. ಇದರ ಪರಿಹಾರಕ್ಕೆ ಯಾರು ಮುಂದಾಗುತ್ತಿಲ್ಲ ಎಂಬ ದೂರಿದೆ. ‘ನಗರದಲ್ಲಿ ನಗರಸಭೆ ಅಧೀನದಲ್ಲಿ 6 ಹಾಗೂ ಖಾಸಗಿ ವ್ಯಕ್ತಿಗಳಿಂದ ಸ್ಥಾಪಿಸಿದ 20 ಆರ್ಒ ಪ್ಲಾಂಟ್ ಇವೆ. ಖಾಸಗಿ ಕಂಪನಿಯವರು ಪ್ಲಾಸ್ಟಿಕ್ ಬಾಟಲ್ನಲ್ಲಿ ಮಾರಾಟ ಮಾಡುತ್ತಾರೆ. ಹೆಸರಿಗೆ ಅಷ್ಟೇ ಐಎಸ್ಐ ಲೇಬಲ್ ಇರುತ್ತದೆ. ಗುಣಮಟ್ಟದ ನೀರು ಇರುವುದಿಲ್ಲ. ಬಿಸಿಲಿನ ದಾಹ ನೀಗಿಸಿಕೊಳ್ಳಲು ಬಾಟಲಿ ನೀರು ಕುಡಿದು ಅದನ್ನು ಬಿಸಾಕಿ ಎಲ್ಲೆಂದರಲ್ಲಿ ಎಸೆಯುವುದು ಸಾಮಾನ್ಯವಾಗಿದೆ’ ಎನ್ನುತ್ತಾರೆ ಪರಿಸರ ಎಂಜಿನಿಯರ್ ಹರೀಶ ಸಜ್ಜನಶೆಟ್ಟಿ.</p>.<p><strong>ನಿರ್ವಹಣೆಯ ಕೊರತೆ</strong></p><p><strong> ಹುಣಸಗಿ:</strong> ತಾಲ್ಲೂಕಿನ 68 ಆರ್ಒ ಘಟಕಗಳಲ್ಲಿ 32 ಮಾತ್ರ ಸುಸ್ಥಿಯಲ್ಲಿದ್ದು ಕಾರ್ಯನಿರ್ವಹಿಸುತ್ತಿದ್ದು ಉಳಿದವು ಸ್ಥಗಿತವಾಗಿವೆ ಎನ್ನುತ್ತವೆ ತಾಲ್ಲೂಕು ಪಂಚಾಯಿತಿ ಮೂಲಗಳು. ಬೇಸಿಗೆ ಆರಂಭಕ್ಕೂ ಮುನ್ನವೇ ಕೆಲವೊಂದು ಗ್ರಾಮಗಳಲ್ಲಿ ಜಲಮೂಲಗಳ ಕೊರತೆ ಹಾಗೂ ದುರಸ್ತಿಯ ಕಾರಣದಿಂದಾಗಿ ಆರ್ಒ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ಹೆಬ್ಬಾಳ (ಕೆ) ಕನಗಂಡನಹಳ್ಳಿ ರಾಜವಾಳ ತಾಂಡಾ ಸೇರಿದಂತೆ ಇತರೆಡೆ ನೆಪ ಮಾತ್ರಕ್ಕೆ ಘಟಕಗಳಿವೆ. ಸರಿಯಾಗಿ ನೀರು ಬರುತ್ತಿಲ್ಲ ಎಂದು ದೂರುತ್ತಾರೆ ನಿಂಗು ಪಾಟೀಲ ಬಸನಗೌಡ ಪಾಟೀಲ. ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಆದ್ಯತೆ ನೀಡುತ್ತದೆ. ಆದರೆ ಅವುಗಳ ನಿರ್ವಹಣೆಯಲ್ಲಿ ಅಧಿಕಾರಿಗಳು ಸರಿಯಾಗಿ ಗಮನಹರಿಸುವುದಿಲ್ಲ ಎಂಬ ಮಾತುಗಳು ಗ್ರಾಮೀಣ ಭಾಗದಲ್ಲಿವೆ.</p> .<div><blockquote>ಒಂದು ಘಟಕದ ದುರಸ್ತಿಗೆ ₹ 50 ಸಾವಿರದಿಂದ ₹ 1.5 ಲಕ್ಷ ಖರ್ಚು ಮಾಡಲು ಅವಕಾಶವಿದೆ. ಅನುದಾನ ಬಂದಿದ್ದು ದುರಸ್ತಿ ಕಾರ್ಯ ಕೈಗೊಂಡಿದ್ದೇವೆ </blockquote><span class="attribution">–ಎಚ್.