ಶಸ್ತ್ರಾಸ್ತ್ರ ತರಬೇತಿ ನಡೆಸುತ್ತಿರುವ ಬಗ್ಗೆ ರಾಜ್ಯ ಗುಪ್ತಚರ ಇಲಾಖೆ ಇಲ್ಲವೆ ಗೃಹ ಇಲಾಖೆಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ ಅವರು, ಅದೇ ಮುಸ್ಲಿಂ ಸಮುದಾಯದವರು ತರಬೇತಿ ನೀಡಿದ್ದರೆ ಮಾಧ್ಯಮದವರು ಪುಂಖಾನುಪುಂಖವಾಗಿ ಚೀರಾಡುತ್ತಿದ್ದರು. ಇಂತಹ ಭಯೋತ್ಪಾದನೆಯ ಕೃತ್ಯಕ್ಕೆ ಕುಮ್ಮಕ್ಕು ನೀಡುವ ಬಜರಂಗದಳವನ್ನು ನಿಷೇಧಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.