<p>ಕೆಂಭಾವಿ: ಶಹಾಪುರ ಮತಕ್ಷೇತ್ರದ ಪ್ರತಿ ಗ್ರಾಮಕ್ಕೂ ಮೂಲಸೌಕರ್ಯ ಒದಗಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಶರಣಬಸಪ್ಪ ದರ್ಶನಾಪುರ ಹೇಳಿದರು.</p>.<p>ಪಟ್ಟಣದ ಸಮೀಪ ಹೆಗ್ಗನದೊಡ್ಡಿ ಗ್ರಾಮದಲ್ಲಿ ಶುಕ್ರವಾರ ₹60 ಲಕ್ಷ ವೆಚ್ಚದ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.</p>.<p>‘ಕೆಂಭಾವಿಯ ಹಿರೇಮಠಕ್ಕೆ ₹15 ಲಕ್ಷ, ನಗನೂರ ಸುಗೂರೇಶ್ವರ ಮಠಕ್ಕೆ ₹15 ಲಕ್ಷ ಹಾಗೂ ಪರಸನಹಳ್ಳಿ ವೀರಭದ್ರೇಶ್ವರ ದೇವಸ್ಥಾನಕ್ಕೆ ₹15 ಲಕ್ಷ, ಕೆಂಭಾವಿ ಪ್ರಮೋದ ಮಂದಿರಕ್ಕೆ ₹10 ಲಕ್ಷ ಅನುದಾನ ಒದಗಿಸಲಾಗಿದೆ. ತಿಪ್ಪನೆಟಗಿ ಗ್ರಾಮದಲ್ಲಿ ಸಿ.ಸಿ ರಸ್ತೆಗೆ ₹50 ಲಕ್ಷ, ಮಾಲಗತ್ತಿ ಗ್ರಾಮದ ಸಿ.ಸಿ ರಸ್ತೆಗೆ ₹50 ಲಕ್ಷ, ಗೋಡ್ರಿಹಾಳ ಗ್ರಾಮದ ಸಿ.ಸಿ ರಸ್ತೆಗೆ ₹80 ಲಕ್ಷ ಹಾಗೂ ನೀರಿಗಾಗಿ ₹10 ಲಕ್ಷ ಅನುದಾನ ನೀಡಲಾಗಿದೆ’ ಎಂದರು.</p>.<p>‘ಕರಡಕಲ್ ಗ್ರಾಮದ ಸಿ.ಸಿ ರಸ್ತೆಗೆ ₹63 ಲಕ್ಷ, ಕಿರದಳ್ಳಿ ಗ್ರಾಮದ ಸಿ.ಸಿ ರಸ್ತೆಗೆ ₹1 ಕೋಟಿ (ಸಿಎಂಐಡಿ), ಪರಸನಹಳ್ಳಿಯ ಎರಡು ವಾರ್ಡ್ಗಳಿಗೆ ₹50 ಲಕ್ಷ ನೀಡಲಾಗಿದೆ. ಕೆಂಭಾವಿಯಲ್ಲಿ ಸಿ.ಸಿ ರಸ್ತೆ ನಿರ್ಮಾಕ್ಕೆ ವಿಶೇಷ ಅನುದಾನ ₹4 ಕೋಟಿ, ಪೊಲೀಸ್ ವಸತಿ ಗೃಹಕ್ಕಾಗಿ ₹3 ಕೋಟಿ ಹಾಗೂ ಮೌಲಾನಾ ಅಬ್ದುಲಗಗ ಕಲಾಂ ಆಜಾದ ಶಾಲೆಗೆ ₹5 ಕೋಟಿ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.</p>.<p>ಈ ಸಂದರ್ಭದಲ್ಲಿ ಶಿವಮಾಂತ ಚಂದಾಪುರ, ಬಸನಗೌಡ ಹೊಸಮನಿ, ಬಾಪುಗೌಡ ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಚಿಂಚೋಳಿ, ಶಿವರಾಜ ಬೂದುರ, ಅಮೀನರೆಡ್ಡಿ ಪಾಟೀಲ ಕಿರದಳ್ಳಿ, ಎಸ್ಕೆ ಕಲೀಮ ಸೇರಿದಂತೆ ಅನೇಕರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260418-30-2058356799</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೆಂಭಾವಿ: ಶಹಾಪುರ ಮತಕ್ಷೇತ್ರದ ಪ್ರತಿ ಗ್ರಾಮಕ್ಕೂ ಮೂಲಸೌಕರ್ಯ ಒದಗಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಶರಣಬಸಪ್ಪ ದರ್ಶನಾಪುರ ಹೇಳಿದರು.