‘ಬಿಜೆಪಿ ಕೇವಲ ಹಿಂದೂತ್ವ ಅಜೆಂಡಾವನ್ನು ಹಿಡಿದುಕೊಂಡು ಚುನಾವಣೆ ಎದುರಿಸುತ್ತಿದೆ. ಆದರೆ, ಕಾಂಗ್ರೆಸ್ ಸರ್ಕಾರದ್ದು ಅಭಿವೃದ್ಧಿಯೇ ಅಜೆಂಡವಾಗಿದೆ. ಶಾಶ್ವತ ನೀರಾವರಿ, ಕುಡಿಯುವ ನೀರು, ಉತ್ತಮ ರಸ್ತೆ, ಉದ್ಯೋಗ ಸೃಷ್ಟಿ ಹೀಗೆ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿ ದೇಶವನ್ನು ಮುಂಚೂಣಿಗೆ ತರಲು ಚಿಂತಿಸುತ್ತಿದೆ. ಹಾಗಾಗಿ, ಜನರ ಬಳಿ ಅಭಿವೃದ್ಧಿಯನ್ನೇ ಮುಂದಿಟ್ಟುಕೊಂಡರು ಮತ ಕೇಳಲಿದ್ದೇವೆ’ ಎಂದು ಹೇಳಿದರು.