ಡಿ. ಪಾಟೀಲ, ಎಇಇ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಉಪ ವಿಭಾಗ ಸುರಪುರ</span></div>.<div><blockquote>ಹುಣಸಗಿ ತಾಲ್ಲೂಕಿನಲ್ಲಿ ಸುಸ್ಥಿತಿ ಹಾಗೂ ದುರಸ್ತಿಗೊಳಿಸಲು ಸಾಧ್ಯವಿರುವ ಎಲ್ಲ ಘಟಕಗಳನ್ನು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು </blockquote><span class="attribution">–ಬಸಣ್ಣ ನಾಯಕ್, ತಾ.ಪಂ. ಇಒ ಹುಣಸಗಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿನ (ಆರ್ಒ) ಘಟಕಗಳನ್ನು ಸ್ಥಾಪಿಸಿ, ಆ ಮೂಲಕ ಗ್ರಾಮಗಳ ಪ್ರತಿಯೊಬ್ಬರಿಗೂ ಶುದ್ಧ ನೀರು ಸರಬರಾಜು ಮಾಡಲು ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದೆ. ಆದರೆ, ನಿರ್ಮಾಣವಾದ ಆರ್ಒ ಘಟಕಗಳ ವಾಸ್ತವ ಸ್ಥಿತಿ ಬೇರೆಯೇ ಇದೆ. ಏಜೆನ್ಸಿ ಸಮಸ್ಯೆ, ನಿರ್ವಹಣೆ ಇಲ್ಲದೆ ಹಲವು ಘಟಕಗಳು ಬಾಗಿಲು ಮುಚ್ಚಿವೆ.</p>.<p>ಶತಮಾನಗಳಿಂದ ಜಿಲ್ಲೆಯ ಜೀವ ನಾಡಿಯಾಗಿ ಜನ–ಜಾನುವಾರುಗಳ ದಾಹ ಇಂಗಿಸಿದ್ದ ಕೃಷ್ಣಾ ಮತ್ತು ಭೀಮಾ ನದಿಗಳು ಅಲ್ಲಲ್ಲಿ ಕಲುಷಿತವಾಗಿವೆ. ನದಿ ತೀರದ ನಗರ, ಪಟ್ಟಣ ಹಾಗೂ ಗ್ರಾಮಗಳ ಜನರ ನೇರವಾಗಿ ನದಿ ನೀರು ಬಳಸುವಂತಿಲ್ಲ. ಅವುಗಳ ಹೊರತಾಗಿ ಕೆರೆ– ಕಟ್ಟೆಗಳೂ ಕೆಲವೆಡೆ ಕಲುಷಿತವಾಗಿವೆ. ಬೇಸಿಗೆಯಲ್ಲಿ ಕೊಳವೆ ಬಾವಿಗಳು, ತೆರೆದ ಬಾವಿಗಳು ಬತ್ತುವುದು ಸಹಜವಾಗಿದೆ. ಇದಕ್ಕೆ ಪರಿಹಾರ ಎಂಬಂತೆ ನಿರ್ಮಾಣ ಮಾಡಲಾದ ಆರ್ಒ ಘಟಕಗಳಿಂದಲೂ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ.</p>.