ಗ್ರಾಮದಲ್ಲಿ 17 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಮುಖ್ಯ ಶಿಕ್ಷಕ ಶರಣಪ್ಪ ದಂಪತಿಗೆ ಗ್ರಾಮದ ಹಿರಿಯರು, ಹಳೆ ವಿದ್ಯಾರ್ಥಿಗಳು, ಯುವಕರು ಸೇರಿ ಶಾಲು ಹೊದಿಸಿ, ಫಲಪುಷ್ಪ ನೀಡಿ, ಭವ್ಯ ರಥದಲ್ಲಿ ಕೂರಿಸಿ ವಾದ್ಯ ವೃಂದಗಳೊಂದಿಗೆ ಮೆರವಣಿಗೆ ನಡೆಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶರಣಪ್ಪ, ‘ನಾನು ಮುಖ್ಯಶಿಕ್ಷಕನಾಗಿ ಸೇವೆಗೆ ನಿವೃತ್ತಿ ಹೊಂದಿದ್ದೇನೆ ಹೊರತು, ಗ್ರಾಮದ ಮಕ್ಕಳ ಮನಸ್ಸಿನಿಂದ ನಿವೃತ್ತಿಯಾಗಲು ಕನಸಿನಲ್ಲೂ ಬಯಸುವುದಿಲ್ಲ’ ಎಂದರು.