ನದಿ ತಟದ ಛಾಯಾ ಭಗವತಿ ಕ್ಷೇತ್ರಕ್ಕೆ ವಿವಿಧ ಜಿಲ್ಲೆಗಳಿಂದ ವಾಹನಗಳು, ಬೈಕ್ಗಳ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ನದಿಯಲ್ಲಿ ಪುಣ್ಯ ಸ್ನಾನಮಾಡಿ ಕುಟುಂಬ, ಸ್ನೇಹಿತರೊಟ್ಟಿಗೆ ಮನೆಯಲ್ಲಿ ತಯಾರಿಸಿ ತಂದಿದ್ದ ಶೇಂಗಾ ಹೋಳಿಗೆ ತುಪ್ಪ, ಎಳ್ಳಚ್ಚಿದ ಸಜ್ಜೆ ರೊಟ್ಟೆ, ಕಡಕ್ ಜೋಳದ ರೊಟ್ಟಿ, ಚಪಾತಿ, ಹಸಿಮೆಣಸಿನ ಚಟ್ನಿ, ಎಣ್ಣಿಗಾಯಿ ಬದನೆಕಾಯಿ, ಜುಣುಕಾ, ಉಸಳಿ(ಮೊಳಕೆ) ಕಾಳು ಪಲ್ಲೆ, ಸೆಂಗಾ ಹಿಂಡಿ, ಮೊಸರು, ಚಿತ್ರನ್ನ, ಹಸಿ ತರಕಾರಿ, ಕಬ್ಬು, ಹಸಿಕಡಲೆ ಸೇರಿದಂತೆ ಬಜ್ಜಿ ಕುರಕುಲ ತಿಂಡಿಗಳನ್ನು ನದಿ ತೀರದ ನಿಸರ್ಗದ ಮಡಿಲಲ್ಲಿ ಕುಳಿತು ಸಾಮೂಹಿಕ ಭೋಜನ ಮಾಡಿ ಹಬ್ಬವನ್ನು
ಸಂಭ್ರಮಿಸಿದರು.