<p>ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್ಐಡಿಎಲ್), ಕಲ್ಯಾಣ ಕರ್ನಾಟಕ ಪ್ರದೇಶಾ ಭಿವೃದ್ಧಿ ಮಂಡಳಿ, ಸಹಕಾರಿ ಸಂಘಗಳು ಸೇರಿ ಮತ್ತಿತರ ಸಂಘ–ಸಂಸ್ಥೆಗಳ ನೆರವಿನಿಂದ ಜಿಲ್ಲೆಯಲ್ಲಿ 471 ಆರ್ಒ ಘಟಕಗಳನ್ನು ಅಳವಡಿಕೆ ಮಾಡಲಾಗಿದೆ. ಅದರಲ್ಲಿ 219 ಘಟಕಗಳು ಶುದ್ಧ ನೀರು ಕೊಡುವುದನ್ನೇ ನಿಲ್ಲಿಸಿ, ತಾವೇ ನೀರಿಗಾಗಿ ಬಾಯಾರಿವೆ. ಕಾರ್ಯ ನಿರ್ವಹಿಸುತ್ತಾ ಶುದ್ಧ ನೀರು ಪೂರೈಸುತ್ತಿರುವುದು 252 ಘಟಕಗಳು.</p>.<p>14 ಘಟಕಗಳು ಜಲ ಮೂಲದ ಸಮಸ್ಯೆಗಳಿಂದ ಉಪಯೋಗಕ್ಕೆ ಬರುತ್ತಿಲ್ಲ. ಒಂದು ಘಟಕಕ್ಕೆ ವಿದ್ಯುತ್ ಸಮಸ್ಯೆ ಇದ್ದರೆ 91 ಘಟಕಗಳಿಗೆ ಏಜೆನ್ಸಿ ಅಡ್ಡಿಯಾಗಿದೆ. ನಿರ್ವಹಣೆಯ ಕೊರತೆಗೆ 41 ಘಟಕಗಳು ಹಳ್ಳ ಹಿಡಿದರೆ, ಇತರೆ ಕಾರಣಗಳಿಂದಾಗಿ 32 ಆರ್ಒ ಪ್ಲಾಂಟ್ಗಳು ಕಾರ್ಯ ನಿರ್ವಹಿಸುತ್ತಿಲ್ಲ ಎನ್ನುತ್ತಿವೆ ಇಲಾಖೆಯ ಅಂಕಿಅಂಶಗಳು.</p>.<p>ತಾಂತ್ರಿಕ, ಆಡಳಿತಾತ್ಮಕದಂತಹ ಸಮಸ್ಯೆಯಿಂದಾಗಿ ಆರ್ಒ ಘಟಕಗಳು ಬಳಕೆಯಾಗದೆ ತುಕ್ಕು ಹಿಡಿಯುತ್ತಿವೆ. ಪ್ರತಿ ಬಾರಿ ಬೇಸಿಗೆ ಬಂದಾಗ ಮಾತ್ರವೇ ಆರ್ಒ ಪ್ಲಾಂಟ್ಗಳು ನೆನಪಾಗುತ್ತವೆ. ದುರಸ್ತಿ, ನಿರ್ವಹಣೆಗಾಗಿ ಲಕ್ಷಾಂತರ ರೂಪಾಯಿ ಸುರಿಯಲಾಗುತ್ತದೆ. ಆದರೂ ಶುದ್ಧ ಕುಡಿಯುವ ನೀರಿಗಾಗಿ ಹಳ್ಳಿಗರ ತತ್ವಾರ ಪಡುವುದು ತಪ್ಪುತ್ತಿಲ್ಲ. ಶಾಶ್ವತ ಪರಿಹಾರವೂ ಕಂಡುಕೊಳ್ಳಲು ಆಗುತ್ತಿಲ್ಲ ಎನ್ನುತ್ತಾರೆ ಶುದ್ಧ ಕುಡಿಯುವ ನೀರು ವಂಚಿತ ಗ್ರಾಮಸ್ಥರು.</p>.<p>‘ವಡಗೇರಾ ತಾಲ್ಲೂಕಿನ ತಡಿಬಿಡಿ ಗ್ರಾಮದ ಆರ್ಒ ಘಟಕ ಕೆಟ್ಟು ತಿಂಗಳುಗಳೇ ಕಳೆದರೂ ದುರಸ್ತಿಯಾಗಿಲ್ಲ. ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ದುರಸ್ತಿ ಮಾಡದೆ ನಿಷ್ಕಾಳಜಿ ಮುಂದುವರಿಸಿದರೆ ಪ್ರತಿಭಟನೆ ನಡೆಸಲಾಗುವುದು’ ಎನ್ನುತ್ತಾರೆ ವಿಷ್ಣ ಸೇನಾ ಸಮಿತಿಯ ಜಿಲ್ಲಾಧ್ಯಕ್ಷ ರವಿಕುಮಾರ ದೇವಮನಿ.</p>.<p>ಪೂರಕ ಮಾಹಿತಿ: ಅಶೋಕ ಸಾಲವಾಡಗಿ, ವಾಟ್ಕರ್ ನಾಮದೇವ, ಟಿ.ನಾಗೇಂದ್ರ, ಭೀಮಶೇನರಾವ್ ಕುಲಕರ್ಣಿ.</p>.