ವಿಶಾಲವಾದ ಕೆರೆಯ ಅಂಗಳವಿದ್ದರು ಸಹ ನೆರಳಿನ ಆಸರೆ ಇಲ್ಲ. ಸಾಕಷ್ಟು ಗಿಡಗಳನ್ನು ನೆಟ್ಟು ಬೆಳೆಸಲು ಅವಕಾಶವಿದ್ದರೂ ಅದರ ನಿಷ್ಕಾಳಜಿ ಫಲವಾಗಿ ಈಗ ಸಂಕಷ್ಟ ಎದುರಿಸುವಂತಾಗಿದೆ. ನಾರಾಯಣಪೂರ ಎಡದಂಡೆ ಕಾಲುವೆ ಮೂಲಕ ಕೆರೆಗೆ ನೀರು ತುಂಬಿಸಲು ಅವಕಾಶವಿದ್ದರೂ ಸಹ ಯಾರು ಗಮನ ಹರಿಸಿಲ್ಲ. ಜಾತ್ರೆಗೆ ತಂದಿರುವ ಹೋರಿಗಳಿಗೆ ನೀರು ಕುಡಿಸಲು ಸಮರ್ಪಕ ವ್ಯವಸ್ಥೆ ಇಲ್ಲ ಎಂದು ರೈತ ಮಾನಪ್ಪ ಆರೋಪಿಸುತ್ತಾರೆ.