<p>ಶಹಾಪುರ: ‘ಅಧಿಕಾರದ ಅಮಲಿನಲ್ಲಿರುವ ಸರ್ಕಾರ ಮತ್ತು ಅಧಿಕಾರಿಗಳನ್ನು ಎಚ್ಚರಿಸುವ ಕಾಲ ಬಂದಿದೆ. ನಾವು ಸದಾ ಜನರ ಸಂಕಷ್ಟಗಳಿಗೆ ಧ್ವನಿಯಾಗಿ ನಿಲ್ಲಲು ಸಿದ್ಧವಿದ್ದೇವೆ. ಜನರ ಸಮಸ್ಯೆಗಳಿಗೆ ಹೋರಾಟ ಮಾಡದ ಹೊರತು ಪರಿಹಾರ ದೊರಕದು’ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶಗೌಡ ಮುದ್ನಾಳ್ ತಿಳಿಸಿದರು.</p>.<p>ಪಟ್ಟಣದ ಆದಿಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಯಾದಗಿರಿ ವಿಧಾನಸಭಾ ಮತಕ್ಷೇತ್ರದ ದೋರನಹಳ್ಳಿ ಹೋಬಳಿ, ಹಯ್ಯಾಳ, ನಾಯ್ಕಲ್ ಜಿಪಂ ವ್ಯಾಪ್ತಿಯ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.</p>.<p>ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಪರಶುರಾಮ ಕುರಕುಂದಿ ಮಾತನಾಡಿ, ‘ಸರ್ಕಾರ ಮತ್ತು ಅಧಿಕಾರಿಗಳಿಗೆ ಹೋರಾಟದ ಬಿಸಿ ಮುಟ್ಟಿಸದಿದ್ದರೆ ಜನರ ಸಮಸ್ಯೆಗಳಿಗೆ ಪರಿಹಾರ ಸಿಗದು’ ಎಂದರು.</p>.<p>ಮುಖಂಡರಲ್ಲಿ ಗೊಲ್ಲಾಳಪ್ಪ ಗೋಲಗೇರಿ, ಸಾಯಬಣ್ಣ ಹಲಗಿ, ನಾಗಶೆಟ್ಟಿ ಸಾಹುಕಾರ, ಕಲ್ಲಪ್ಪ ಖಾನಾಪುರ, ಶಂಕ್ರಯ್ಯಸ್ವಾಮಿ, ಸಿದ್ದಣ್ಣ, ಇಂದ್ರಜಿತ್, ರಾಜು ಗುತ್ತೇದಾರ, ಮಲ್ಲರಡ್ಡಿ ದೊರೆ, ಸುರೇಶ ಸಾಹುಕಾರ, ಮಲ್ಲಿನಾಥ ಮಲಗೊಂಡ, ರಂಗಪ್ಪ ದೊರೆ, ಲಿಂಗರಾಜ ಸಾಹುಕಾರ, ವಾಲ್ಮೀಕಿ ನಾಯಕ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260523-30-611463921</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಹಾಪುರ: ‘ಅಧಿಕಾರದ ಅಮಲಿನಲ್ಲಿರುವ ಸರ್ಕಾರ ಮತ್ತು ಅಧಿಕಾರಿಗಳನ್ನು ಎಚ್ಚರಿಸುವ ಕಾಲ ಬಂದಿದೆ. ನಾವು ಸದಾ ಜನರ ಸಂಕಷ್ಟಗಳಿಗೆ ಧ್ವನಿಯಾಗಿ ನಿಲ್ಲಲು ಸಿದ್ಧವಿದ್ದೇವೆ. ಜನರ ಸಮಸ್ಯೆಗಳಿಗೆ ಹೋರಾಟ ಮಾಡದ ಹೊರತು ಪರಿಹಾರ ದೊರಕದು’ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶಗೌಡ ಮುದ್ನಾಳ್ ತಿಳಿಸಿದರು.</p>.<p>ಪಟ್ಟಣದ ಆದಿಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಯಾದಗಿರಿ ವಿಧಾನಸಭಾ ಮತಕ್ಷೇತ್ರದ ದೋರನಹಳ್ಳಿ ಹೋಬಳಿ, ಹಯ್ಯಾಳ, ನಾಯ್ಕಲ್ ಜಿಪಂ ವ್ಯಾಪ್ತಿಯ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.</p>.<p>ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಪರಶುರಾಮ ಕುರಕುಂದಿ ಮಾತನಾಡಿ, ‘ಸರ್ಕಾರ ಮತ್ತು ಅಧಿಕಾರಿಗಳಿಗೆ ಹೋರಾಟದ ಬಿಸಿ ಮುಟ್ಟಿಸದಿದ್ದರೆ ಜನರ ಸಮಸ್ಯೆಗಳಿಗೆ ಪರಿಹಾರ ಸಿಗದು’ ಎಂದರು.</p>.<p>ಮುಖಂಡರಲ್ಲಿ ಗೊಲ್ಲಾಳಪ್ಪ ಗೋಲಗೇರಿ, ಸಾಯಬಣ್ಣ ಹಲಗಿ, ನಾಗಶೆಟ್ಟಿ ಸಾಹುಕಾರ, ಕಲ್ಲಪ್ಪ ಖಾನಾಪುರ, ಶಂಕ್ರಯ್ಯಸ್ವಾಮಿ, ಸಿದ್ದಣ್ಣ, ಇಂದ್ರಜಿತ್, ರಾಜು ಗುತ್ತೇದಾರ, ಮಲ್ಲರಡ್ಡಿ ದೊರೆ, ಸುರೇಶ ಸಾಹುಕಾರ, ಮಲ್ಲಿನಾಥ ಮಲಗೊಂಡ, ರಂಗಪ್ಪ ದೊರೆ, ಲಿಂಗರಾಜ ಸಾಹುಕಾರ, ವಾಲ್ಮೀಕಿ ನಾಯಕ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260523-30-611463921</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>