<p> <strong>‘ದುರಸ್ತಿಗೆ ₹ 1.21 ಕೋಟಿ ಬಿಡುಗಡೆ’</strong></p><p> ‘ಜಿಲ್ಲೆಯಲ್ಲಿ ಆರ್ಒ ಘಟಕಗಳ ವಾರು ಸರ್ವೆ ಮಾಡಿದ್ದು ದುರಸ್ತಿಗಾಗಿ ₹ 1.21 ಕೋಟಿ ಬಿಡುಗಡೆಯಾಗಿದೆ. ಅಗತ್ಯ ಇರುವ ಹಾಗೂ ಒಂದೇ ಗ್ರಾಮದಲ್ಲಿ ಎರಡ್ಮೂರು ಘಟಕಗಳು ಇರುವಲ್ಲಿ ಒಂದನ್ನು ಆಯ್ಕೆ ಮಾಡಿ ದುರಸ್ತಿ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಪ್ರಭಾರ ಇಇ ಬಸವರಾಜ ಐರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು. ‘2015–16ರಲ್ಲಿ ನಿರ್ಮಾಣ ಮಾಡಲಾದ ಘಟಕಗಳ ಪೈಕಿ ಕೆಲವು ತಾತ್ಕಾಲಿಕ ಮತ್ತೆ ಕೆಲವು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ಇದುವರೆಗೂ ಆರ್ಒ ಪ್ಲಾಂಟ್ಗಳ ಮೆಂಬರೇನ್ ಬದಲಾವಣೆಯೇ ಮಾಡಿಲ್ಲ. ಹೀಗಾಗಿ ಕೆಟ್ಟು ನಿಂತವುಗಳನ್ನು ದುರಸ್ತಿ ಮಾಡಿ ಎಲ್ಲರಿಗೂ ನೀರು ಕೊಡುವ ವ್ಯವಸ್ಥೆ ಮಾಡಲಾಗುವುದು. ದುರಸ್ತಿಗೆ ಒಂದೊಂದು ಘಟಕಕ್ಕೆ ₹ 1 ಲಕ್ಷದಿಂದ ₹ 1.50 ಲಕ್ಷ ತಗುಲಬಹುದು’ ಎಂದು ಹೇಳುತ್ತಾರೆ. </p>.<p><strong>ಸುರಪುರ; 51 ಘಟಕಗಳಿಗೆ ಬೀಗ</strong></p><p><strong> ಸುರಪುರ:</strong> ತಾಲ್ಲೂಕಿನ 111 ಆರ್ಒ ಘಟಕಗಳ ಪೈಕಿ ನಾನಾ ಕಾರಣಗಳಿಂದಾಗಿ 51 ಘಟಕಗಳು ಸ್ಥಗಿತಗೊಂಡಿವೆ. ಬೇಸಿಗೆ ಆರಂಭವಾಗಿದ್ದು ನೀರಿನ ಸಮಸ್ಯೆ ಉಲ್ಬಣವಾಗುವ ಮೊದಲೇ ದುರಸ್ತಿ ಕಾರ್ಯ ಕೈಗೊಳ್ಳಬೇಕಿದೆ. ಕಳೆದ ವರ್ಷ ತೀವ್ರ ನೀರಿನ ಸಮಸ್ಯೆ ಎದುರಿಸಿದ್ದ ಗುತ್ತಿಬಸವೇಶ್ವರ ಮತ್ತು ಬೇವಿನಾಳ ಎಸ್.ಕೆ. ಗ್ರಾಮಕ್ಕೆ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಸಮಸ್ಯಾತ್ಮಕ ಗ್ರಾಮಗಳಾದ ಯಕ್ತಾಪುರ ತಳ್ಳಳ್ಳಿ (ಬಿ) ಆಶ್ರಯ ಕಾಲೊನಿ ಹೂವಿನಳ್ಳಿ ಐನಾಪುರ ಗ್ರಾಮಗಳಿಗೂ ಪರಿಹಾರ ಕಲ್ಪಿಸಬೇಕಿದೆ ಎನ್ನುತ್ತಾರೆ ಗ್ರಾಮಸ್ಥರು. ದೇವಪುರ ಗ್ರಾಮದ ಘಟಕ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಜಿಲ್ಲೆಯಲ್ಲಿ ಉತ್ತಮ ಆರ್ಒ ಘಟಕ ಎಂಬ ಹಿರಿಮೆಗೆ ಪಾತ್ರವಾಗಿದೆ. ಸ್ಥಗಿತಗೊಂಡ ಘಟಕಗಳನ್ನು ಶೀಘ್ರದಲ್ಲಿ ದುರಸ್ತಿ ಮಾಡಬೇಕಿದೆ.