</p>.<p>ಪಟ್ಟಣದ ಸಮೀಪ ಹೆಗ್ಗನದೊಡ್ಡಿ ಗ್ರಾಮದಲ್ಲಿ ಶುಕ್ರವಾರ ₹60 ಲಕ್ಷ ವೆಚ್ಚದ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.</p>.<p>‘ಕೆಂಭಾವಿಯ ಹಿರೇಮಠಕ್ಕೆ ₹15 ಲಕ್ಷ, ನಗನೂರ ಸುಗೂರೇಶ್ವರ ಮಠಕ್ಕೆ ₹15 ಲಕ್ಷ ಹಾಗೂ ಪರಸನಹಳ್ಳಿ ವೀರಭದ್ರೇಶ್ವರ ದೇವಸ್ಥಾನಕ್ಕೆ ₹15 ಲಕ್ಷ, ಕೆಂಭಾವಿ ಪ್ರಮೋದ ಮಂದಿರಕ್ಕೆ ₹10 ಲಕ್ಷ ಅನುದಾನ ಒದಗಿಸಲಾಗಿದೆ. ತಿಪ್ಪನೆಟಗಿ ಗ್ರಾಮದಲ್ಲಿ ಸಿ.ಸಿ ರಸ್ತೆಗೆ ₹50 ಲಕ್ಷ, ಮಾಲಗತ್ತಿ ಗ್ರಾಮದ ಸಿ.ಸಿ ರಸ್ತೆಗೆ ₹50 ಲಕ್ಷ, ಗೋಡ್ರಿಹಾಳ ಗ್ರಾಮದ ಸಿ.ಸಿ ರಸ್ತೆಗೆ ₹80 ಲಕ್ಷ ಹಾಗೂ ನೀರಿಗಾಗಿ ₹10 ಲಕ್ಷ ಅನುದಾನ ನೀಡಲಾಗಿದೆ’ ಎಂದರು.</p>.<p>‘ಕರಡಕಲ್ ಗ್ರಾಮದ ಸಿ.ಸಿ ರಸ್ತೆಗೆ ₹63 ಲಕ್ಷ, ಕಿರದಳ್ಳಿ ಗ್ರಾಮದ ಸಿ.ಸಿ ರಸ್ತೆಗೆ ₹1 ಕೋಟಿ (ಸಿಎಂಐಡಿ), ಪರಸನಹಳ್ಳಿಯ ಎರಡು ವಾರ್ಡ್ಗಳಿಗೆ ₹50 ಲಕ್ಷ ನೀಡಲಾಗಿದೆ. ಕೆಂಭಾವಿಯಲ್ಲಿ ಸಿ.ಸಿ ರಸ್ತೆ ನಿರ್ಮಾಕ್ಕೆ ವಿಶೇಷ ಅನುದಾನ ₹4 ಕೋಟಿ, ಪೊಲೀಸ್ ವಸತಿ ಗೃಹಕ್ಕಾಗಿ ₹3 ಕೋಟಿ ಹಾಗೂ ಮೌಲಾನಾ ಅಬ್ದುಲಗಗ ಕಲಾಂ ಆಜಾದ ಶಾಲೆಗೆ ₹5 ಕೋಟಿ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.</p>.<p>ಈ ಸಂದರ್ಭದಲ್ಲಿ ಶಿವಮಾಂತ ಚಂದಾಪುರ, ಬಸನಗೌಡ ಹೊಸಮನಿ, ಬಾಪುಗೌಡ ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಚಿಂಚೋಳಿ, ಶಿವರಾಜ ಬೂದುರ, ಅಮೀನರೆಡ್ಡಿ ಪಾಟೀಲ ಕಿರದಳ್ಳಿ, ಎಸ್ಕೆ ಕಲೀಮ ಸೇರಿದಂತೆ ಅನೇಕರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260418-30-2058356799</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>