</p>.<p><strong>ದುರಸ್ತಿ ಹೆಸರಿನಲ್ಲಿ ಹಣ ಬಿಡುಗಡೆ </strong></p><p><strong>ಶಹಾಪುರ:</strong> ತಾಲ್ಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಹಾಗೂ ದುರಸ್ತಿಗೆ ಮಾಡಿದಷ್ಟು ಕಾಳಜಿ ನೀರು ಕೊಡುವಲ್ಲಿ ಸಿಬ್ಬಂದಿ ವಿಫಲರಾಗಿದ್ದಾರೆ ಎಂದು ಆರೋಪವಿದೆ. ‘ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿನ ಘಟಕಗಳು ಬಾಗಿಲು ಮುಚ್ಚಿವೆ. ಆದರೆ ಪ್ರತಿ ವರ್ಷ ದುರಸ್ತಿ ಹೆಸರಿನಲ್ಲಿ ಹಣ ಬಿಡುಗಡೆಯಾಗುತ್ತಲಿದೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಭೀಮರಾಯ ಬಾರಿಗಿಡ. ಗ್ರಾಮೀಣ ಭಾಗದ ಆರ್ಒ ಘಟಕ ಹಾಗೂ ವಿದ್ಯುತ್ ನಡುವೆ ಕರಳು ಬಳ್ಳಿಯ ಸಮಸ್ಯೆ ಇದೆ. ಘಟಕ ಸ್ಥಾಪಿಸಿದಲ್ಲಿ ಬೇಸಿಗೆಯಲ್ಲಿ ಕೊಳವೆ ಬಾವಿಯ ನೀರು ಬತ್ತಿ ಹೋಗುತ್ತವೆ. ಅನಿವಾರ್ಯವಾಗಿ ಘಟಕಕ್ಕೆ ಬೀಗ ಹಾಕಲಾಗುತ್ತದೆ. ಇದು ಹಲವು ವರ್ಷಗಳಿಂದ ನಡೆದುಕೊಂಡ ಬರುತ್ತಿದೆ. ಇದರ ಪರಿಹಾರಕ್ಕೆ ಯಾರು ಮುಂದಾಗುತ್ತಿಲ್ಲ ಎಂಬ ದೂರಿದೆ. ‘ನಗರದಲ್ಲಿ ನಗರಸಭೆ ಅಧೀನದಲ್ಲಿ 6 ಹಾಗೂ ಖಾಸಗಿ ವ್ಯಕ್ತಿಗಳಿಂದ ಸ್ಥಾಪಿಸಿದ 20 ಆರ್ಒ ಪ್ಲಾಂಟ್ ಇವೆ. ಖಾಸಗಿ ಕಂಪನಿಯವರು ಪ್ಲಾಸ್ಟಿಕ್ ಬಾಟಲ್ನಲ್ಲಿ ಮಾರಾಟ ಮಾಡುತ್ತಾರೆ. ಹೆಸರಿಗೆ ಅಷ್ಟೇ ಐಎಸ್ಐ ಲೇಬಲ್ ಇರುತ್ತದೆ. ಗುಣಮಟ್ಟದ ನೀರು ಇರುವುದಿಲ್ಲ. ಬಿಸಿಲಿನ ದಾಹ ನೀಗಿಸಿಕೊಳ್ಳಲು ಬಾಟಲಿ ನೀರು ಕುಡಿದು ಅದನ್ನು ಬಿಸಾಕಿ ಎಲ್ಲೆಂದರಲ್ಲಿ ಎಸೆಯುವುದು ಸಾಮಾನ್ಯವಾಗಿದೆ’ ಎನ್ನುತ್ತಾರೆ ಪರಿಸರ ಎಂಜಿನಿಯರ್ ಹರೀಶ ಸಜ್ಜನಶೆಟ್ಟಿ.</p>.<p><strong>ನಿರ್ವಹಣೆಯ ಕೊರತೆ</strong></p><p><strong> ಹುಣಸಗಿ:</strong> ತಾಲ್ಲೂಕಿನ 68 ಆರ್ಒ ಘಟಕಗಳಲ್ಲಿ 32 ಮಾತ್ರ ಸುಸ್ಥಿಯಲ್ಲಿದ್ದು ಕಾರ್ಯನಿರ್ವಹಿಸುತ್ತಿದ್ದು ಉಳಿದವು ಸ್ಥಗಿತವಾಗಿವೆ ಎನ್ನುತ್ತವೆ ತಾಲ್ಲೂಕು ಪಂಚಾಯಿತಿ ಮೂಲಗಳು. ಬೇಸಿಗೆ ಆರಂಭಕ್ಕೂ ಮುನ್ನವೇ ಕೆಲವೊಂದು ಗ್ರಾಮಗಳಲ್ಲಿ ಜಲಮೂಲಗಳ ಕೊರತೆ ಹಾಗೂ ದುರಸ್ತಿಯ ಕಾರಣದಿಂದಾಗಿ ಆರ್ಒ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ಹೆಬ್ಬಾಳ (ಕೆ) ಕನಗಂಡನಹಳ್ಳಿ ರಾಜವಾಳ ತಾಂಡಾ ಸೇರಿದಂತೆ ಇತರೆಡೆ ನೆಪ ಮಾತ್ರಕ್ಕೆ ಘಟಕಗಳಿವೆ. ಸರಿಯಾಗಿ ನೀರು ಬರುತ್ತಿಲ್ಲ ಎಂದು ದೂರುತ್ತಾರೆ ನಿಂಗು ಪಾಟೀಲ ಬಸನಗೌಡ ಪಾಟೀಲ. ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಆದ್ಯತೆ ನೀಡುತ್ತದೆ. ಆದರೆ ಅವುಗಳ ನಿರ್ವಹಣೆಯಲ್ಲಿ ಅಧಿಕಾರಿಗಳು ಸರಿಯಾಗಿ ಗಮನಹರಿಸುವುದಿಲ್ಲ ಎಂಬ ಮಾತುಗಳು ಗ್ರಾಮೀಣ ಭಾಗದಲ್ಲಿವೆ.</p> .<div><blockquote>ಒಂದು ಘಟಕದ ದುರಸ್ತಿಗೆ ₹ 50 ಸಾವಿರದಿಂದ ₹ 1.5 ಲಕ್ಷ ಖರ್ಚು ಮಾಡಲು ಅವಕಾಶವಿದೆ. ಅನುದಾನ ಬಂದಿದ್ದು ದುರಸ್ತಿ ಕಾರ್ಯ ಕೈಗೊಂಡಿದ್ದೇವೆ </blockquote><span class="attribution">–ಎಚ್.ಡಿ. ಪಾಟೀಲ, ಎಇಇ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಉಪ ವಿಭಾಗ ಸುರಪುರ</span></div>.<div><blockquote>ಹುಣಸಗಿ ತಾಲ್ಲೂಕಿನಲ್ಲಿ ಸುಸ್ಥಿತಿ ಹಾಗೂ ದುರಸ್ತಿಗೊಳಿಸಲು ಸಾಧ್ಯವಿರುವ ಎಲ್ಲ ಘಟಕಗಳನ್ನು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು </blockquote><span class="attribution">–ಬಸಣ್ಣ ನಾಯಕ್, ತಾ.ಪಂ. ಇಒ ಹುಣಸಗಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>